Tuesday, August 3, 2010

ಮೈಲಾರಿ ಮತ್ತು ಬಾಳೆ ಹಣ್ಣಿನ್ನ ವೃತ್ತಾಂತ

ಸುಮಾರು ೧೨-೧೩ ವರುಷಗಳ ಹಿಂದಿನ ಮಾತು. ನಾನು ಪುತ್ತೂರು ಸಮೀಪದ ಒಂದು ಹುಡುಗರ ವಸತಿ-ಶಾಲೆಯಲ್ಲಿ ಒಂದನೇ ಪಿ.ಯು.ಸಿ ಓದುತ್ತಿದ್ದೆ. ತರಗತಿಯ ಸುಮಾರು ೬೦ ಹುಡುಗರನ್ನು ೧೫ ರೂಮಿನಲ್ಲಿ, ಒಂದು ರೂಮಿಗೆ ೪ ಹುಡುಗರ ಹಾಗೆ ವಿಂಗಡಿಸಿ ವಸತಿ ಕಲ್ಪಿಸಿದ್ದರು. ನನ್ನ ರೂಮಿನಲ್ಲಿ ನಾನು, ರಾಜಣ್ಣ, ನಿತಿನ, ಬಾಲಿ ಆಲಿಯಾಸ್ ಬಾಲಚಂದ್ರ ಇದ್ದೆವು. ಕಡಲು ಸೀಮೆಯ ಮಳೆಗಾಲ, ದೋ ಎಂದು ಮಳೆ ಸುರು ಆದರೆ, ಮಳೆಗಾಲ ಮುಗಿಯುವವರೆಗೂ ದಿನಂಪ್ರತಿ ಮಳೆ ಬೀಳುತ್ತಲೇ ಇರುತ್ತದೆ. ಹೀಗಿರುವಾಗ, ದಿನಂಪ್ರತಿ ಕಾಲೇಜು ಮುಗಿದ ಮೇಲೆ, ಮೆಸ್ಸಿನಲ್ಲಿ ತಿಂಡಿ-ಕಾಫಿ ಮುಗಿಸಿ, ಕೋಣೆಯಲ್ಲೇ ಇದ್ದು ಪಾಠಗಳನ್ನು ಓದಿಕೊಳ್ಳುವುದೋ, ಬಟ್ಟೆ ಒಗೆಯುವುದೋ, ಲ್ಯಾಬು-ರೆಕಾರ್ಡು ಬರೆದು ಮುಗಿಸುವುದೋ, ಇಲ್ಲ ಸುಮ್ಮನೆ ಹರಟೆ ಹೊಡೆಯುತ್ತ ಕೂರುವುದೋ, ಮಾಡುತ್ತಾ ಕೂರುತ್ತಿದ್ದೆವು. ನಮ್ಮ ಕೋಣೆಯ ಹೊರಗೆ ಒಂದು ಸಣ್ಣ ಗುಡ್ಡ, ಆ ಗುಡ್ಡದ ಒಂದು ಕಡೆ ವಸತಿ-ಶಾಲೆಗೇ ಸೇರಿದ ಬಾಳೆಹಣ್ಣಿನ ತೋಟ, ಇನ್ನೊಂದು ಕಡೆ ನಮ್ಮ ಪ್ರಾರ್ಥನಾ ಮಂದಿರವು ಇತ್ತು. ದಿನವು ನಾವು ಹೀಗೆ ಓದುವ ಸಮಯ ಅಂದರೆ ಸಂಜೆಯ ಸುಮಾರು ೬:೩೦ - ೮:೦೦ ಗಂಟೆಯ ಸಮಯದಲ್ಲಿ ಎರಡು ಸಾರಿ ನಮ್ಮ ವಾರ್ಡೆನ್ನು ಬಂದು, ಹುಡುಗರು ಓದುತ್ತಿದಾರೂ, ಇಲ್ಲವೇ ಸುಮ್ಮನೆ ಕಾಲಹರಣ ಮಾಡುತ್ತಿದರೋ ಎಂದು ನೋಡಿ ಹೋಗುವುದು ವಾಡಿಕೆ. ನಮ್ಮ ವಾರ್ಡೆನ್ನಿಗೆ ಒಂದು ಕಾಲು ಊನವಾದ ಕಾರಣ, ಅವರು ಚಪ್ಪಲಿ ಕಾಲಿನಲ್ಲಿ ನಡೆಯುವಾಗ ಚರ-ಚರ ಎಂದು ಸದ್ದು ಬರುತ್ತಿತ್ತು. ಹೀಗಾಗಿ, ನಾವು ಬೇರೆ ಕೆಲಸದಲ್ಲಿ ಮಗ್ನರಾಗಿದ್ದರೂ, ವಾರ್ಡೆನ್ನು ಬರುವ ಸದ್ದು ಕೇಳಿ, ಬೇರೆ ಕೆಲಸಗಳನ್ನು ನಿಲ್ಲಿಸಿ ಪುಸ್ತಕ ಹಿಡಿದು ಕೂರುತ್ತಿದ್ದೆವು. ಹೀಗೆ ಒಂದು ದಿನ ಸಸ್ಯಶಾಸ್ತ್ರದಲ್ಲಿ ಬಾಳೆ ಹೂವಿನ ಬಗ್ಗೆ ಓದುತಿದ್ದ ಹಾಗೆ, ಬಾಳಿ - "ಮಗ, ಇಲ್ಲೇ ತೋಟದಲ್ಲಿ ಒಂದು ಬಾಳೆ ಹೂವು ತಂದರೆ ಇನ್ನು ವಿವರವಾಗಿ ಅಭ್ಯಾಸ ಮಾಡಬಹುದು" ಎಂದ. ಅಲ್ಲೇ ಇದ್ದ ರಾಜಣ್ಣ ನಿಧಾನವಾಗಿ ಎದ್ದು ಹೋಗಿ, ಒಂದು ಬಾಳೆ ಹೂವನ್ನು ತರುವ ಬದಲು ಒಂದು ಬಾಳೆ ಹಣ್ಣಿನ ಗೊನೆಯನ್ನೇ ಕೊಯ್ದು, ತನ್ನ ತವಲಿನಲ್ಲಿ ಮುಚ್ಚಿ ತಂದು, ಸ್ನಾನದ ಬಕೆಟ್ಟಿನಲ್ಲಿ ಮುಚ್ಚಿ ಬಚ್ಚಿಟ್ಟ. ನಮ್ಮೆಲ್ಲರಿಗೂ ಒಂದು ಕಡೆ ಬಾಳೆಹಣ್ಣಿನ ಹೂವು ಸಿಕ್ಕ ಖುಷಿಯಾದರೆ, ಅದರ ಜೊತೆ ಸಿಕ್ಕ ಹಣ್ಣು ಮತ್ತು ಅದು ನಮಗೆ ತರುವ ಅಪಾಯದ ಬಗ್ಗೆ ದಿಗಿಲಾಯಿತು. ಅದಕ್ಕಿಂತ ಮಿಗಿಲಾಗಿ ಅದು ಮೈಲಾರಿಯ ಕಣ್ಣಿಗೆ ಬಿದ್ದು , ಅವನು ಅದರ ಬಗ್ಗೆ ಹೋಗಿ ವಾರ್ದನ್ನಿನ್ನ ಕಿವಿ ಕಚ್ಚಿದರೆ ನಮ್ಮ ಕಥೆ ನಾಯಿಗಿಂತ ಕಡೆ ಆಗುವುದರಲ್ಲಿ ಎರಡು ಮಾತಿಲ್ಲ. ಆ ಕಾರಣದಿಂದ ರೂಮಿನಲ್ಲಿ ಇರುವ ಹೂತ್ತು ಮೈಲಾರಿಯ ಕಣ್ಣು ಹಣ್ಣಿನ ಮೇಲೆ ಬೀಳದ ಹಾಗೆ ನೋಡಿ ಕೊಳ್ಳುವ ಹೊಣೆಯನ್ನು ನಾನು, ಬಾಲಿ, ರಾಜಣ್ಣ ಹೊತ್ತು ಕೊಂಡೆವು. ನಿತಿನ ಹತ್ತಿರ ಒಂದು ಕಬ್ಬಿಣದ ಖಾಲಿ ಟ್ರಂಕು ಇತ್ತು, ಹಣ್ಣಿನ ಗೊನೆಯನ್ನು ಅದರಲ್ಲಿ ಜೋಪಾನವಾಗಿ ಇಟ್ಟೆವು, ಅದನ್ನು ನಾವು ನಾಲ್ಕು ಜನ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದೆವು. ದಿನವು ಊಟ ಮುಗಿದ ಮೇಲೆ ರೂಮಿಗೆ ಬಂದು, ನಾನು, ಬಾಲಿ, ನಿತಿನ, ರಾಜಣ್ಣ ೩-೪ ಬಾಳೆಹಣ್ಣನ್ನು ತಿನ್ನುತ್ತಿದೆವು. ಮೈಲಾರಿ ನಮ್ಮ ರೂಮಿನಲ್ಲಿ ಇರುವ ಹೊತ್ತು, ಗಂಧದಕಡ್ಡಿ ಹೊತ್ತಿಸಿ ಅವನ ನಾಯಿ ಮೂಗಿಗೆ ನಿತಿನನ ಟ್ರಂಕಿನಲ್ಲಿ ಇದ್ದ ಹಣ್ಣಿನ ವಾಸನೆ ಹತ್ತದ ಹಾಗೆ ನೋಡಿಕೊಳ್ಳುತ್ತಿದೆವು.

ಹೀಗೆ ಒಂದು ದಿನ, ನಾವು ನಾಲ್ಕು ಜನ, ಬೇಗ ರಾತ್ರಿಯ ಊಟ ಮುಗಿಸಿ, ರೂಮಿಗೆ ಬಂದೆವು. ಅವತ್ತಿನ ಊಟಕ್ಕೆ ಕೂಡ ಅದೇ ಅನ್ನ್ಹ , ಸಾರು, ಮೊಸರು, ಉಪ್ಪಿನಕಾಯಿ ತಿಂದು, ಬಾಳೆಹಣ್ಣು ತಿನ್ನುವ ತವಕದಲ್ಲಿ ಬಂದು, ನಿತಿನನ ಟ್ರಂಕು ತೆರೆದು, ಬಾಳೆಹಣ್ಣಿನ ಗೊನೆಯನ್ನು ಆಚೆ ತೆಗೆದು, ಗೊನೆಯಲ್ಲಿರುವ ಹಣ್ಣಿನ ಲೆಕ್ಕ ಹಾಕಿ - ಒಟ್ಟು ೧೬ ಬಾಲೆ ಹಣ್ಣು ಬಾಕಿ ಇರುವ ಗ್ಯಾರಂಟಿ ಮಾಡಿಕೊಂಡು ಇನ್ನೆನ್ನು ಎಲ್ಲರೂ ಬಾಲೆ ಹಣ್ಣು ತಿನ್ನಬೇಕು ಎನ್ನುವಾಗ, ರೂಮಿನ ಹೊರಗೆ ಚರ-ಚರ ಸದ್ದು ಕೇಳಿ ಬಂತು.ಒಮ್ಮೆಗೆ ಹೃದಯ ಬಾಯಿಂದ ನೆಲದ ಮೇಲೆ ಬಿದ್ದ ಹಾಗೆ ಹಾಗಾಯಿತು. ಎಲ್ಲರಿಗು ವಾರ್ದೇನು ರೂಮಿನ ಒಳಗೆ ಬಂದು ಬಾಳೆಹಣ್ಣಿನ ಜೊತೆಯಲ್ಲಿ ನಮ್ಮನ್ನು ಕಂಡರೆ ನಮ್ಮೆಲ್ಲರ ತಿಥಿ ಕಟ್ಟಿಟ್ಟ ಬುತ್ತಿ. ಹಣ್ಣನ್ನು ಟ್ರಂಕು ಸೇರಿಸುವ ಮೊದಲು, ನಮ್ಮಲ್ಲಿ ಯಾರಾದರು ವಾರ್ದನ್ನನ್ನು ರೂಮಿನ ಹೊರಗೆ ತಡೆ ಹಿಡಿಯಬೇಕು, ಅದಕ್ಕೆ ರಾಜಣ್ಣ - "ಮಕ್ಳ , ನಾನು ಕುಂತ ರೂಮಿನ ಹೊರಗೆ ತಡೆ ಹಿಡಿಯುತ್ತೇನೆ, ನೀವೆಲ್ಲ ಹಣ್ಣನ್ನು ಟ್ರಂಕು ಸೇರಿಸಿ " ಎಂದು ರೂಮಿನ ಹೊರಗೆ ಹೋದ. ನಾವೆಲ್ಲಾ ಲಗುಬಗನೆ ಹಣ್ಣನ್ನು ನಿತಿನನ ಟ್ರಂಕು ಸೇರಿಸಿ ರೂಮಿನ ಆಚೆ ಬಂದು ನೋಡಿದರೆ , ಮೈಲಾರಿಗೂ ರಾಜಣ್ಣನಿಗೂ ಕೈ-ಕೈ ಮಿಲಾಯಿಸುವ ಸನ್ನಿವೇಶ ಏರ್ಪಟ್ಟಿತ್ತು. ಮೈಲಾರಿ ಹೊಟ್ಟೆ ತುಂಬಾ ಉಂಡು, ತನ್ನ ಚಪ್ಪಲಿಯನ್ನು ಚರ-ಚರ ಎಂದು ಸದ್ದು ಮಾಡುತ್ತಾ ನಮ್ಮ ಹಾಸ್ಟೆಲ್ಲಿನಲ್ಲಿ ಇರುವ ರೂಮಿನ ಹುಡುಗರಿಗೆ ಹೆದರಿಸುತ್ತ ಮಜಾ ತೆಗೆದು ಕೊಳ್ಳುತ್ತಾ ನಮ್ಮ ರೂಮಿನ ಹೊರಗೆ ಬರುವ ಹೊತ್ತಿಗೆ,ರಾಜಣ್ಣ ಅದು ವಾರ್ದೆನ್ನು ಅಲ್ಲ, ಅವರ ಚಮಚ ಮೈಲಾರಿ ಎಂದು ಅರಿವಾಗಿ ಅವನಿಗೆ - "ಮಗನೆ, ಏನು ಮೆಸ್ಸಿನ್ನಲ್ಲಿ ತಿಂದ ಊಟ ಜಾಸ್ತಿ ಆಯಿತಾ, ಎಲ್ಲರಿಗು ಹೆದರಿಸುತ್ತ, ಮಜಾ ತಗೋತ ಇದ್ದಿಯಲ್ಲ" ಎಂದ. ಅದಕ್ಕೆ ಮೈಲಾರಿ - " ಜಾಸ್ತಿನೆ ಆಯಿತು, ಏನಿವಾಗ, ನಿನ್ನ ತಲೆ, ಹೋಗಿ ನಿನ್ನ ಕೆಲಸ ನೋಡು" ಎಂದ. ರಾಜಣ್ಣನ ಪಿತ್ತ-ನೆತ್ತಿಗೇರಿ ಇನ್ನೇನು ಮೈಲಾರಿಗೆ ಎರಡು ತದುಕಬೇಕು ಎನ್ನುವಷ್ಟರಲ್ಲೇ ನಾವು ಹೋಗಿ - " ರಾಜಣ್ಣ, ಇವನಿಗೆ ನೀನು ಇಕ್ಕರೆ, ಇವನು ವಾರ್ದೆನ್ನಿನ ಕಿವಿ ಕಚ್ಚುವುದು ಕಾತರಿ, ಇವನಿಗೆ ಬೇರೆ ರೀತಿಯಲ್ಲಿ ಸಿಕ್ಕಿಸುವ" ಎಂದು ರಾಜನ್ನನ್ನನ್ನು ರೂಮಿನ ಒಳಗೆ ಕರೆ ತಂದು ಪುಸಲಾಯಿಸಿ ಕೂರಿಸಿಕೊಂಡು ಒಂದು ಪ್ಲಾನ್ ಮಾಡಿದೆವು . ನಮ್ಮ ಪ್ಲಾನು ಹೀಗಿತ್ತು - ಬಾಕಿ ಇರುವ ಬಾಳೆಹಣ್ಣನ್ನು ಮೈಲಾರಿಯ ರೂಮಿನಲ್ಲಿರುವ ಸತ್ಯನನ್ನು ಕರೆದು ಮೈಲಾರಿಯ ಬೀರುವಿನ ಒಳಗೆ ಅವಿಸಿಡುವ ಬಗ್ಗೆ ಪುಸಲಾಯಿಸಿ ಕಳಿಸುವುದು. ವಾರ್ಡನ್ನು ಬರುವ ಹೊತ್ತಿಗೆ ಜೋರು ಸ್ವರದಲ್ಲಿ - ತೋಟದಲ್ಲಿ ಬಾಳೆಗೊನೆ ಕಾಣೆಯಾಗಿರುವ ಬಗ್ಗೆ ಪುಕಾರು ಇರುವುದು, ಮತ್ತು ಅದು ಸತ್ಯನ ರೂಮಿನಲ್ಲಿ ಇರುವ ಬಗ್ಗೆ ಬೇರೆ ಹುಡುಗರು ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ಸಾರಾಂಶ ಬರುವ ಹಾಗೆ ಮಾತನಾಡುವುದು ಎಂದು ನಾವು ನಾಲ್ಕು ಜನ ಮಾತನಾಡಿ,ಅವತ್ತು ಮಲಗಿಕೊಂಡೆವು. ಮರುದಿನ, ನಮ್ಮ ಪ್ಲಾನಿನ ಹಾಗೆ ಸತ್ಯ, ಮೈಲಾರಿ ರೂಮಿನಲ್ಲಿ ಇರದ ಹೊತ್ತಿನಲ್ಲಿ, ನಮ್ಮ ರೂಮಿನಿಂದ , ಅವನ ರೂಮಿಗೆ ಬಾಳೆಹಣ್ಣನ್ನು ತೆಗೆದುಕೊಂದು ಹೋಗಿ, ಮೈಲಾರಿಯ ಬೀರುವಿನ ಒಂದು ಮೂಲೆಯಲ್ಲಿ ಅವಿಸಿಟ್ಟ, ಆ ಸಂಜೆ, ವಾರ್ಡನ್ನು ನಮ್ಮ ರೂಮಿನ ಹತ್ತಿರ ಬಂದಾಗ ನಾವೆಲ್ಲಾ ಗಟ್ಟಿ ಸ್ವರದಲ್ಲಿ ರೂಮಿನ ಒಳಗೆ ಮುಂಚೆಯೇ ಮಾಡಿದ ಪ್ಲಾನಿನ ಹಾಗೆ ಮಾತನಾಡ್ತಾ ಇದ್ದೆವು . ವಾರ್ಡನ್ನು , ನಮ್ಮ ಮಾತನ್ನು ಕೇಳಿಸಿ ಕೊ೦ಡು, ಮೈಲಾರಿಯ ರೂಮಿಗೆ ಹೋಗಿ ಅವನ ರೂಮಿನ ತಲಾಶಿ ತೆಗೆಯಲು ಸಿಕ್ಕ ಬಾಳೆಹಣ್ಣು, ಅದನ್ನು ಕಂಡು, ಹೌಹಾರಿದ ಮೈಲಾರಿಯ ಇಂಗು ತಿಂದ ಮಂಗನ ಮೂತಿ ನೋಡಿ ನಾವೆಲ್ಲಾ ಒಂದು ವಾರದವರೆಗೂ ನಕ್ಕು-ನಕ್ಕು ಹೊಟ್ಟೆ . ಮೈಲಾರಿಗೆ ಒಂದು ವಾರ ಹಾಸ್ಟೆಲಿನ ಕಾರಿಡಾರು ಗುಡಿಸುವ ಶಿಕ್ಷೆಯಾಯಿತು. ಅಂದಿನಿಂದ ಅವನು ನಮ್ಮ ತಂಟೆಗೆ ಬರಲಿಲ್ಲ, ನಾವು ಅವನ ತಂಟೆಗೆ ಹೋಗಲಿಲ್ಲ.

Thursday, November 19, 2009

ಬೂದಿಯಿಂದ ಎದ್ದು ಬಂದ ತಾರೆ...

ಆರ್ಥುರ್ ಆಶ್ ಟೆನ್ನಿಸ್ ಕಂಡ ಮಹಾನ್ ಆಟಗಾರರಲ್ಲಿ ಒಬ್ಬ. ಏಡ್ಸ್ ರೋಗಕ್ಕೆ (ಹೃದಯ ಶಸ್ತ್ರ ಚಿಕಿತ್ಸೆಯ ವೇಳೆ, ದೂಷಿತ ರ‍ಕ್ತ ಪಡೆದ ಕಾರಣ) ತುತ್ತಾಗಿ ಸಾವಿನ ದವಡೆಯಲ್ಲಿ ನರಳುತ್ತಿದಾಗ, ಜಗತ್ತಿನ ಮೂಲೆ-ಮೂಲೆಗಳಿಂದ ಕ್ರೀಡಾಭಿಮಾನಿಗಳು ಆರ್ಥುರ್ ಆಶ್ ಗೆ ಪತ್ರ ಬರೆದು ಸಾಂತ್ವನ ಹೇಳಿದರು. ಅಂತ ಒಂದು ಪತ್ರದಲ್ಲಿ ಕ್ರೀಡಾಭಿಮಾನಿಯೊಬ್ಬರು - " ಆ ದೇವರು, ಅಂತಹ ಭಯಾನಕ ರೋಗವನ್ನು ನಿನ್ನಂತಹವನಿಗೆ ಏಕೆ ಕೂಟ್ಟ?" ಎಂಬ ಸಾರಉಳ್ಳ ಪತ್ರವನ್ನು ಬರೆದಿದ್ದರು. ಆದಕ್ಕೆ ಆರ್ಥುರ್ ಆಶ್ ಬರೆದ ಉತ್ತರ ಜೀವನದಲ್ಲಿ ಅವನಿಗಿದ್ದ ಮೌಲ್ಯಗಳು, ಮತ್ತು ಅವನ್ನು ಆರ್ಥುರ್ ಆಶ್ ಎತ್ತಿ ಹಿಡಿದ ರೀತಿಯನ್ನು ಬಿಂಬಿಸುತ್ತವೆ. ಆ ಪತ್ರದ ಸಾರಂಶ ಈ ಕೆಳಗೆ ಇದೆ -

" ಜಗತ್ತಿನಾದ್ಯಂತ ೫೦ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಶುರು ಮಾಡುತ್ತಾರೆ, ಅದರಲ್ಲಿ ೫ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಕಲಿಯುತ್ತಾರೆ, ಅದರಲ್ಲಿ ೫೦೦೦೦೦ ಮಕ್ಕಳು ಸ್ಪರ್ಧಾತ್ಮಕ ಟೆನ್ನಿಸ್ ಕಲಿಯುತ್ತಾರೆ, ಅದರಲ್ಲಿ ೫೦,೦೦೦ ಮಕ್ಕಳು ವಿವಿಧ ಸ್ಪರ್ಧೆಗಳ್ಳಲ್ಲಿ ಅಡಲು ಬರುತ್ತಾರೆ, ಅದರಲ್ಲಿ ೫೦೦೦ ಮಕ್ಕಳು ಗ್ರಾಂಡ್ ಸ್ಲಾಮ್ ಸ್ಪರ್ಧೆಗಳಿಗೆ ಆಡಲು ಬರುತ್ತಾರೆ, ಅದರಲ್ಲಿ ೫೦ ಜನ ವಿಂಬಲ್ಡನ್ ಸ್ಫರ್ಧೆಗೆ ಬರುತ್ತಾರೆ, ೪ ಜನ ಸೆಮಿ- ಫೈನಲ್ ಗೆ ಬಂದು, ಅದರಲ್ಲಿ ೨ ಜನ ಫೈನಲ್ ಆಡುವ ಅವಕಾಶ ಪಡೆದು, ಗೆದ್ದ ಕಪ್ ಅನ್ನು ಎತ್ತಿ ಹಿಡಿದಾಗ " ದೇವರೆ, ಇದಕ್ಕೆ ನನ್ನನ್ನು ಏಕೆ ಆಯ್ಕೆ ಮಾಡಿದೆ?" ಎಂದು ನಾನು ಎಂದೂ ಕೇಳದ ಕಾರಣ, ಇಂದು " ನನಗೆ ಇಂತಹ ರೋಗವನ್ನು ಏಕೆ ಕೊಟ್ಟೆ?" ಎಂದು ಏಕೆ ಕೇಳಲಿ.ಸಂತೋಷಗಳು ನಮ್ಮನ್ನು ಸಿಹಿಯಾಗಿಡುತ್ತವೆ, ಕಷ್ಟಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಯಾಗಿಡುತ್ತವೆ, ನೋವು ನಮ್ಮನ್ನು ಮಾನವನಾಗಿ ಇಡುತ್ತವೆ, ಸೋಲು ನಮ್ಮನ್ನು ಛಲವಂತರಾಗಿಸುತ್ತವೆ ಮತ್ತು ಗೆಲುವು ನಮ್ಮನ್ನು ಬಲವಂತರಾಗಿಸುತ್ತವೆ, ಆದರೆ ನಂಬಿಕೆ ಮತ್ತು ಛಲ ನಮ್ಮನ್ನು ಎಂತಹ ಪರಿಸ್ಥಿತಿಯಲ್ಲೂ ಮುಂದೆ ಸಾಗಲು ನೆರವಾಗುತ್ತವೆ.

ಆರ್ಥ್ರ ಆಶ್ ಸುಮಾರು ೧೧ ವರ್ಷಗಳ ವೃತ್ತಿಪರ ಟೆನ್ನಿಸ್ ಆಡಿ ಹಲವಾರು ದಾಖಲೆಗಳನ್ನು ಸ್ತಾಪಿಸಿದ ಅದರಲ್ಲಿ ಪ್ರಮುಖವಾದದ್ದು ಮತ್ತು ಇನ್ನು ಅಜಯಿಯಾಗಿ ಉಳಿದಿರುವುದು - ವಿಂಬಲ್ಡನ್, ಯು.ಎಸ್. ಒಪನ್, ಆಸ್ಟ್ರೇಲಿಯನ್ ಒಪನ್ ಗೆದ್ದ ಏಕೈಕ ಆಫ್ರೋ-ಅಮೇರಿಕನ ಮೂಲದ ಆಟಗಾರ ಎಂದು. ಟೆನ್ನಿಸ್ ಆಟಕ್ಕೆ ಅರ್ಥುರ್ ಆಶ್ ನ ಕೊಡುಗೆ, ಅವನು ಮಾಡಿದ ಧರ್ಮಾಥ ಕಾರ್ಯಗಳನ್ನು ದೃಷ್ಟಿಯಲ್ಲಿಟ್ಟು ಯು.ಎಸ್ ಸರ್ಕಾರ , ಯು.ಎಸ್. ಒಪನ್ ಆಡುವ ಪ್ರಮುಖ ಕ್ರೀಡಾಂಗಣವನ್ನು " ಅರ್ಥುರ್ ಅಶ್ ಕ್ರೀಡಾಂಗಣ" ಎಂದು ನಾಮಕರ‍ಣ ಮಾಡಿದೆ.

Saturday, October 31, 2009

ಮತ್ತೆ ಬಂದಿದೆ ಕನ್ನಡಮ್ಮನ ಹಬ್ಬ....

ಎಲ್ಲ ಕನ್ನಡಾಭಿಮಾನಿಗಳಿಗೆ(ಭಾಷೆ ಬಂದರೂ ಮಾತನಾಡದ ದುರಭಿಮಾನಿಗಳಿಗೆ, ರಾಜ್ಯದಲ್ಲೇ ಇದ್ದರೂ ಭಾಷೆಯನ್ನು ಕಲಿಯದ ನಿರಭಿಮಾನಿಗಳಿಗೆ) ಕನ್ನಡ ರಾಜ್ಯೇತ್ಸವದ ಹಾರ್ದಿಕ ಶುಭಾಷಯಗಳು. ಕನ್ನಡದ ಕಂಪು, ನುಡಿ ಸಾಹಿತ್ಯದ ಇಂಪು ಪಸರಿಸುತ್ತಿರಲಿ, ಆ ಕನ್ನಡಾಂಬೆಯ ಆಶೀರ್ವಾದ ಎಲ್ಲರ ಮೇಲೂ ಇರಲಿ. ರಾಜ್ಯೋತ್ಸವ ಕೇವಲ "ನವೆಂಬರ್ ಕನ್ನಡ" ದ ಆಚರಣೆಗೆ ಸೀಮಿತವಾಗಿರದೆ ಕನ್ನಡ ನಿತ್ಯೋತ್ಸವ ನಿತ್ಯವೂ ನಡೆಯಲಿ, ಜಾತಿ - ಮತ ಬೇಧವ ಮರೆತು ಎಲ್ಲರು ಸಶಕ್ತ ಕನ್ನಡ ನಾಡು - ನುಡಿಗಾಗಿ ಶ್ರಮಿಸೋಣ. ಜೈ ಕರ್ನಾಟಕ, ಜೈ ಕನ್ನಡಾಂಬೆ.

Sunday, October 11, 2009

ಒಂದು ಕವಿತೆಯ ಸುತ್ತ...

ಜಯನಗರ ೪ನೇ ಬ್ಲಾಕಿನ ಹಳೆಯ ಪುಸ್ತಕ ಮಳಿಗೆಯಲ್ಲಿ ಕೊಂಡ ಒಂದು ರಸಾಯನಶಾಸ್ತ್ರ ಪುಸ್ತಕದ ಕೊನೆಯ ಪುಟದಲ್ಲಿ ಸಿಕ್ಕ ಒಂದು ಹಿಂದಿ ಶಾಯರಿ/ ಕವಿತೆ. ಓದಿ, ಆನಂದಿಸಿ...

न ये chemistry होती, न ये chemistry होती,
न मैं student होता,न ये lab होता,
न ये accident होता, अभी practical में आयी नज़र एक लड़की ,
सुंदर थी नाक उसकी Test Tube जैसी,बातों मैं उसकी Glucose की मिठास थी ,
सांसों में Ester की खुशबु भी साथ थी,आंखों से झलकता था कुछ इस तरंह का प्यार,
बिन पिए ही हो जाता था Alcohol का खुमार,बेचैन सा होता था उसकी Presence का एहसास,
अंधेरे में होता था Radium का आभास,नज़रें मिलीं, Reaction हुआ कुछ इस तरह,
लव का Production हुआ ,लगने लगे उस के घर के चक्कर ,
ऐसे Nucleus के चरों तरफ़ Electron होए जैसे ,उस दिन हमारे Test का Confirmation हुआ,
अब उसके Daddy से हमारा Introduction हुआ,सुन कर हमारी बात वोह ऐसे उचल पड़े,
Ignition Tube में जैसे Sodium भड़क उठे ,वोह बोले होश में आओ पहचानो अपनी औकात,
Iron मिल नहीं सकता कभी Gold के साथ,ये सुन कर टुटा हमारे अरमानों भरा घर ,
और हम चुप रहे daddy की बत्तों का कड़वा घूँट पि कर,अब उस की यादों के सिवा हमारा कम चलता न था,
और लैब में हमारे दिल के सिवा कुछ और जलता न था,जिंदगी हो गयी Unsaturated Hydro carbon की तरह,
और हम फिरते हैं आवारा Hydrogen की तरह.

ಸುಮಾರು ದಿನಗಳಿಂದ ಏನನ್ನು ಪೋಸ್ಟ್ ಮಾಡದ ಕಾರಣ, ಇದನ್ನು ಪೋಸ್ಟ್ ಮಾಡಿದ್ದೇನೆ.

Monday, March 16, 2009

ನೂರು ಜನ್ಮಕೂ ನೂರಾರು ಜನ್ಮಕೂ...

ನಾನು ಮೆಚ್ಚಿದ ಹಾಡುಗಳಲ್ಲಿ ಒಂದು. ನೋಡಿ, ಕೇಳಿ ಆನಂದಿಸಿ...


Tuesday, December 30, 2008

ಕನ್ನಡಮ್ಮ ಇಂಗ್ಲೀಷು ಕುದುರೆಯ ಮೇಲೇರಿ ಬಂದಾಗ...


ನೆನ್ನೆ ಕ್ಯಾಬ್ನಲ್ಲಿ ಆಫೀಸಿಗೆ ಬಂದು, ಕೈ ಗಡಿಯಾರ ನೋಡಿಕೊಂಡೆ. ಬರ್ರೋಬರ್ರಿ ೨೦ ನಿಮಿಷ ಬೇಗ ಬಂದಿದ್ದೆ. ನನ್ನ ಜಾಗಕ್ಕೆ ಬಂದು, ನನ್ನ ಲ್ಯಾಪ್-ಟಾಪ್ ಇಟ್ಟು, ಆಫೀಸಿನ ಹೊರಗೆ ಬಂದು, ಒಂದು ದಮ್ಮು ಹಚ್ಚಿ, ಆ ದಿನ ಮಾಡಬೇಕಾದ ಕೆಲಸದ ಪಟ್ಟಿಯನ್ನು ಮನಸ್ಸಿನಲ್ಲಿಯೇ ಮಾಡಿಕೊಂಡು, ಇನ್ನೇನು ಆಫೀಸಿನ ಒಳಗೆ ಬರಬೇಕು, ಆವಾಗ ಒಬ್ಬ ೨೦-೨೨ ವಯಸ್ಸಿನ ಯುವಕ, ಇಂಗ್ಲೀಷು ಪದಕೋಶ ಹಿಡಿದು ಬಂದು ತೆಗೆದು ಕೊಳ್ಳುವಂತೆ ದುಂಬಾಲುಬಿದ್ದ. ಇಂಗ್ಲೀಷಿನಲ್ಲಿಯೇ ಮಾತನಾಡಲು ಪ್ರಾರಂಬಿಸಿದ ಅವನು, ಸ್ವಲ್ಪ ಸಮಯದ ನಂತರ, ಹಿಂದಿಯಲ್ಲಿ ಕೊನೆಗೆ ಹರುಕು ಹಿಂದಿ/ಇಂಗ್ಲೀಷು ಉಪಯೋಗಿಸಿ convince ಮಾಡಲು ಪ್ರಯತ್ನ ಮಾಡಿದ. ನಾನು "simply not convinced " ಎಂದು ಅವನ್ನನ್ನು ಸಾಗಹಾಕಿ ಆಫೀಸಿನ ಒಳಗೆ ಬಂದೆ.
ಬೆಂಗಳೂರಿನಂತಹ cosmopolitan/metropolitan ನಗರದಲ್ಲಿ, ಬಹುಬಾಷಾ channels/mediums ಬೇಕಾಗಬಹುದು. ಆದರೆ ಕನ್ನಡಿಗನಾಗಿ ನಾನು, ಶಾಲೆಯಲ್ಲಿ, ಕಾಲೇಜಿನಲ್ಲಿ ಕನ್ನಡ ಕಲಿತ ಪರಿಣಾಮವಾಗಿ, ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ಬಳಸಲು ಇಷ್ಟಪಡುತ್ತೇನೆ. ಇದೆ ಸಂದರ್ಬದಲ್ಲಿ ಪ್ರೌಡಶಾಲೆಯ ಸುಬ್ರಾಯ ಮೇಷ್ಟ್ರು ಹೇಳಿದ ಮಾತು ನೆನಪಿಗೆ ಬರುತ್ತದೆ - " ಮನು, ಮಾತೃ ಬಾಷೆಯಲ್ಲಿ ಇರುವ ಸ್ವಾತಂತ್ರ್ಯ, ಸೃಜನಶೀಲತೆ, ಯೋಚನಾ ಲಹರಿ, ಇಂಗ್ಲೀಷನ್ನು ಬಾಷೆಯಾಗಿ ಶಾಲೆಯಲ್ಲಿ ಕಲಿಯುವ ನಿನಗೆ, ಕಲಿತಿರುವ ನನಗೆ, ಇಂಗ್ಲೀಷು ಉಪಯೋಗಿಸುವಾಗ ಬರಲು ಸಾಧ್ಯವಿಲ್ಲ" ಎಂದರು. ಇದೆ ರೀತಿ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಗಾಗಿ ಕಲಿಯುವಾಗ ಕ್ಲಾಸಿನಲ್ಲಿ - "ನೀವು ಎಲ್ಲರ ಜೊತೆ ಇಂಗ್ಲೀಷಿನಲ್ಲಿಯೇ ಮಾತನಾಡಬೇಕು, it will improve your confidence and reduce the vernacular way of speech/expression" ಎಂದು ಪ್ರೊ.ಪೂನಂ ನಾರಂಗ್ ಹೇಳಿದ ಮಾತು ಕೂಡ ನೆನಪಿದೆ.
ಇಬ್ಬರೂ ತುಂಬ ಕಲಿತವರೇ, ಇಬ್ಬರ ವಾದವೂ ಸರಿಯೇ, ವ್ಯವಹಾರಿಕ ಬಾಷೆಯಾಗಿ ಇಂಗ್ಲೀಷು ಉಪಯೋಗಿಸುವುದರಲ್ಲಿ ಯಾವ ಹಾನಿಯೂ ಇಲ್ಲ, ಆದರೆ ವ್ಯವಹಾರಿಕ ಬಾಷೆ ಮಾತೃ ಬಾಷೆಯ ಜಾಗ ತೆಗೆದುಕೊಳ್ಳೋ ರೀತಿ ಇಂಗ್ಲೀಷು ಪ್ರೀತಿ ನಮ್ಮ ಸುತ್ತಲುಬೆಳೆಯುತಿದ್ದೆ/ಬೆಳೆದಿದೆ . ಇಂತಹ ಬೆಳವಣಿಗೆ ಮಾರಕವಾಗುವ ಮುನ್ನ, mummy-daddy ಬಂದು ಅಪ್ಪ-ಅಮ್ಮ ಆಗುವ ಮುನ್ನ, ಆನೆ ಹೋಗಿ Elephant ಆಗುವ ಮುನ್ನ, ...ನಾವೆಲ್ಲರೂ ಜಾಗ್ರೃತವಾಗೋಣವೆ???

Friday, December 26, 2008

ಸಿಂಹ ಮತ್ತು ನರಿಯ ಕಥೆ

ಅದೊಂದು ಮುದಿ ಸಿಂಹ. ಅದರ ಕಾಲುಗಳು ತ್ರಾಣ ಕಳೆದುಕೊಂಡಿವೆ. ಓಡಾಡಿ ಬೇಟೆಯಾಡಲು ಆಗುತ್ತಿಲ್ಲ. ಹಸಿವಿನ್ನಿಂದ ಅದರ ದೇಹ ದಿನದಿಂದ ದಿನಕ್ಕೆ ಕುಗ್ಗ ತೊಡಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಾಯುವುದು ನಿಶ್ಚಿತವೆಂದು ಸಿಂಹಕ್ಕೆ ಮನವರಿಕೆಯಾಗುತ್ತದೆ. ಆದರೇನಂತೆ ಅದು ಕಾಡಿನ ರಾಜ, ಅದರ ಆದೇಶವನ್ನು ಕಾಡಿನ ಪ್ರಾಣಿಗಳು ಪಾಲಿಸಲೇಬೇಕು . ಅದಕೊಂದು ಉಪಾಯ ಹೊಳೆಯಿತು ಕೂಡಲೇ ನರಿಯನ್ನು ಕರೆಸಿಕೊಂಡಿತು. " ನರಿ, ನೀನು ಬಹಳ ಚತುರ. ಹಾಗಾಗಿ ನಿನ್ನನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕೊಂಡಿದ್ದೇನೆ" ಎಂದಿತು ಸಿಂಹ. ಮೊದಲೇ ಚತುರನಾದ ನರಿಯು ಸಿಂಹದ ಮಾತನ್ನು ನಂಬುವುದಿಲ್ಲ. ಆದರೆ ಸಿಂಹದ ಮಾತುಗಳನ್ನು ದಿಕ್ಕರಿಸುವ ಹಾಗು ಇಲ್ಲ, ಒಲ್ಲದ ಮನಸ್ಸಿನಿಂದ ನರಿಯು ಮಂತ್ರಿಯಾಗಲು ಓಪ್ಪಿಕೊಂಡಿತು. ಸಿಂಹಕ್ಕೆ ನರಿಯ ಒಪ್ಪಿಗೆ ಸಿಕ್ಕ ಮೇಲೆ ಖುಶಿಯಾಯಿತು.

"ನೋಡು ನರಿ, ನಾನು ಸಿಂಹ, ಮೃಗರಾಜ , ನನಗೆ ದಿನವು ಬೇಟೆಯಾಡುವ ಅಗತ್ಯವಿಲ್ಲ, ನನ್ನ ಮಂತ್ರಿಯಾದ ನೀನು ಇನ್ನು ಮುಂದೆ ನನಗೆ ಒಂದು ಪ್ರಾಣಿಯನ್ನು ಒದಗಿಸಬೇಕು " ಎಂದನ್ನುತ್ತದೆ ಸಿಂಹ. ಬೇರೆ ದಾರಿಯೇ ಕಾಣದ ನರಿಯು ಬೇಟೆಯಾಡಲು ಕಾಡಿನೊಳಗೆ ಹೋಗುತ್ತದೆ. ದಾರಿಯಲ್ಲಿ ನರಿಗೆ ಒಂದು ಕೊಬ್ಬಿದ ಕತ್ತೆ ಸಿಗುತ್ತದೆ. ಕತ್ತೆ ಯನ್ನು ಕಂಡ ನರಿಯು " ಕಾಡಿನ ರಾಜನಾದ ಸಿಂಹವು ನಿನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿಶ್ಚಯಿಸಿದೆ. ಅದಕ್ಕಾಗಿ ನಿನ್ನನ್ನು ಹುಡುಕುತಿದ್ದೆ " ಎಂದು ಹೇಳುತ್ತದೆ. ಸಿಂಹದ ಹೆಸರು ಕೇಳಿದ ಕತ್ತೆ ಗೆ ಹೆದರಿಕೆ ಶುರುವಾಗುತ್ತದೆ. ಅನುಮಾನವೂ ಶುರುವಾಗುತ್ತದೆ. "ಮುಖ್ಯಮಂತ್ರಿಯಾಗಲು ನಾನು ಯೋಗ್ಯನಲ್ಲ" ಎಂದು ನರಿಗೆ ಮಾರುತ್ತರ ನೀಡುತ್ತದೆ.

ನರಿ ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಕತ್ತೆಯನ್ನು ಹೊಗಳಲು ಶುರು ಮಾಡುತ್ತದೆ, " ನೀನು ಬಹಳ ಬುದ್ದಿವಂತ, ಪರಿಶ್ರಮಿ, ಹಾಗಾಗಿಯೇ ನಿನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ" ಎಂದು ಮುಖಸ್ತುತಿ ಮಾಡುತ್ತದೆ. ನರಿಯ ಮಾತನ್ನು ಕೇಳಿದ ಕತ್ತೆಗೆ ನರಿಯ ಮಾತುಗಳ ಮೇಲೆ ನಂಬಿಕೆ ಬರುತ್ತದೆ. ಸಿಂಹದ ಬಳಿಗೆ ಹೋಗುತ್ತದೆ. ಆದರೆ ಸಿಂಹವು ಕತ್ತೆಯು ಹತ್ತಿರ ಬಂದೊಡನೆ ತನ್ನ ಬಲವಾದ ಮುಷ್ಟಿಯನ್ನು ಅಪ್ಪಳಿಸಿ ಕತ್ತೆಯನ್ನು ಕೊಳ್ಳುತ್ತದೆ, ನಂತರ ತಿನ್ನಲು ಅಣಿಯಾಗುತ್ತದೆ. ಇನ್ನೇನು ತಿನ್ನಬೇಕು ಎನ್ನುವಾಗ ನರಿಯು ಸಿಂಹವನ್ನು ಕಂಡು - " ಮಹಾರಾಜ, ನೀವು ಸ್ನಾನ ಮಾಡಿ ತುಂಬ ದಿನಗಳಾಗಿದೆ, ಸ್ನಾನ ಮಾಡಿ ಬಂದು, ಕತ್ತೆಯನ್ನು ತಿನ್ನಿ " ಎನ್ನುತ್ತದೆ. ನರಿಯ ಮಾತು ಸಿಂಹಕ್ಕೆ ಸರಿಯೆನಿಸುತ್ತದೆ. ಕತ್ತೆಯನ್ನು ಕಾಯುತ್ತಿರು ಎಂದು ನರಿಗೆ ಹೇಳಿ ಸ್ನಾನ ಮಾಡಲು ಹೋಗುತ್ತದೆ. ಇತ್ತ ವಿಧೇಯತೆ ಇಂದ ಕಾಯುತ್ತಿದ ನರಿಯ ಬಾಯಾಲ್ಲಿ ನೀರು ಬರಲು ಶುರುವಾಗುತ್ತದೆ. ಅಷ್ಟಕ್ಕೂ ಕತ್ತೆಯನ್ನು ಕರೆ ತಂದವನು ನಾನು, ಅದಕ್ಕೆ ಅದರ ದೇಹದ ಒಳ್ಳೆಯ ಬಾಗ ನನಗೆ ಸೇರಬೇಕು ಎಂದು ಕತ್ತೆ ಯಾ ಮೆದುಳನ್ನು ತಿಂದು ಮುಗಿಸುತ್ತದೆ. ಸ್ನಾನ ಮಾಡಿ ಬಂದ ಸಿಂಹಕ್ಕೆ ಏನೋ ವ್ಯತ್ಯಾಸವಾದಂತೆ ಬಾಸವಾಗುತ್ತದೆ. ಅನುಮಾನದಿಂದ ಪ್ರಶ್ನಿಸಿದಾಗ - " ಕತ್ತೆಗೆ ನೀನು ಕೊಟ್ಟ ಗುದ್ದಿನಿಂದ ಅದರ ನೆತ್ತಿ ಒಳಗೆ ಹೋಗಿದೆ" ಎನ್ನುತ್ತದೆ ನರಿ. ನರಿಯ ಉತ್ತರದಿಂದ ತೃಪ್ತನಾಗಿ ಸಿಂಹವು ಕತ್ತೆಯನ್ನು ತಿನ್ನಲು ಕೂತ ಸಿಂಹಕ್ಕೆ ಕತ್ತೆ ಯಾ ಮೆದುಳೇ ಮಯಾವಾಗಿರುವುದು ತಿಳಿಯುತ್ತದೆ. ಮತ್ತೆ ನರಿಯ ಕಡೆ ಅನುಮಾನದಿಂದ ನೋಡುತ್ತದೆ " ಒಂದು ವೇಳೆ ಕತ್ತೆಗೆ ಮೆದುಳು ಇದ್ದಿದ್ದರೆ ಅದು ನಿನ್ನನ್ನು ಕಾಣಲು ಬರುತ್ತಿತ್ತೆ " ಸಿಂಹಕ್ಕೆ ಮರು ಪ್ರಶ್ನೆ ಹಾಕುತ್ತದೆ. ಮೆದುಳೇ ಇಲ್ಲದ ಮ್ಯಾನೇಜರ್ ಕೆಳಗೆ ಕೆಲಸ ಮಾಡೋ, ಅಥವಾ ನಮ್ಮ ಮೆದುಳೇ ಇಲ್ಲದ ಹಾಗೆ ಮಾಡುವ ಯಾಂತ್ರಿಕ ಕೆಲಸಕ್ಕೋ ಈ ಬ್ಲಾಗ್ ಸಮರ್ಪಿತ. ಮತ್ತೆ ಸಿಗುವವರೆಗೂ.....ಬೈ...ಹೊಸ ವರುಷದ ಶುಭಾಶಯಗಳು.

ಸರ್ವಾದಿಕಾರಿ ನರಿಯು, ಕುರಿಯು ನಾನದ ಕಥೆಯು....


ಅದೊಂದು ಬಹಳ ಬುದ್ದಿವಂತ ನರಿ. ಒಮ್ಮೆ ಆಹಾರವನ್ನು ಹುಡುಕಿಕೊಂಡು ಅದು ನಗರಕ್ಕೆ ಬರುತ್ತದೆ. ನರಿಯನ್ನು ಕಂಡ ನಗರದ ನಾಯಿಗಳು ನರಿಯನ್ನು ಅಟ್ಟಿಸಿಕೊಂಡು ಹೋಗುತ್ತವೆ, ನರಿಯು ಬೆಚ್ಚಿ ಬಿದ್ದು ಕಾಲಿಗೆ ಬುದ್ದಿ ಹೇಳುತ್ತಾ ಓಡಲು ಶುರು ಮಾಡಿ ಓಡಿ, ಓಡಿ ಒಬ್ಬ ಅಗಸನ ಮನೆಯನ್ನು ಪ್ರವೇಶಿಸುತ್ತದೆ, ಅದಕ್ಕೆ ದಿಗಿಲಾಗಿ , ಕಕ್ಕಾಬಿಕ್ಕಿಯಾಗಿ ಅಲ್ಲಿಯೇ ಇದ್ದ ಬಣ್ಣದ ತೊಟ್ಟಿಯಲ್ಲಿ ಬೀಳುತ್ತದೆ. ತೊಟ್ಟಿಯಲ್ಲಿದ್ದ ನೀಲಿ ಬಣ್ಣವೆಲ್ಲ ನರಿಯ ಮೈಗೆ ಹತ್ತಿ , ಅದು ನೀಲಿ ನರಿಯಾಗಿ ಹೊರ ಬರುತ್ತದೆ. ನರಿಯು ವಾಪಸ್ಸು, ತನ್ನ ಕಾಡಿಗೆ ಹೋದಾಗ , ಅಲ್ಲಿರುವ ಪ್ರಾಣಿಗಳೆಲ್ಲ ಅದನ್ನು ಕಂಡು ಆಶ್ಚರ್ಯ ಪಟ್ಟು ಇದ್ಯಾವುದೋ ಹೊಸ ಪ್ರಾಣಿಯ ಎಂದು ಅದನ್ನು ಪ್ರಶ್ನಿಸುತ್ತವೆ. ಇದೆ ಸರಿಯಾದ ಸಮಯವೆಂದು ನರಿಯು - " ನಾನು ದೇವ ಲೋಕದಿಂದ ಬಂದಿರುವ ದೇವ-ದೇವತೆಗಳ ಒಡೆಯನಾದ ಇಂದ್ರನ ಪ್ರತಿನಿಧಿ , ಈ ಕಾಡನ್ನು ರಕ್ಷಿಸಲು ಆ ಇಂದ್ರನೇ ನನ್ನನ್ನು ಈ ಕಾಡಿಗೆ ಕಳಿಸಿದ್ದಾನೆ "ಎಂದು ಬೊಗಳೆ ಬಿಡುತ್ತದೆ.

ಪಾಪ ಆ ಕಾಡಿನ ಮುಗ್ದ ಪ್ರಾಣಿಗಳು ನರಿಯ ಮಾತನ್ನು ನಂಬಿ, ನರಿಯು ಆ ಕಾಡಿನ ಸರ್ವಾದಿಕಾರಿಯ ಆಸನವನ್ನು ಏರಿ, ಸಿಂಹವನ್ನು ಪ್ರದಾನ ಮಂತ್ರಿಯನ್ನಾಗಿ, ಹುಲಿಯನ್ನು ತನ್ನ ಮಲಗುವ ಕೋಣೆಕಾವಲುಗಾರನನ್ನಾಗಿ ಹಾಗಿ ಆನೆಯನ್ನು ದ್ವಾರಪಾಲಕನನ್ನಾಗಿ ನೇಮಿಸಿ ನರಿಯು ತನ್ನ ಆಳ್ವಿಕೆಯನ್ನು ಪ್ರಾರಂಭ ಮಾಡುತ್ತದೆ. ಕಾಡಿನ ಪ್ರಾಣಿಗಳು ಬೇಟೆಯಾಡಿ ತಂದ ಬಲಿಗಳನ್ನು, ನರಿಯು ಸಮನಾಗಿ ಎಲ್ಲರಿಗೂ ಹಂಚಿ ರಾಜಧರ್ಮವನ್ನು ಪಾಲಿಸುತ್ತಿರುತ್ತದೆ. ಒಂದು ಸಲ ನರಿಯು ಗದ್ದುಗೆಯ ಮೇಲೆ ಆಸೀನವಾಗಿರುತ್ತದೆ, ಆ ವೇಳೆಯಲ್ಲಿ ನರಿಗಳ ಹಿಂಡೊಂದು ಸಮೀಪದಲ್ಲೇ ಹಾಡು ಹೋಗುತಿರುತ್ತವೆ. ಹಾಗೆ ಹೋಗುತ್ತಾ ಇರುವ ನರಿಗಳು ಜೋರಾಗಿ ಕೂಗುತ್ತಾ ಸಾಗುತ್ತಿರುತ್ತವೆ. ಈ ಕೂಗನ್ನು ಕೇಳಿ ರಾಜನಾಗಿದ್ದ ನರಿಗೆ ತಡೆದು ಕೊಳ್ಳಲಾಗದೆ, ಕೂಗಲಾರಂಭಿಸುತ್ತದೆ. ಆದರೆ ಗದ್ದುಗೆಯ ಮೇಲೆ ಕೂತಿದ್ದ ತನ್ನ ರಾಜನ ನಿಜ ಬಣ್ಣ ತಿಳಿದ ಕಾಡಿನ ಪ್ರಾಣಿಗಳು ನರಿಯು ಬಡಿದು, ಬಡಿದು ಸಾಯಿಸುತ್ತವೆ. ಈ ನೀತಿ ಕಥೆಯನ್ನು ಇಲ್ಲಿ ಬರೆಯಲ್ಲೂ ಇಷ್ಟೇ ಕಾರಣ- ನಮ್ಮ ಸುತ್ತ ಮುತ್ತ ಈ ನರಿಯ ಹಾಗೆ ಬಣ್ಣ ಬಳಿದು ಕೊಂಡು ಜನ ಕಾಣ ಸಿಗುತ್ತಾರೆ , ಅಂಥ ಒಂದು ನರಿಯ ಕೆಳಗೆ ನಾನು ಕೆಲಸ ಮಾಡುತಿದ್ದೆ ಎಂಬ ನೆನಪು ಬಂದ ಹಾಗೆ ಈ ಕಥೆಯನ್ನು ಇಲ್ಲಿ ಬರೆದು ಹಾಕುತ್ತಿದ್ದೇನೆ.

ಒಂಟಿತನದ ಗುರುವೇ ಒಲವೇ ?


ಹೊರಗೆ ಧೋ ಎಂದು ಮಳೆ ಸುರಿಯುತ್ತಿತ್ತು. ಬೆಂಗಳೂರು ಕಂಡ ಆ ವರ್ಷದ ಜೋರು ಮಳೆ ದಿನಗಳ್ಳಲ್ಲಿ ಅದೂ ಒಂದು.ನಾಳೆ ಅವಳ ಮದುವೆ. ಟೇಬಲ್ ಮೇಲೆ ಅವಳು ಬಂದು ಮಹೇಶನಿಗೆ ತಲುಪಿಸಿ ಹೋಗಿದ್ದ ಮುದ್ದಾದ ವಿವಾಹ ಆವ್ಹಾನ ಪತ್ರ.ಆಗ ರಾತ್ರಿಯ ೧೧:೪೫ ಗಂಟೆ,೨ ಕ್ವಾರ್ಟರ್ ರಂ ಕುಡಿದು ಮುಗಿಸಿ,ಮಹೇಶನಿಗೆ ಮೂರನೆಯದನ್ನು ತರಲು ಹೇಳಿದೆ. ಮಹೇಶ ಅಂದ "ಅಣ್ಣ, ತುಂಬ ಕುಡಿದಿದ್ದಿರ,ಮನೆಗೆ ಬೇರೆ ಹೋಗ ಬೇಕು ನೀವು,ಬೇಡ ಅಣ್ಣ" ಎಂದು ಗೋಗರೆದ.ಅದಕ್ಕೆ ನಾನು " "ಮಹೇಶ, ಯಾಕೋ ಇವತ್ತು ಅವಳ ನೆನಪು ತುಂಬ ಕಾಡುತ್ತಿದೆ, ಮರೆಯಲಾದರೂ ಕುಡಿಯಲೇ ಬೇಕು,ನೆನಪುಗಳನ್ನು ಅಳಿಸಿ ಹಾಕಲು ಸಮಯವೇ ಮದ್ದು,ಆ ಸಮಯವನ್ನು ಇದಿರು ಗೊಳ್ಳುತ್ತಾ ಕೂಡಲು ಇದೇ ಮದ್ದು,ತೆಗೆದು ಕೊಂಡು ಬಾ" ಎಂದೆ. ಮಹೇಶ ಇನ್ನೊಂದು ಕ್ವಾರ್ಟರ್ ತಂದು ಟೇಬಲ್ ಮೇಲೆ ಇಟ್ಟು ನನ್ನ ಮುಂದೆ ಕುಳಿತ.ಒಂದೊಂದೇ ಗುಟುಕು ಒಳಗೆ ಆದ ಹಾಗೆ ದುಖಃ ಉಮ್ಮಳಿಸಿ ಬಂದ ಅನುಭವ, ಹಳೆ ನೆನಪುಗಳು ಗೋಣಿಯ ಒಳಗಿಂದ ಹೊರ ಹರವಿಕೊಂಡು ಕೂತ ಅಜ್ಜಿಯ ಹಾಗೆ ನಾನು ಮಹೇಶನ ಮುಂದೆ ಕುಳಿತಿದ್ದೆ. ಸ್ನಾತಕೋತ್ತರ ಪದವಿಯಲ್ಲಿ ಅವಳು ನನ್ನ ಜೂನಿಯರ್,ಇಬ್ಬರು ಜೊತೆಗೂಡಿ ಒಂದೇ ಕಂಪನಿಗೆ ಪ್ರಾಜೆಕ್ಟ್ ಮಾಡುವಾಗ ಆದ ಗೆಳೆತನ, ನಮಗೆ ಅರಿವಿಲ್ಲದಂತೆ ಪ್ರೀತಿಗೆ ತಿರುಗಿತು. ನಾನು ದಿನವೂ ಫ್ರೆಂಚ್ ಕ್ಲಾಸ್ ಎಂದು ಮನೆಯಲ್ಲಿ ಸುಳ್ಳು ಹೇಳಿ ಅವಳೊಂದಿಗೆ ಕಳೆದ ಗಳಿಗೆಗಳು,ವೀಕೆಂಡ್ನಲ್ಲಿ ಸುತ್ತಿದ ಚಾಮುಂಡಿ ಬೆಟ್ಟ,ಕುಕ್ಕರಲ್ಲಿ ಕೆರೆ, ದಿನವೂ ಕೆಫೆ ಮಲ್ಲಿಗೆಯಲ್ಲಿ ತಿನ್ನುತಿದ್ದ ಬೆಳಗಿನ ತಿಂಡಿ,ಮೊದಲ ಬಾರಿ ಅವಳ ಅಪ್ಪ ಅಮ್ಮನನ್ನು ಭೇಟಿ ಮಾಡಿದಾಗ ಹೊಟ್ಟೆಯೊಳಗೆ ಹಾರಾಡಿದ ಚಿಟ್ಟೆಗಳು,ಮುಂಬೈನಿಂದ ವಾಪಸ್ಸು ಬಂದ ಮೇಲೆ ಅವಳನ್ನು ಕೊನೆ ಬಾರಿ ಬೇಟಿ ಮಾಡಿದ ಮಲ್ಲೇಶ್ವರದ ಕಾಫಿ ಡೇ,ಅವಳು ನನ್ನನು ಕಾರಣ ಹೇಳದೆ ತೊರೆದು ಹೋದ ಆ ಗಳಿಗೆ ಎಲ್ಲವು ಒಂದೇ ಸಾರಿ ಮನವನ್ನು ಹಿಂಡಿ ಹಿಪ್ಪೆ ಮಾಡಿತು.ಮನಸ್ಸಿನಲ್ಲಿ ಆದ ಆ ಗಾಯ ಮಾಸಲು ನಾನು ಕುಡಿಯುತಿದ್ದೆ,ಮಹೇಶ ೯೮.೩ ಹಚ್ಚಿ ಕೂತಿದ್ದ.ನಾಳೆ ನಾನು ಬೆಂಗಳೂರಿನಲ್ಲಿ ಇರಲ್ಲಾರೆ, ಇರ ಬಾರದು ಕೂಡ ಎಂದು ಕೊಳ್ಳುತಿರುವ ಆ ಕ್ಷಣದಲ್ಲೇ ಗಾಳಿಪಟದ ಆ ಹಾಡು ೯೮.೩ ನ ಲವ್ ಗುರು ಕಾರ್ಯಕ್ರಮದಲ್ಲಿ ಪ್ರೇಮಿಗಳಿಗಾಗಿ dedicate ಮಾಡಲ್ಪಡುತಿತ್ತು....

ಒಂದೆ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಣ್ಣಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲ್ಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು
ಕೊನೆ ಇರದ ಏಕಾಂತವೆ ಒಲವೆe
ಒಂದೇ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ


ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ?
ಪ್ರಾಣ ಉಳಿಸುವ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ?
ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲ್ಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು , ಕಣ್ಣ ಹನಿ ಸುಮ್ಮನೆ ಒಳಗೆ , ಅವಳನ್ನೇ ಜಪಿಸುವುದೆ ಒಲವೇ ?
ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ?
ಪ್ರಾಣ ಉಳಿಸುವ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ?

ನಾಲ್ಕು ಪದದ ಗೀತೆಯಲ್ಲಿ ಮಿಡಿತಗಳ ಬಣ್ಣಿಸಬಹುದೇ?
ಮೂರು ಸ್ವರದ ಹಾಡಿನಲ್ಲಿ ಮಿಡಿತಗಳ ಬಣ್ಣಿಸಬಹುದೆ?
ಉಕ್ಕಿ ಬರುವ ಕಂಠದಲ್ಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೇ ?
ಹಾಡು ಮುಗಿಯುವ ಹೊತ್ತಿಗೆ ನನ್ನ ಕಣ್ಣುಗಳು ಒದ್ದೆಯಾದವು, ಹೊರಗೆ ಮಳೆಯೂ ನನ್ನ ನೋವಿನಲ್ಲಿ ಪಾಲು ಪಡೆದು ಇನ್ನು ಜೋರಾಗಿ ಬೀಳಲು ಪ್ರಾರಂಬಿಸ್ಸಿತ್ತು .

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು


ನನ್ನ ಆರ್ಕುಟ್ ಗೆ ತುಂಬ ದಿನಗಳು ಕಳೆದ ಮೇಲೆ ಲಾಗಿನ್ ಮಾಡಿದೆ . ನನ್ನ ಜೊತೆ ಓದಿದ ಕೆಲ ಓದಿದ ಕೆಲ ಗೆಳೆಯರನ್ನು ನಾನು ನನ್ನ HITLIST ಗೆ ಸೇರಿಸುತ್ತ, ಕೆಲವರ ಜಾಲವಾಡುತಿದ್ದೆ , ಆ ಕ್ಷಣದಲ್ಲಿ ಸಿಕ್ಕಿತು ನೋಡಿ ಅವನ ಪ್ರೊಫೈಲ್ .ಅವನನ್ನು ನಾನು ಎಂದೂ ಕ್ಷಮಿಸಲಾರೆ,ತಾಂತ್ರಿಕ ಶಿಕ್ಷಣ ನನ್ನ ಜೊತೆ ಓದಿ,ಉನ್ನತ ವ್ಯಾಸಂಗಕ್ಕೆ ಅಮೆರಿಕೆಗೆ ಹೋಗಿ,ಅಲ್ಲೇ ಕೆಲಸ ಪಡೆದು, ಅಲ್ಲಿಯೇ ನೆಲೆ ನಿಂತವ.ಕೆಲ ವರುಷಗಳ ಹಿಂದೆ ಭಾರತಕ್ಕೆ ವಾಪಸ್ಸು ರಜೆಯ ಮೇಲೆ ಬಂದಿದ್ದ.ವಿಮಾನ ನಿಲ್ದಾಣಕ್ಕೆ ಅವನ್ನನ್ನು ಬರ ಮಾಡಿ ಕೊಳ್ಳಲ್ಲು ನಾನು ಹೋಗಿದ್ದೆ.

ವಿಮಾನ ನಿಲ್ದಾಣ ದಿಂದ ಆಚೆ ಬಂದ ಮೇಲೆ ಶುರು ಮಾಡಿದ, ಅಮೇರಿಕಾದ ಗುಣಗಾನ ಅಲ್ಲಿನ ವ್ಯವಸ್ಥೆ,ರಸ್ತೆ,ಆರ್ಥಿಕ ತಾಕತ್ತು,ಅದು ಇದು ಅಂಥ.ಸ್ವಲ್ಪ ಹೊತ್ತು ನಾನು ಸುಮ್ಮನಿದ್ದೆ,ಅವನ ಈ ಗುಣ ನನಗೆ ಹೊಸತಾಗಿರಲಿಲ್ಲ. ವಿಮಾನ ನಿಲ್ದಾಣ ದಲ್ಲಿ ಆದ ಭದ್ರತಾ ತಪಾಸಣೆ ಇಂದ ಹಿಡಿದು,ವಾಹನ ದಟ್ಟಣೆ,ಮಾಲಿನ್ಯ ,corruption,ಪಾಲಿಟಿಕ್ಸ್ ಅದು ಇದು ಅಂಥ ಶುರು ಮಾಡಿದ ಭಾರತವನ್ನು ತೆಗಳಲು .ನನ್ನ ಪಿತ್ತ ನೆತ್ತಿಗೇರಿ ಹೋಯಿತು - "ಮಗನೆ, ಇನ್ನು ಒಂದು ಮಾತು ಆಡಿದರೆ ಇಲ್ಲೇ ರೋಡ್ ಮೇಲೆ ಹಾಕಿ ತುಳಿದು ಸಾಯಿಸ್ಬಿಡ್ತ್ಹೇನೆ. ಹುಟ್ಟಿದ್ದು ಇಲ್ಲಿ, ಓದಿದ್ದು ಇಲ್ಲಿ,ಬೆಳೆದಿದ್ದು ಇಲ್ಲಿ. ನಿನ್ನ ಅಪ್ಪ-ಅಮ್ಮ ಮತ್ತು ನಿನ್ನ ಸಂಪೂರ್ಣ ಕುಟುಂಬ ವರ್ಗ ಇರುವುದು ಇಲ್ಲಿ,ಈಗ ನಿನಗೆ ಡಾಲರ್ ಸಂಬಳ ಕೊಡೊ US job ಇರೋದ್ರಿಂದ, ಅಲ್ಲಿನ ವ್ಯವಸ್ಥೆ ಉತ್ತಮ ಆಗಿ ಹೋಯಿತಾ? ನನ್ ಮಗನೆ , ನಿನಗೆ ಇಂಡಿಯಾ ದಿಂದ ಅತಿಯಾದ ಪ್ರಾಬ್ಲಮ್ ಇದೆ ಅಂದ್ರೆ ವಾಪಸ್ಸು ಬರುವ ದರ್ದು ಯಾಕೆ? ಅಲ್ಲೇ ನಿನ್ನ ಅಮೆರಿಕಾಮ್ಮನ ಮಡಿಲಲ್ಲಿ-I'm for sale, ನನ್ನನ್ನು ದತ್ತು ತಗ್ಗೊಳ್ಲಿ ಅಂಥ ಫಲಕ ಹಾಕೊಂಡು ಬಿದ್ದಿರು" ಎಂದೆ .ಕಾರ್ ನಿಲ್ಲಿಸಿ ಅವನಿಗೆ ೧೦೦ ರೂಪಾಯಿ ಕೊಟ್ಟು, ಬಸ್ಸಿನಲ್ಲಿ ಮನೆಗೆ ಹೋಗು , ನಿನ್ನ ಅಮೆರಿಕಾಮ್ಮನ ಭೂತ ಇಳಿಯುತ್ತೆ eನಡೆ. ಅವನು ಅಂದಿನಿಂದ ನನ್ನನ್ನು ಮತ್ತೆ ಸಂಪರ್ಕಿಸಲು ಪ್ರಯತ್ನ ಮಾಡಲಿಲ್ಲ,ಆದರೆ ಅಮೆರಿಕೆಗೆ ವಾಪಸು ಹೋದ ಮೇಲೆ ನನ್ನ ಮೇಲೆ ಇಲ್ಲದ ಸಲ್ಲದ ಗೂಬೆ ಕೂರಿಸಿ ಅಲ್ಲಿರುವ ಇತರ ಗೆಳೆಯರಿಗೆ ಒಂದು ಮೇಲ್ ಮಾಡಿದ.ನನ್ನ ವಯುಕ್ತಿಕ ನಿಲುವನ್ನು ನೀವು ಕೇಳಿದರೆ ನನಗೆ ಯಾವ ಸಂಸ್ಕೃತಿಯು ಕೆಟ್ಟದಲ್ಲ,ಯಾವ ದೇಶವು ಕೆಟ್ಟದಲ್ಲ,ನೆಲ ಜಲಗಳು ಎಲ್ಲಿ ಹೋದರೂ ಮಾನವನನ್ನು ಪೊರೆದು ಬೆಳಸುತ್ತವೆ. ನಾನು short term assigments ಮೇಲೆ ಹೊರ ದೇಶಗಳಿಗೆ ಹೋಗಿ ಬರುವ ಅವಕಾಶಗಳು ಸಿಕ್ಕಿವೆ. ಅಲ್ಲಿನ ನೆಲ, ಜಲ, ಬಾಷೆ , ಸಂಸ್ಕೃತಿಗಳನ್ನು ಕಂಡು ನಿಬೆರಗಾಗ್ಗಿದೆ. ಬಹಳಷ್ಟು ಕಲಿಯುವ ಸದವಕಾಶ ಒದಗಿ ಬಂದಿದೆ,ಆದರ ನನ್ನ ದೇಶವನ್ನು ಅವುಗಳ ಮುಂದೆ ಎಂದು ತುಲನಾತ್ಮಕ ವಿಮರ್ಶಗೆ ಒರೆ ಹಚ್ಚಲಿಲ್ಲ-ಭಾರತದ ಬಗ್ಗೆ ನನಗೆ ಹೆಮ್ಮೆ,ಗೌರವ ಹೇಗಿದೆಯೋ, ಅದೇ ರೀತಿ ಬೇರೆ ದೇಶಗಳ ಬಗ್ಗೆಯೂ ಇದೆ.ಆದರೆ ನನ್ನ ಕೆಲ ಗೆಳೆಯರು ಇದಕ್ಕೆ ವಿರುದ್ಧವಾಗಿ ಅಲ್ಲಿನ ಸಂಸ್ಕೃತಿಯನ್ನು ಉತ್ತಮ ಎನ್ನುವುದು ನನಗೇಕೋ ಜೀರ್ಣ ಮಾಡಿಕೊಳ್ಳಲಾಗದ ತುತ್ತು. ನಿಜಾಂಶ ತಿಳಿಯದೆ ಅವರು ಮಾಡುವ ಪ್ರಮಾದದಿಂದ ಎಸ್ಟೋ ಬಾರಿ ನನ್ನ ಮನ ನೊಂದಿದೆ,ಇಂದೂ ನೋಯುತ್ತದೆ.ದೂರದಲ್ಲಿ ಎಲ್ಲೋ ಗೋಪಾಲ ಕೃಷ್ಣ ಅಡಿಗರ ಹಾಡು ಕೇಳಿಬರುತ್ತಿದೆ......


ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮನ್ನಿನ್ನ ಕಣ್ಣನು
ಹೂವು ಹಾಸಿಗೆ ಚಂದ್ರ ಚಂದನ ಬಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದಿರಿಂಗಣ
ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದೂ ಇಲ್ಲಿಗೂ ಹಾಯಿತೆ
ವಿವಶವಾಯಿತು ಪ್ರಾಣ ಹ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕಯ್ಯನು
ಯಾವೆ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನೂ

"america america " ಚಿತ್ರದಲ್ಲಿ ಬರುವ ಒಂದು ಸನ್ನಿವೇಶ ಕಣ್ಣುಗಳ ಮುಂದೆ ಬಂದು ನಿಂತಿದೆ- ತನ್ನ ಗೆಳೆಯ ಶಶಾಂಕನಿಗೆ, ಸೂರ್ಯ ಹೇಳುವ ಮಾತು
- ನನ್ನ ಅಮ್ಮ ಹರುಕು ಸೀರೆ ಧರಿಸಿದ್ದಾಳೆ ಎಂದು, ರೇಷ್ಮೆ ಸೀರೆ ಧರಿಸಿದ ಬೇರೆ ಯಾರನ್ನೋ ಅಮ್ಮ ಎನ್ನಲಾಗದು. ಈ ನೆನಪಿನಲ್ಲೇ ಹೊರದೇಶದಲ್ಲಿ ನೆಲೆಸಿ ಭಾರತವನ್ನು ಆಗಸ್ಟ್ ೧೫ ರಂದೋ, ಅಥವಾ ಗಣ ರಾಜ್ಯೋತ್ಸವ ದಂದೋ, ಅಥವಾ ಭಾರತಿಯ ಹಬ್ಬಗಳನ್ನು ಆಚರಿಸುತ್ತಾ ನೆನೆದು ಅವರ ವ್ಯವಸ್ಥೆಉತ್ತಮ, ಭಾರತ ಇನ್ನು ಅನೆ, ಒಂಟೆ, ಎತ್ತಿನ ಗಾಡಿಯ ದೇಶ ವೆಂದು ಬಿಂಬಿಸುತ್ತಿರುವ ಎಲ್ಲ ಮಂಕು ದಿಣ್ಣೆ ದತ್ತು ಪುತ್ರ/ಪುತ್ರಿಯ ರಿಗೂ ಈ ಬ್ಲಾಗನ್ನು ಅರ್ಪಿಸುತ್ತಿದೇನೆ.

Monday, December 22, 2008

ಕಾಫಿ ಲುವಾಕ್ ಎಂಬ ದುಬಾರಿ ಕಾಫಿಯ ಸುತ್ತ....


ಇತ್ತೀಚಿಗೆ ನೋಡಿದ ಒಂದು ಆಂಗ್ಲ ಚಿತ್ರ ಒಂದರಲ್ಲಿ ("Bucket List") ಕಾಪಿಯ ಅತ್ಯಂತ ದುಬಾರಿಯಾದ ವಿದ "KopiLuwak" ನ ವರ್ಣನೆ ಇದೆ. ಕಾಫಿ ಇಲ್ಲದೆ ಹುಚ್ಚನಂಥಾಗುವ ನನಗೆ ಕೋಪಿ ಲುವಾಕ್ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಹಂಬಲ ಹಾಗೆ ಇತ್ತು. ನೆನ್ನೆ ಗೆಳೆಯ ಕರ್ಣ ಫೋನ್ ಮಾಡಿ - "ಮನು ಮಹಾರಾಜರೇ, ಕೋಪಿ ಲುವಾಕ್ ನ ಬಗ್ಗೆ ವಿಕಿಪೀಡಿಯದಲ್ಲಿ ವಿವರ ಪ್ರಕಟವಾಗಿದೆ, ದಯವಿಟ್ಟು ನೋಡಿ, ನೋಡಿದ ಮೇಲೆ ಕಾಫಿ ಕುಡಿಯುತೀರೊ ಇಲ್ಲವೊ, ನನಗೆ ತಿಳಿದಿಲ್ಲ, ಆದರೆ ನಿಮ್ಮ ಕಾಫಿ ಕುಡಿಯುವ ರೋಗಕ್ಕೆ/ಹವ್ಯಾಸಕ್ಕೆ ಕಡಿವಾಣ ಬೀಳುವುದು gurantee ಎಂದ", ನೋಡುವ ಎಂದು ಕರೆ ಕಟ್ ಮಾಡಿ, Kopi Luwak ಎಂದು google ಮಾಡಿದೆ, ನನ್ನ ಅಂತರ್ಜಾಲ ವಿಹಾರಿ ತಂದ ಮೊದಲ ಹುಡುಕಾಟ ತಂತಿ ಕಂಡು ಬೆರಗಾದೆ.


ಲೋಪಿ ಲುವಾಕ್ ಎಂಬುದು ಒಂದು ಬೆಕ್ಕಿನ ಜಾತಿ(civet cat)ಗೆ ಸೇರಿದ ಒಂದು ಪ್ರಾಣಿಯ Indirect Derivative. ಈ ಪ್ರಾಣಿಯುಇಂಡೋನೇಷ್ಯಾ, ಮಲೆಶೀಯಾದ ಅರಣ್ಯಗಳಲ್ಲಿ ಸಿಗುವ ಒಂದು ವಿರಳ ಬೆಕ್ಕು.ನೋಡಲು ಮುಂಗುಸಿಯ ಹಾಗೆ ಇರುವ ಒಂದು ಸಸ್ತನಿ, ಹಣ್ಣು, ಹಂಪಲು, ಗೆಡ್ಡೆಗಳನ್ನೂ ತಿಂದು ಬದುಕುವ ನಿರುಪದ್ರವಿ ಪ್ರಾಣಿ. ಕಾಫಿ ಹಣ್ಣುಗಳನ್ನು ತಿಂದು, ವಿಸರ್ಜಿಸುವ ಮಲದಲ್ಲಿ ಸಿಗುವ ಕಾಫಿ ಬೀಜಗಳನ್ನು ಹುರಿದು ಮಾಡುವ ಕಾಫಿ ಪುಡಿ ಎಂದು ತಿಳಿದು ಬಂತು.ಬೆಕ್ಕುಗಳು ತಾವು ವಿಹರಿಸುವ,ಜೀವಿಸುವ ಪ್ರಕೃತಿಯಲ್ಲಿ, ತಮ್ಮ ಗಡಿ ಗಳನ್ನೂ ಮಲ, ಮೂತ್ರ ವಿಸರ್ಜಿಸಿ ಗುರುತು ಮಾಡಿಕೊಳ್ಳುತವೆ . ಈ ವಿಧವಾಗಿ ವಿಸರ್ಜಿಸಿದ ಮಲವನ್ನು , ಅಲ್ಲಿನ ಬುಡಕಟ್ಟು ಜನ ಹೆಕ್ಕಿ ತಂದು, ತೊಳೆದು, ಬೀಜಗಳನ್ನು ಹುರಿದು,ಮಾಡಿದ ಕಾಫಿ ಪುಡಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ.ಈ ರೀತಿ ಸಿಗುವ ಪುಡಿ ಇಂದ ಮಾಡುವ ಕಾಫಿಗೆ ನಾವು ದಿನ ನಿತ್ಯ ಕುಡಿಯುವ ಕಾಫಿಗಿಂತ ಭಿನ್ನವಾದ ಒಗರು ಮತ್ತು ತನ್ನದೇ ಆದ ಒಂದು ಪರಿಮಳ ಇರುತ್ತದೆ, ಇದರ ಬೆಲೆ ಒಂದು ಕಪ್ಪಿಗೆ ಕೇವಲ ೨೨೫೦ ರುಪಾಯಿ. ಇನ್ನು ಈ ಉದ್ಯಮ ಕೇವಲ ಇಂಡೋನೇಷ್ಯಾ, ಮಲೇಶಿಯಾ ದಲ್ಲಿ ಮಾತ್ರ ಪ್ರಚಲಿತ ಕಾರಣ - ಈ ಪ್ರಾಣಿ ಇಲ್ಲಿ ಮಾತ್ರ ಸಿಗುವುದು, ಮತ್ತು ಪ್ರತಿ ವರ್ಷ ಜಾಗತಿಕ ಮಾರುಕಟ್ಟೆಗೆ ಸರಾಸರಿ ೪೫೦ ಕಿಲೋ ಮಾತ್ರ ಸಪ್ಲೈ ಆಗುವುದು. ಜಪಾನ್ ಮತ್ತು ಅಮೆರಿಕದಲ್ಲಿ ಇದಕ್ಕೆ ಬೇಡಿಕೆ ಜಾಸ್ತಿ. "ಕೋಪಿ ಲುವಾಕ್" ಎಂಬ ಪೇಯಕ್ಕೆ ಇದಕ್ಕೂ ಮಿಗಿಲಾದ ವರ್ಣನೆ ಸಾದ್ಯವಿಲ್ಲದ ರೀತಿ ವರ್ಣಿಸಿರುವ ವಿಕಿಪೀಡಿಯಾ ಗೆ, ಕರೆ ಮೂಲಕ ವಿಷಯ ತಿಳಿಸಿದ ಗೆಳೆಯ ಕರ್ಣನಿಗೂ ದೊಡ್ಡ ನಮಸ್ಕಾರ ಮಾಡುತ್ತ, ಕಾಫಿ ಕುಡಿಯಲು ಅಮೃತ್ ಕಡೆ ಹೊರತ್ತಿದೇನೆ ...ಮತ್ತೆ ಸಿಗುವ.


Thursday, December 4, 2008

ಮದನನ ಮರುನಾಮಕರಣ


ನನಗಾಗ ಸುಮಾರು ೬-೭ ವರುಷ ವಯಸ್ಸು , ಮೈಸೂರಿನಲ್ಲಿ ಅಜ್ಜಿ-ಅಜ್ಜನ ಮನೆಯಲ್ಲಿದ್ದು ಶಾಲೆಗೆ ಹೋಗಿ ಬರುತ್ತಿದ್ದೆ, ಬೇಸಿಗೆಯ ರಜಾ ಮುಗಿದು, ಶಾಲೆ ಪ್ರಾರಂಭವಾದ ಎರಡನೇ ದಿನ, ಮೊದಲನೆ period ಮುಗಿದು, ಎರಡನೇ period ನಲ್ಲಿ ಲತಾ ಮಿಸ್ಸು, ಗಣಿತ ಪಾಠ ಮಾಡುತ್ತಲಿದ್ದರು , ಶಾಲೆಯ peon ಜೋಸೆಫ್ ಬಂದು, ಮಿಸ್ಸಿಗೆ ಒಂದು ಸಣ್ಣ ಚೀಟಿಯನ್ನು ಕೊಟ್ಟ. ಲತಾ ಮಿಸ್ಸು ಒಂದು ಕ್ಷಣ ಪಾಠ ನಿಲ್ಲಿಸಿ, ಚೀಟಿ ನೋಡಿ, ಮಕ್ಕಳ ಕಡೆ ತಿರುಗಿ- "Children, we have a new boy coming to our class and his name is Madan Chandrakant Kulkarni" ಎಂದೊಡನೆ, peon ಜೋಸೆಫ್ ಹಿಂಬದಿ ನಿಂತಿದ್ದ ಒಬ್ಬ ಹುಡುಗ, ಹೆದರುತ್ತ ಮುಂದೆ ಬಂದು ನಿಂತ. ಲತಾ ಮಿಸ್ಸು ಅವನ ಹತ್ತಿರ ಹೋಗಿ, "my child welcome to the school" ಅಂಥ ಹೇಳಿ, ಆ ಹುಡುಗನನ್ನು ಜಾಗ ನೋಡಿ, ನನ್ನ ಮುಂದಿನ ಬೆಂಚಿನಲ್ಲಿ ಕುಳಿತು ಕೊಳ್ಳ ಮಾಡಿದರು.

ಅವತ್ತು ಶಾಲೆ ಮುಗಿದು, ನಾನು ಮನೆಗೆ ಬೇರೆ ಗೆಳೆಯರೊಡನೆ ಹೊರಟೆ. ಮದನ ಕೂಡ ನಮ್ಮ ಜೊತೆ ಗೂಡಿ ಬಂದ,ಅವನು ಕೂಡ ನಮ್ಮ ಮನೆಯ ರಸ್ತೆಯಲ್ಲೇ, ಎಡ ಬದಿಯ ಮೂರನೇ ಮನೆಯಲ್ಲಿ ಬಾಡಿಗೆಗೆ ಅವರ ಸಂಸಾರ ಹುಬ್ಬಳ್ಳಿ ಇಂದ ಬಂದಿತ್ತು.ದಿನಗಳು ಕಳೆದ ಹಾಗೆ, ಮದನ ನನ್ನ ಸ್ನೇಹಿತರ ಗುಂಪಿನಲ್ಲಿ ಒಬ್ಬನಾದ. ಹೀಗೆ ಒಂದು ದಿನ ಶನಿವಾರದ ಮಾರ್ನಿಂಗ್ ಕ್ಲಾಸ್ ಮುಗಿಸಿ, ಮನೆಯ ಹತ್ತಿರ ನಾನು, ಚೇತು ಮತ್ತು ಮದನ electrician ಕೆಂಪನ ಅಂಗಡಿಗೆ ಹೋಗಿ ಕಾಡಿ-ಬೇಡಿ ರೇಡಿಯೋ ಸ್ಪೀಕರ್ ಗಳಲ್ಲಿ ಸಿಗುವಂಥ ಒಂದು ಇಡಿ ಅಂಗೈ ಅಗಲದ magnet ಸಂಪಾದಿಸಿ ಯುದ್ಧ ಗೆದ್ದ ವೀರರಂತೆ ವಿಜಯೋತ್ಸವ ಆಚರಿಸುತ್ತಿರುವಾಗ, ಚೇತು "ಇದಕ್ಕೆ ರಸ್ತೆ ಮೂಲೆಯಲ್ಲಿರುವ ಇಮಾಂ ಸಾಬಿಯ cycle ಅಂಗಡಿಯ ನೆಲದ ಮೇಲೆ ಬಿದ್ದಿರುವ ballbearing ಚೆಂಡುಗಳು ಸಿಕ್ಕರೆ ಅದರ ಮಜಾನೆ ಬೇರೆ ಎಂದ", ಎಲ್ಲರೋ ಒಡಗೂಡಿ, ಇಮಾಂ ಸಾಬಿಯ ಕ್ಯ್ಕ್ಲೆ ಅಂಗಡಿಗೆ ಹೋಗಿ ಮತ್ತೆ ಕಾಡಿ- ಬೇಡಿ ಒಂದಸ್ತು ಉಕ್ಕಿನ ಗುಂಡುಗಳನ್ನು ಸಂಪಾದಿಸಿದೆವು. ಹೀಗೆ ಸಂಪಾದಿಸಿದ ಗುಂಡುಗಳನ್ನು, ಮನೆಗೆ ತಂದು, ನಿರ್ಮಾ ಪುಡಿ ಹಾಕಿ, ಪಳ ಪಳ ಹೊಳೆಯುವ ಹಾಗೆ ಮಾಡಿ, ಸ್ಪೀಕರ್ magnet ಗೆ ಅಂಟಿಸಿ ಕೊಂಡು ಆಟವಾಡುವಾಗ ಯಾವುದೊ ಒಂದು ಕ್ಷಣದಲ್ಲಿ ಒಂದು ಗುಂಡು ಮದನನ ಕಿವಿ ಹೂಕು ಕೂತು ಬಿಟ್ಟಿತು. ಮೊದಮೊದಲು ನಾನು, ಚೇತು ಕೂಡಿ ಅದನ್ನು magnet ಉಪಯೋಗಿಸಿ ತೆಗೆಯ ಪ್ರಯತ್ನ ಮಾಡಿದೆವು, ಅದು ಜಗ್ಗಲಿಲ್ಲ.ಕೊನೆಗೆ ಮದನನನ್ನು ಅವನ ಅಪ್ಪ, ಅಮ್ಮ ಕೂಡಿ ಎಂತ specalist ಹತ್ತಿರ ಕರೆದು ಕೊಂಡು ಹೋದರು .

ಅವರು ಅದನ್ನು ಒಂದು ಸಣ್ಣ ಗುಗ್ಗೆ ತೆಗೆಯುವ ಸಾಧನ ಉಪಯೋಗಿಸಿ ತೆಗೆದು, ಮದನನ ಬಲ ಕಿವಿಗೆ ಉಪಚಾರ ಮಾಡಿ ಕಿವಿ ಮುಚ್ಚುವ ಹಾಗೆ ಪಟ್ಟಿ ಬಿಗಿದರು. ಮದನ ಮುಂದಿನ ದಿನ ಶಾಲೆಗೆ ಬಂದಾಗ, ಒಂದು ಕಿವಿಯಲ್ಲಿ ಮಾತ್ರ ಕೇಳಿಸಿಕೊಳ್ಳನವನಾಗಿದ್ದ. ಲತಾ ಮಿಸ್ಸು ಅವನ್ನನ್ನು ಮುಂದಿನ ಬೆಂಚಿನಲ್ಲಿ ಕುಳ್ಳರಿಸಿ ಪಾಠ ಶುರು ಮಾಡಿದರು. ಮಧ್ಯಾನದ lunch ಬ್ರೇಕ್ ನಲ್ಲಿ baal bearing ಪುರಾಣ ಹೇಳಲು ಮಾಡಿ ಮದನ ಹೋಗಿ ಗೆಳೆಯರ ಬಳಗದಲ್ಲಿ BALL BEARING ಮದನ ಎಂದು ಕರೆಯಲ್ಪಡನಾದ.

Wednesday, September 3, 2008

ಮೈಸೂರು ಎಂದರೆ....

ಮೈಸೂರಿನ ಸೊಗಡನ್ನು ಅನುಭವಿಸಬೇಕೆಂದರೆ ಅದು ರಜಾದಿನಗಳಲ್ಲಿ ಅಥವಾ ಶನಿವಾರ/ಭಾನುವಾರಗಳ್ಳಲ್ಲಿ ಆಗದು, ಅನ್ಯಥ ಭಾವಿಸಬೇಡಿ. ಮೈಸುರಿನಲ್ಲೇ ಹುಟ್ಟಿ, ಬೆಳೆದು, ಓದಿ ಸುಮಾರು ೨೯ ವರ್ಷಗಳ ಜೀವ ಸವೆಸಿರುವ ನನಗೆ ನಿಜವಾದ ಮೈಸೂರು ಅನುಭವಿಸಬೇಕಾದರೆ ನೀವು ಮರದ ಸುತ್ತ ಹಬ್ಬಿ ಬೆಳೆವ ಸಣ್ಣ ಬಳ್ಳಿಯ ಹಾಗೆ ಮೈಸೂರಿನಲ್ಲಿ ನೆಲೆಸಿ, ಮೈಸೂರಿನ ಜೊತೆ ಬೆಳೆದರೆ ಮಾತ್ರ ಮೈಸೂರಿನ ನಿಜವಾದ ಸೊಗಡು ಅನುಭವಿಸಲು ಸಾಧ್ಯ.

ನೀವು ಸಂಜೆ WALK ಹೋದಾಗ , ನಿಮ್ಮ ಮನೆಯ ರಸ್ತೆ ಮೂಲೆಯಲ್ಲಿರುವ ರಾಮ ಮಂದಿರದ ಅರ್ಚಕರು ನಿಂತು ನಿಮ್ಮ ಜೊತೆ ಉಭಯ ಕುಶಲೋಪರಿ ಮಾತನಾಡಿ, ನಾಳೆ ಬೆಳಿಗ್ಗೆ ಇರುವ ಪೂಜೆಯ ಬಗ್ಗೆ ಹೇಳಿ ಪ್ರಸಾದ ವಿನಿಯೋಗಿಸಿ ಹರಸಿದಾಗ ಅವರಲ್ಲಿ ಪ್ರೀತಿಯಲ್ಲಿ ಮೈಸೂರನ್ನು ಕಾಣುವಿರಿ. ಹೀಗೆ ಮುಂದೆ ಸಾಗುವಾಗ ಮುಖ್ಯ ರಸ್ತೆಯಲ್ಲಿರುವ ಪುಸ್ತಕದ ಅಂಗಡಿಯವರು "ಕಸ್ತೂರಿ" ಅಥವಾ "ಮಯೂರ" ದ ಇತ್ತೀಚಿನ ಆವೃತ್ತಿ ನಾಳೆ ಬರುವುದಾಗಿ ಜ್ಞಾಪಿಸಿ , ನಾಳೆ ನೀವು ಸಿಕ್ಕಾಗ ನಿಮಗಾಗಿ ಒಂದು ಪ್ರತಿ ಕೊಡುವ ಭಾವದಲ್ಲಿ ಮೈಸೂರನ್ನು ಕಾಣುವಿರಿ. ಮುಂಜಾನೆ ನಿಮ್ಮ ಮನೆಯ ಹಾಲು ಸರಬರಾಜು ಮಾಡುವ ಹುಡುಗ ನಿಮ್ಮ ಬರುವಿಕೆಯನ್ನು ಮುಂಚೆಯೇ ಗ್ರಹಿಸಿ ೧/೨ ಲೀಟರ್ ಹಾಲು ಜಾಸ್ತಿ ಕೊಟ್ಟು ಹೋದ ಆದರದಲ್ಲಿ ಮೈಸೂರನ್ನು ಕಾಣುವಿರಿ. ಪಕ್ಕದ ಮನೆಯ ಆಂಟಿ ಬಿಸಿ ಬೋಂಡ ಮಾಡಿ, ನಿಮ್ಮನ್ನು ನಿಮ್ಮ ಚಿಕ್ಕಂದಿನ ಹೆಸರಿಡಿದು ಕರೆದು ಕೊಡಮಾಡುವ ಅಕ್ಕರೆಯಲ್ಲಿ ಮೈಸೂರನ್ನು ಕಾಣುವಿರಿ. ಪಕ್ಕದ ಮನೆಯ ಸುಜಾತ ಟೀಚರ್ ಮನೆಗೆ ಪಾಠಕ್ಕೆ ಬರುವ ಚಿಣ್ಣರನ್ನು ಕಂಡು ನಿಮ್ಮ ಬಾಲ್ಯದ ನೆನೆಪನ್ನು ನೆನೆವ ಕ್ಷಣದಲ್ಲಿ ಮೈಸೂರನ್ನು ಕಾಣುವಿರಿ. ಕುಕ್ಕರಳ್ಳಿ ಕೆರೆಯ ಸುತ್ತ ಒಂದು ಸುತ್ತು ಹೊಡೆದು ಗುಲಗಂಜಿ ಬೀಜ ಹೆಕ್ಕಿ ಜೇಬು ತುಂಬಿಕೊಂಡ ಗಳಿಗೆಯಲ್ಲಿ ಮೈಸೂರನ್ನು ಕಾಣುವಿರಿ. ಚಾಮುಂಡಿ ಎಕ್ಸ್ಪ್ರೆಸ್ ರೈಲು ಹೊರಟಾಗ ,ಮೊದಲ ಬಾರಿ ಬೆಂಗಳೂರಿಗೆ ಹೊರಟ ಮದುವೆಯಾದ ಮದುಮಗಳ ತಾಯಿಯ ಬೀಳ್ಕೊಡುಗೆಯ ಕಂಬನಿಯಲ್ಲಿ ಮೈಸೂರನ್ನು ಕಾಣುವಿರಿ.ಸಿಟಿ ಬಸ್ಸಲ್ಲಿ ಸಿಕ್ಕ ಹಳೆಯ ಗೆಳೆಯ ತನ್ನ ತಂಗಿಯ ಮದುವೆಯ ಆಮಂತ್ರಣ ಬಸ್ಸಲ್ಲಿ ಕೊಟ್ಟಾಗ ಇರುವ ಗೆಳೆತನದಲ್ಲಿ ಮೈಸೂರನ್ನು ಕಾಣುವಿರಿ. ಚೆಲುವಾಂಬ ಉದ್ಯಾನವನದ ಬೆಂಚಿನ ಮೇಲೆ ಕುಳಿತು, ಸುತ್ತಲು ಇರುವ ಹೂವುಗಳ ಅಂದ ಸವಿಯುತ್ತ ತಿಂದ ಹುರಿದ ಕಡ್ಲೆಕಾಯಿಯಲ್ಲಿ ಮೈಸೂರನ್ನು ಕಾಣುವಿರಿ. ಕಾಲೇಜಿಗೆ ಬಂದಾಗ ತರಗತಿಗಳನ್ನು ಬಂಕ್ ಮಾಡಿ ವುಡ್ ಲಾಂದ್ಸ್ ಥಿಯೇಟರ್ನಲ್ಲಿ ಕದ್ದು ಮುಚ್ಚಿ ನೋಡಿದ ಶಾರುಖ್ ಖಾನ್ ನಟಿಸಿದ "ಬಾಜಿಗರ" ಚಿತ್ರವೋ, ಅಥವಾ ರಾಜ ಕಮಲ್ / ಸ್ಟರ್ಲಿಂಗ್ ಥಿಯೇಟರ್ನಲ್ಲಿ ರಾತ್ರಿಯ ಎರಡನೇ ಪ್ರದರ್ಶನದಲ್ಲಿ ನೋಡಿದ ಜೇಮ್ಸ್ ಬಾಂಡ್ ಚಿತ್ರವೋ ನೆನಪಿಗೆ ಬಂದಾಗ, ಆ ನೆನಪಿನಲ್ಲಿ ಮೈಸೂರನ್ನು ಕಾಣುವಿರಿ. ಶಾರದ ವಿಳಾಸ ಕಾಲೇಜಿನ ಜನರಲ್ ಸ್ಟುಡೆಂಟ್ ಬಾಡಿ ಎಲೆಕ್ಷನ್ ವೇಳೆ ನಡೆಯುವ ಹೊಡೆದಾಟದಲ್ಲಿ ಮೈಸೂರನ್ನು ಕಾಣುವಿರಿ. NIE-SJCE ಹುಡುಗರ ನಡುವೆ ಆಗುವ ದೈವಾಸುರ ಕ್ರಿಕೆಟ್ ಕಾಳಗದಲ್ಲಿ ಮೈಸೂರನ್ನು ಕಾಣುವಿರಿ. ನಂಜು ಮಳಿಗೆ ಯಲ್ಲಿ ಇಮಾಂ ಸಾಬಿಯ ಅಂಗಡಿಯಲ್ಲಿ ಕೊಂಡು ಪಟದ ಹಬ್ಬದ ದಿನ ಹಾರಿಸಿದ ಪಟ ದೂರವಾಣಿ ಕಂಬಕ್ಕೆ ಸಿಕ್ಕಿ ಹರಿದಾಗ ಆದ ನಿರಾಸೆಯಲ್ಲಿ ಮೈಸೂರನ್ನು ಕಾಣುವಿರಿ. RTO ಸರ್ಕಲ್ ಹತ್ತಿರ ಇರುವ ನಾಯ್ಡು ಅಂಗಡಿಯಲ್ಲಿ ಕುಡಿದ ದ್ರಾಕ್ಷಿ ರಸ ಮತ್ತು ಒಡೆದ ದಮ್ಮಿನಲ್ಲಿ ಮೈಸೂರನ್ನು ಕಾಣುವಿರಿ. GTR ನಲ್ಲಿ ತಿಂದ ಮಸಾಲೆ ದೋಸೆ ಮತ್ತು ಕುಡಿದ ಕಾಫೀಯ ಸ್ವಾದದಲ್ಲಿ ಮೈಸೂರನ್ನು ಕಾಣುವಿರಿ. ಮೈಲಾರಿ ಹೋಟೆಲಿನ ಬಿರ್ಯಾನಿಯ ಸ್ವಾದದಲ್ಲಿ ಮೈಸೂರನ್ನು ಕಾಣುವಿರಿ.

ಮೈಸೂರು ಎಂದರೆ ನಾನು ಬೆಳೆದ ಮೈಸೂರು, ನನ್ನ ಮೈಸೂರು , GRS ಬರುವ ಮುಂಚೆ ಇದ್ದ ಮೈಸೂರು, ರಸ್ತೆ ಇಕ್ಕೆಲಗಳನ್ನು ಕೊರೆದು ಕೆಳಸೇತುವೆ/ ಮೇಲ್ಸೆತುವಗಳನ್ನೂ ಮಾಡುವ ಮುಚೆ ಇದ್ದ ಮೈಸೂರು, Iನ್ಫಾಸ್ಯ್ಸ್ ಮೈಸೂರಿಗೆ ಬರುವ ಮುಂಚೆ ಇದ್ದ ಮೈಸೂರು, ವರ್ತುಲ ರಸ್ತೆ ಆಗುವ ಮುಂಚೆ ಇದ್ದ ಮೈಸೂರಿನಲ್ಲಿ ಬೆಳೆದವರು ನನ್ನ ಈ ಭಾವನೆಗಳಿಗೆ ಸ್ಪಂದಿಸಬಲ್ಲರೆನೋ? ಮೈಸೂರಿಗೆ ತಂತ್ರಾಂಶ ವಿಜ್ಞಾನದ ೩ ತಿಂಗಳು ತರಬೇತಿಗೆ ಬಂದೋ, ಅಥವಾ ಯಾವುದೊ ಕಾಲೇಜಿನ ಕೋರ್ಸ್ ಮಾಡಲು ಬಂದೋ, ಕೆಫೆ ಕಾಫೀ ಡೇ ಕಾಫೀ, ಪಿಜ್ಜಾ ಕಾರ್ನರ್ ಪಿಜ್ಜಾ ತಿನ್ನುವುದನ್ನೇ ಚಿಲ್ಲಿಂಗ್ ಔಟ್ ಇನ್ ಮೈಸೂರು ಎಂತಲೋ ಇರುವರಿಗೆ, ನನ್ನ ಹೃದಯದಲ್ಲಿರುವ ಭಾವಗಳು ಅರ್ಥವಾಗುವುದೇ???

Tuesday, February 26, 2008

ಅಲೆಮಾರಿಯ ಮೊದಲ ನೆನಪು

ಮದುವೆಯಾಗಿ ಮನೆ ಮಾಡಿದ ಮೇಲೆ ಆಫೀಸಿಗೆ ಕಂಪನಿ ಕ್ಯಾಬ್ನಲ್ಲಿಯೇ ಬರುವ ಅಬ್ಯಾಸವನ್ನು ರೂಡಿಸಿ ಕೊಂಡಿದೆನೆ. ಹೀಗೆ ಆಫೀಸಿಗೆ ಬರುವ ದಿನ, ಕಿಟಕಿ ಗಾಜನ್ನು ಕೆಳಗೆ ಇಳಿಸಿ, ರಸ್ತೆಯಲ್ಲಿ ಇರುವ ವಾಹಗಳನ್ನು, ಜನಗಳ್ಳನ್ನು ನೋಡುವುದು ಒಂದು ಹವ್ಯಾಸವೇ ಆಗಿ ಹೋಗಿದೆ. ಆ ಹವ್ಯಾಸವು ಒಂದು ಹೆಜ್ಜೆ ಮುಂದೆ ಹೋಗಿ, ಹೀಗೆ ಆ ವಾಹನಗಳು, ಅದರೊಳಿರುವ ಜನರು ಏನು ಯೋಚಿಸುತಿರಬಹುದು, ಅವರ ಹಾವ ಭಾವಗಳನ್ನು ನೋಡುತ್ತ ಮನಸಿನಲ್ಲೇ ಕಥೆ ಕಟ್ಟುವುದು ಹೀಗೆ ಪ್ರಿಯವಾದ ಹವ್ಯಾಸವಾಗಿ ಮಾರ್ಪಟ್ಟಿದೆ.

ಇವತ್ತು ಬೆಳಿಗ್ಗೆ ಆಫೀಸಿಗೆ ಬರುವಾಗ, ಹಾಗೆ ಮೈಸೂರು, ನನ್ನ ಬಾಲ್ಯ, ಅಜ್ಜಿ-ಅಜ್ಜನ ಮನೆಯಲ್ಲಿ ನಾನು ಒಂದನೇ ತರಗತಿಯಿಂದ ನನ್ನ ತಾಂತ್ರಿಕ ಶಿಕ್ಷಣ ಮುಗಿಸಿ, ವ್ಯವಹಾರ ನಿರ್ವಹಣದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಕೆಲಸ ಪಡೆದು ಬೆಂಗಳೂರಿಗೆ ಬಂದು, ನೆಲೆ ನಿಂತು, ಮದುವೆಯಾಗಿ ಕೆಳೆದ ಈ ದಿನದ ವರೆಗೂ ಪ್ರಮುಖವಾಗಿ ಏನನ್ನು ಮಾಡದೆ, ಮೈಸೂರಿನ ಬೀದಿಗಳಲ್ಲಿ ನರೇಶನ ಜೊತೆಗೂಡಿ ಸುತ್ತಿದ ಆ ದಿನಗಳು ನೆನಪಿಗೆ ಬಂದವು. ಆ ದಿನಚರಿಯಲ್ಲಿ ಊಟ,ನಿದ್ದೆ, ತಿರುಗಾಟ ಬಿಟ್ಟರೆ ಏನಕ್ಕೂ ಜಾಗವಿರಲಿಲ್ಲ. ಬೆಳಿಗ್ಗೆ ಅಜ್ಜನ ತಿಂಡಿ(ಅಂದರೆ ಸುಮಾರು ೧೦ ಗಂಟೆ) ಮುಗಿಯುವ ಹೊತ್ತಿಗೆ ಎದ್ದು, ಸ್ನಾನ ಮುಗಿಸಿ,ತಿಂಡಿ ತಿಂದು, ನರೇಶನ ಜೊತೆಗೂಡಿ ಬೈಕೇರಿ ಹೊರಟರೆ, ಕಾಳಿದಾಸ ರಸ್ತೆ ದಾಟಿ, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಮುಂದಣ ರಸ್ತೆ ದಾಟಿ ಮುಂದೆ ಹೋದರೆ ಬರಿ ಬಟಾ ಬಯಲು.ವಿಜಯನಗರ ಬಡಾವಣೆ ರೂಪುಗೊಂಡು ಆಕಾರ ಪಡೆದ ದಿನಗಳವು, ಸೈಟ್ ಕೊಂಡು ಬೇಲಿ ಹಾಕಿಸಿಕೊಂಡ ಒಂದು ಶ್ರೀಮಂತ ಕುಟುಂಬ,ಸ್ಯೆಟನ್ನು ನೋಡಿಕೊಳ್ಳಲು ಇರಲಿ ಎಂದು ಒಬ್ಬ ಸೆಕ್ಯುರಿಟಿ ಗಾರ್ಡ್ ಅನ್ನು ನೇಮಿಸಿದ್ದರು. ಅವನು ತನ್ನ ಕುಟುಂಬ ಸಮೇತನಾಗಿ ಸೈಟಿನ ಒಂದು ಮೂಲೆಯಲ್ಲಿ ಒಂದು ಗುಡಿಸಲು ಹಾಕಿ ಅದರ ಮುಂದೆ ಒಂದು ಪೆಟ್ಟಿಗೆ ಇಟ್ಟು ಒಂದು ಅಂಗಡಿಯನ್ನು ಪ್ರಾರಂಬಿಸಿದ ದಿನಗಳವು.

ನನಗೆ ಮೈಸೂರಿನ ರಸ್ತೆಗಳನ್ನು ಸುತ್ತಿ ಸುಸ್ತು ನಿವಾರಿಸಿಕೊಳ್ಳಲು ಒಂದು ಜಾಗ ಸಿಕ್ಕ ಹಾಗಾಯಿತು, ಅದಕಿಂಥ ಮಿಗಿಲಾಗಿ ನನಗೋ ದಮ್ಮು ಹೊಡೆಯಲು ಹೇಳಿ ಮಾಡಿಸಿದಂಥ ಜಾಗ,ಒಂದು ಚೋಟ ಟೀ, ಎರಡು ಮಸಲೆವಡೆ, ೨ ಕಿಂಗ್ ಸಿಗರೇಟು ಇವೆಲ್ಲವನ್ನು ನಾನು ಮುಗಿಸಲು ತೆಗೆದು ಕೊಳ್ಳುತಿದ್ದ ಸಮಯ ಬರೋಬರ್ರಿ ೩ ಗಂಟೆಗಳ ಸಮಯ. ನರೇಶ ದಿಪ್ಲೋಮಾದ ಮೊದಲ ವರ್ಷದಲ್ಲಿ ೨ ವಿಷಯದಲ್ಲಿ ಅನುತೀರ್ಣನಾಗಿ ಮನೆಯಲ್ಲಿ ಕಾಲ ಕಳೆಯುತಿದ್ದ, ನನಗೋ ನನ್ನ ತಾಂತ್ರಿಕ ಶಿಕ್ಷಣ ಮುಗಿಸಿ, ಒಂದು ಕಂಪನಿಯಲ್ಲಿ ಕೆಲಸ ಮಾಡಿ, ಅದನ್ನು ತೊರೆದು, ಮುಂದಕ್ಕೆ ಓದುವುದಕ್ಕೆ ಪರೀಕ್ಷೆ ತಯಾರಿ ನಡೆಸುವ ನೆಪದಲ್ಲಿ ಸುಮ್ಮನೆ ಸುತ್ತುವ ಹಂಬಲ. ಹೀಗೆ ತಿರುಗಾಡುತಿದ್ದ ದಿನಗಳಲ್ಲಿ ನಾವು ನಮಗಾಗಿ ಮಾಡಿಕೊಂಡ ಒಂದು ಅಡ್ಡ. ನೆನಪಿನ ಬಾನಂಗಳದಿಂದ ಹೊರ ಬಂದು ನರೇಶನಿಗೆ ಕರೆ ಮಾಡಿದೆ, ಅವನೋ ಡಿಸೈನ್ ಲೆಬೊರೇಟರಿಯಲ್ಲಿ ಕೂತು ಏನನ್ನೊ ಮಾಡುತಲಿದ್ದ, ಹಿಂಬದಿಯಲ್ಲಿ ಯಂತ್ರಗಳ ಶಬ್ಧ, ಅವನ ಕಂಪ್ಯೂಟರ್ನ ಮಧ್ಯ ಅವನ ಧ್ವನಿಯು ಬಾಸವಗುತಿತ್ತು . ಹೀಗೆ ನೆನಪಿನ ದೋಣಿಯಲ್ಲಿ ಸಾಗಿ ಇಬ್ಬರು ಆ ಜಾಗದ ಬಗ್ಗೆ ವಿಚಾರ ಮಾಡುತ್ತಿರುವಾಗ, ನರೇಶ್ ಹೇಳಿದ ಮಾತು ಮನಸನ್ನು ನಾಟಿತು - ಮಗ, ಆ ಸೆಕ್ಯುರಿಟಿ ಗಾರ್ಡ್ ಮತ್ತು ಅವನ ಕುಟುಂಬ ನಂಜನಗೂದಿಗೆ ಹೋಗಿ ಬರುವಾಗ ರಸ್ತೆ ಅಪಘಾತವಾಗಿ ನಿರ್ನಾಮವಾದ ವಾಸ್ತವ, ಬದುಕಲ್ಲಿ ಏನು ಗುರಿ ಇಲ್ಲದ ಆ ದಿನಗಳಲ್ಲಿ ನಾವು ಕಾಲ ಕಳೆದ ಆ ಪೆಟ್ಟಿಗೆ ಅಂಗಡಿ, ಆ ಅಜ್ಜ ಮಾಡಿ ಕೊಟ್ಟ ಮಸಾಲೆ ವಡೆ, ಚಹಾ, ಅವನ ಮೊಮ್ಮಗಳು ಆಡುತಿದ್ದ ಟೀಚರ್ ಆಟ ಎಲ್ಲ್ವ ಮನಸ್ಸಿನ ಪರದೆಯ ಮೇಲೆ ಇನ್ನು ಹಾಗೆ ಉಳಿದಿದೆ. ಪಕ್ಕದ ಕಾರಿನ ಎಫ್. ಎಂ ರೇಡಿಯೋದಲ್ಲಿ -- ಆಡಿಸಿ ನೋಡು ಬೀಳಿಸಿ ನೋಡು ಹಾಡು ಬರುತಿತ್ತು. ಅದು ಈ ಘಟನೆಗೆ ಹೊಂದಬಹುದೇನೋ ಅಲ್ಲವೇ ?