Tuesday, August 3, 2010

ಮೈಲಾರಿ ಮತ್ತು ಬಾಳೆ ಹಣ್ಣಿನ್ನ ವೃತ್ತಾಂತ

ಸುಮಾರು ೧೨-೧೩ ವರುಷಗಳ ಹಿಂದಿನ ಮಾತು. ನಾನು ಪುತ್ತೂರು ಸಮೀಪದ ಒಂದು ಹುಡುಗರ ವಸತಿ-ಶಾಲೆಯಲ್ಲಿ ಒಂದನೇ ಪಿ.ಯು.ಸಿ ಓದುತ್ತಿದ್ದೆ. ತರಗತಿಯ ಸುಮಾರು ೬೦ ಹುಡುಗರನ್ನು ೧೫ ರೂಮಿನಲ್ಲಿ, ಒಂದು ರೂಮಿಗೆ ೪ ಹುಡುಗರ ಹಾಗೆ ವಿಂಗಡಿಸಿ ವಸತಿ ಕಲ್ಪಿಸಿದ್ದರು. ನನ್ನ ರೂಮಿನಲ್ಲಿ ನಾನು, ರಾಜಣ್ಣ, ನಿತಿನ, ಬಾಲಿ ಆಲಿಯಾಸ್ ಬಾಲಚಂದ್ರ ಇದ್ದೆವು. ಕಡಲು ಸೀಮೆಯ ಮಳೆಗಾಲ, ದೋ ಎಂದು ಮಳೆ ಸುರು ಆದರೆ, ಮಳೆಗಾಲ ಮುಗಿಯುವವರೆಗೂ ದಿನಂಪ್ರತಿ ಮಳೆ ಬೀಳುತ್ತಲೇ ಇರುತ್ತದೆ. ಹೀಗಿರುವಾಗ, ದಿನಂಪ್ರತಿ ಕಾಲೇಜು ಮುಗಿದ ಮೇಲೆ, ಮೆಸ್ಸಿನಲ್ಲಿ ತಿಂಡಿ-ಕಾಫಿ ಮುಗಿಸಿ, ಕೋಣೆಯಲ್ಲೇ ಇದ್ದು ಪಾಠಗಳನ್ನು ಓದಿಕೊಳ್ಳುವುದೋ, ಬಟ್ಟೆ ಒಗೆಯುವುದೋ, ಲ್ಯಾಬು-ರೆಕಾರ್ಡು ಬರೆದು ಮುಗಿಸುವುದೋ, ಇಲ್ಲ ಸುಮ್ಮನೆ ಹರಟೆ ಹೊಡೆಯುತ್ತ ಕೂರುವುದೋ, ಮಾಡುತ್ತಾ ಕೂರುತ್ತಿದ್ದೆವು. ನಮ್ಮ ಕೋಣೆಯ ಹೊರಗೆ ಒಂದು ಸಣ್ಣ ಗುಡ್ಡ, ಆ ಗುಡ್ಡದ ಒಂದು ಕಡೆ ವಸತಿ-ಶಾಲೆಗೇ ಸೇರಿದ ಬಾಳೆಹಣ್ಣಿನ ತೋಟ, ಇನ್ನೊಂದು ಕಡೆ ನಮ್ಮ ಪ್ರಾರ್ಥನಾ ಮಂದಿರವು ಇತ್ತು. ದಿನವು ನಾವು ಹೀಗೆ ಓದುವ ಸಮಯ ಅಂದರೆ ಸಂಜೆಯ ಸುಮಾರು ೬:೩೦ - ೮:೦೦ ಗಂಟೆಯ ಸಮಯದಲ್ಲಿ ಎರಡು ಸಾರಿ ನಮ್ಮ ವಾರ್ಡೆನ್ನು ಬಂದು, ಹುಡುಗರು ಓದುತ್ತಿದಾರೂ, ಇಲ್ಲವೇ ಸುಮ್ಮನೆ ಕಾಲಹರಣ ಮಾಡುತ್ತಿದರೋ ಎಂದು ನೋಡಿ ಹೋಗುವುದು ವಾಡಿಕೆ. ನಮ್ಮ ವಾರ್ಡೆನ್ನಿಗೆ ಒಂದು ಕಾಲು ಊನವಾದ ಕಾರಣ, ಅವರು ಚಪ್ಪಲಿ ಕಾಲಿನಲ್ಲಿ ನಡೆಯುವಾಗ ಚರ-ಚರ ಎಂದು ಸದ್ದು ಬರುತ್ತಿತ್ತು. ಹೀಗಾಗಿ, ನಾವು ಬೇರೆ ಕೆಲಸದಲ್ಲಿ ಮಗ್ನರಾಗಿದ್ದರೂ, ವಾರ್ಡೆನ್ನು ಬರುವ ಸದ್ದು ಕೇಳಿ, ಬೇರೆ ಕೆಲಸಗಳನ್ನು ನಿಲ್ಲಿಸಿ ಪುಸ್ತಕ ಹಿಡಿದು ಕೂರುತ್ತಿದ್ದೆವು. ಹೀಗೆ ಒಂದು ದಿನ ಸಸ್ಯಶಾಸ್ತ್ರದಲ್ಲಿ ಬಾಳೆ ಹೂವಿನ ಬಗ್ಗೆ ಓದುತಿದ್ದ ಹಾಗೆ, ಬಾಳಿ - "ಮಗ, ಇಲ್ಲೇ ತೋಟದಲ್ಲಿ ಒಂದು ಬಾಳೆ ಹೂವು ತಂದರೆ ಇನ್ನು ವಿವರವಾಗಿ ಅಭ್ಯಾಸ ಮಾಡಬಹುದು" ಎಂದ. ಅಲ್ಲೇ ಇದ್ದ ರಾಜಣ್ಣ ನಿಧಾನವಾಗಿ ಎದ್ದು ಹೋಗಿ, ಒಂದು ಬಾಳೆ ಹೂವನ್ನು ತರುವ ಬದಲು ಒಂದು ಬಾಳೆ ಹಣ್ಣಿನ ಗೊನೆಯನ್ನೇ ಕೊಯ್ದು, ತನ್ನ ತವಲಿನಲ್ಲಿ ಮುಚ್ಚಿ ತಂದು, ಸ್ನಾನದ ಬಕೆಟ್ಟಿನಲ್ಲಿ ಮುಚ್ಚಿ ಬಚ್ಚಿಟ್ಟ. ನಮ್ಮೆಲ್ಲರಿಗೂ ಒಂದು ಕಡೆ ಬಾಳೆಹಣ್ಣಿನ ಹೂವು ಸಿಕ್ಕ ಖುಷಿಯಾದರೆ, ಅದರ ಜೊತೆ ಸಿಕ್ಕ ಹಣ್ಣು ಮತ್ತು ಅದು ನಮಗೆ ತರುವ ಅಪಾಯದ ಬಗ್ಗೆ ದಿಗಿಲಾಯಿತು. ಅದಕ್ಕಿಂತ ಮಿಗಿಲಾಗಿ ಅದು ಮೈಲಾರಿಯ ಕಣ್ಣಿಗೆ ಬಿದ್ದು , ಅವನು ಅದರ ಬಗ್ಗೆ ಹೋಗಿ ವಾರ್ದನ್ನಿನ್ನ ಕಿವಿ ಕಚ್ಚಿದರೆ ನಮ್ಮ ಕಥೆ ನಾಯಿಗಿಂತ ಕಡೆ ಆಗುವುದರಲ್ಲಿ ಎರಡು ಮಾತಿಲ್ಲ. ಆ ಕಾರಣದಿಂದ ರೂಮಿನಲ್ಲಿ ಇರುವ ಹೂತ್ತು ಮೈಲಾರಿಯ ಕಣ್ಣು ಹಣ್ಣಿನ ಮೇಲೆ ಬೀಳದ ಹಾಗೆ ನೋಡಿ ಕೊಳ್ಳುವ ಹೊಣೆಯನ್ನು ನಾನು, ಬಾಲಿ, ರಾಜಣ್ಣ ಹೊತ್ತು ಕೊಂಡೆವು. ನಿತಿನ ಹತ್ತಿರ ಒಂದು ಕಬ್ಬಿಣದ ಖಾಲಿ ಟ್ರಂಕು ಇತ್ತು, ಹಣ್ಣಿನ ಗೊನೆಯನ್ನು ಅದರಲ್ಲಿ ಜೋಪಾನವಾಗಿ ಇಟ್ಟೆವು, ಅದನ್ನು ನಾವು ನಾಲ್ಕು ಜನ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದೆವು. ದಿನವು ಊಟ ಮುಗಿದ ಮೇಲೆ ರೂಮಿಗೆ ಬಂದು, ನಾನು, ಬಾಲಿ, ನಿತಿನ, ರಾಜಣ್ಣ ೩-೪ ಬಾಳೆಹಣ್ಣನ್ನು ತಿನ್ನುತ್ತಿದೆವು. ಮೈಲಾರಿ ನಮ್ಮ ರೂಮಿನಲ್ಲಿ ಇರುವ ಹೊತ್ತು, ಗಂಧದಕಡ್ಡಿ ಹೊತ್ತಿಸಿ ಅವನ ನಾಯಿ ಮೂಗಿಗೆ ನಿತಿನನ ಟ್ರಂಕಿನಲ್ಲಿ ಇದ್ದ ಹಣ್ಣಿನ ವಾಸನೆ ಹತ್ತದ ಹಾಗೆ ನೋಡಿಕೊಳ್ಳುತ್ತಿದೆವು.

ಹೀಗೆ ಒಂದು ದಿನ, ನಾವು ನಾಲ್ಕು ಜನ, ಬೇಗ ರಾತ್ರಿಯ ಊಟ ಮುಗಿಸಿ, ರೂಮಿಗೆ ಬಂದೆವು. ಅವತ್ತಿನ ಊಟಕ್ಕೆ ಕೂಡ ಅದೇ ಅನ್ನ್ಹ , ಸಾರು, ಮೊಸರು, ಉಪ್ಪಿನಕಾಯಿ ತಿಂದು, ಬಾಳೆಹಣ್ಣು ತಿನ್ನುವ ತವಕದಲ್ಲಿ ಬಂದು, ನಿತಿನನ ಟ್ರಂಕು ತೆರೆದು, ಬಾಳೆಹಣ್ಣಿನ ಗೊನೆಯನ್ನು ಆಚೆ ತೆಗೆದು, ಗೊನೆಯಲ್ಲಿರುವ ಹಣ್ಣಿನ ಲೆಕ್ಕ ಹಾಕಿ - ಒಟ್ಟು ೧೬ ಬಾಲೆ ಹಣ್ಣು ಬಾಕಿ ಇರುವ ಗ್ಯಾರಂಟಿ ಮಾಡಿಕೊಂಡು ಇನ್ನೆನ್ನು ಎಲ್ಲರೂ ಬಾಲೆ ಹಣ್ಣು ತಿನ್ನಬೇಕು ಎನ್ನುವಾಗ, ರೂಮಿನ ಹೊರಗೆ ಚರ-ಚರ ಸದ್ದು ಕೇಳಿ ಬಂತು.ಒಮ್ಮೆಗೆ ಹೃದಯ ಬಾಯಿಂದ ನೆಲದ ಮೇಲೆ ಬಿದ್ದ ಹಾಗೆ ಹಾಗಾಯಿತು. ಎಲ್ಲರಿಗು ವಾರ್ದೇನು ರೂಮಿನ ಒಳಗೆ ಬಂದು ಬಾಳೆಹಣ್ಣಿನ ಜೊತೆಯಲ್ಲಿ ನಮ್ಮನ್ನು ಕಂಡರೆ ನಮ್ಮೆಲ್ಲರ ತಿಥಿ ಕಟ್ಟಿಟ್ಟ ಬುತ್ತಿ. ಹಣ್ಣನ್ನು ಟ್ರಂಕು ಸೇರಿಸುವ ಮೊದಲು, ನಮ್ಮಲ್ಲಿ ಯಾರಾದರು ವಾರ್ದನ್ನನ್ನು ರೂಮಿನ ಹೊರಗೆ ತಡೆ ಹಿಡಿಯಬೇಕು, ಅದಕ್ಕೆ ರಾಜಣ್ಣ - "ಮಕ್ಳ , ನಾನು ಕುಂತ ರೂಮಿನ ಹೊರಗೆ ತಡೆ ಹಿಡಿಯುತ್ತೇನೆ, ನೀವೆಲ್ಲ ಹಣ್ಣನ್ನು ಟ್ರಂಕು ಸೇರಿಸಿ " ಎಂದು ರೂಮಿನ ಹೊರಗೆ ಹೋದ. ನಾವೆಲ್ಲಾ ಲಗುಬಗನೆ ಹಣ್ಣನ್ನು ನಿತಿನನ ಟ್ರಂಕು ಸೇರಿಸಿ ರೂಮಿನ ಆಚೆ ಬಂದು ನೋಡಿದರೆ , ಮೈಲಾರಿಗೂ ರಾಜಣ್ಣನಿಗೂ ಕೈ-ಕೈ ಮಿಲಾಯಿಸುವ ಸನ್ನಿವೇಶ ಏರ್ಪಟ್ಟಿತ್ತು. ಮೈಲಾರಿ ಹೊಟ್ಟೆ ತುಂಬಾ ಉಂಡು, ತನ್ನ ಚಪ್ಪಲಿಯನ್ನು ಚರ-ಚರ ಎಂದು ಸದ್ದು ಮಾಡುತ್ತಾ ನಮ್ಮ ಹಾಸ್ಟೆಲ್ಲಿನಲ್ಲಿ ಇರುವ ರೂಮಿನ ಹುಡುಗರಿಗೆ ಹೆದರಿಸುತ್ತ ಮಜಾ ತೆಗೆದು ಕೊಳ್ಳುತ್ತಾ ನಮ್ಮ ರೂಮಿನ ಹೊರಗೆ ಬರುವ ಹೊತ್ತಿಗೆ,ರಾಜಣ್ಣ ಅದು ವಾರ್ದೆನ್ನು ಅಲ್ಲ, ಅವರ ಚಮಚ ಮೈಲಾರಿ ಎಂದು ಅರಿವಾಗಿ ಅವನಿಗೆ - "ಮಗನೆ, ಏನು ಮೆಸ್ಸಿನ್ನಲ್ಲಿ ತಿಂದ ಊಟ ಜಾಸ್ತಿ ಆಯಿತಾ, ಎಲ್ಲರಿಗು ಹೆದರಿಸುತ್ತ, ಮಜಾ ತಗೋತ ಇದ್ದಿಯಲ್ಲ" ಎಂದ. ಅದಕ್ಕೆ ಮೈಲಾರಿ - " ಜಾಸ್ತಿನೆ ಆಯಿತು, ಏನಿವಾಗ, ನಿನ್ನ ತಲೆ, ಹೋಗಿ ನಿನ್ನ ಕೆಲಸ ನೋಡು" ಎಂದ. ರಾಜಣ್ಣನ ಪಿತ್ತ-ನೆತ್ತಿಗೇರಿ ಇನ್ನೇನು ಮೈಲಾರಿಗೆ ಎರಡು ತದುಕಬೇಕು ಎನ್ನುವಷ್ಟರಲ್ಲೇ ನಾವು ಹೋಗಿ - " ರಾಜಣ್ಣ, ಇವನಿಗೆ ನೀನು ಇಕ್ಕರೆ, ಇವನು ವಾರ್ದೆನ್ನಿನ ಕಿವಿ ಕಚ್ಚುವುದು ಕಾತರಿ, ಇವನಿಗೆ ಬೇರೆ ರೀತಿಯಲ್ಲಿ ಸಿಕ್ಕಿಸುವ" ಎಂದು ರಾಜನ್ನನ್ನನ್ನು ರೂಮಿನ ಒಳಗೆ ಕರೆ ತಂದು ಪುಸಲಾಯಿಸಿ ಕೂರಿಸಿಕೊಂಡು ಒಂದು ಪ್ಲಾನ್ ಮಾಡಿದೆವು . ನಮ್ಮ ಪ್ಲಾನು ಹೀಗಿತ್ತು - ಬಾಕಿ ಇರುವ ಬಾಳೆಹಣ್ಣನ್ನು ಮೈಲಾರಿಯ ರೂಮಿನಲ್ಲಿರುವ ಸತ್ಯನನ್ನು ಕರೆದು ಮೈಲಾರಿಯ ಬೀರುವಿನ ಒಳಗೆ ಅವಿಸಿಡುವ ಬಗ್ಗೆ ಪುಸಲಾಯಿಸಿ ಕಳಿಸುವುದು. ವಾರ್ಡನ್ನು ಬರುವ ಹೊತ್ತಿಗೆ ಜೋರು ಸ್ವರದಲ್ಲಿ - ತೋಟದಲ್ಲಿ ಬಾಳೆಗೊನೆ ಕಾಣೆಯಾಗಿರುವ ಬಗ್ಗೆ ಪುಕಾರು ಇರುವುದು, ಮತ್ತು ಅದು ಸತ್ಯನ ರೂಮಿನಲ್ಲಿ ಇರುವ ಬಗ್ಗೆ ಬೇರೆ ಹುಡುಗರು ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ಸಾರಾಂಶ ಬರುವ ಹಾಗೆ ಮಾತನಾಡುವುದು ಎಂದು ನಾವು ನಾಲ್ಕು ಜನ ಮಾತನಾಡಿ,ಅವತ್ತು ಮಲಗಿಕೊಂಡೆವು. ಮರುದಿನ, ನಮ್ಮ ಪ್ಲಾನಿನ ಹಾಗೆ ಸತ್ಯ, ಮೈಲಾರಿ ರೂಮಿನಲ್ಲಿ ಇರದ ಹೊತ್ತಿನಲ್ಲಿ, ನಮ್ಮ ರೂಮಿನಿಂದ , ಅವನ ರೂಮಿಗೆ ಬಾಳೆಹಣ್ಣನ್ನು ತೆಗೆದುಕೊಂದು ಹೋಗಿ, ಮೈಲಾರಿಯ ಬೀರುವಿನ ಒಂದು ಮೂಲೆಯಲ್ಲಿ ಅವಿಸಿಟ್ಟ, ಆ ಸಂಜೆ, ವಾರ್ಡನ್ನು ನಮ್ಮ ರೂಮಿನ ಹತ್ತಿರ ಬಂದಾಗ ನಾವೆಲ್ಲಾ ಗಟ್ಟಿ ಸ್ವರದಲ್ಲಿ ರೂಮಿನ ಒಳಗೆ ಮುಂಚೆಯೇ ಮಾಡಿದ ಪ್ಲಾನಿನ ಹಾಗೆ ಮಾತನಾಡ್ತಾ ಇದ್ದೆವು . ವಾರ್ಡನ್ನು , ನಮ್ಮ ಮಾತನ್ನು ಕೇಳಿಸಿ ಕೊ೦ಡು, ಮೈಲಾರಿಯ ರೂಮಿಗೆ ಹೋಗಿ ಅವನ ರೂಮಿನ ತಲಾಶಿ ತೆಗೆಯಲು ಸಿಕ್ಕ ಬಾಳೆಹಣ್ಣು, ಅದನ್ನು ಕಂಡು, ಹೌಹಾರಿದ ಮೈಲಾರಿಯ ಇಂಗು ತಿಂದ ಮಂಗನ ಮೂತಿ ನೋಡಿ ನಾವೆಲ್ಲಾ ಒಂದು ವಾರದವರೆಗೂ ನಕ್ಕು-ನಕ್ಕು ಹೊಟ್ಟೆ . ಮೈಲಾರಿಗೆ ಒಂದು ವಾರ ಹಾಸ್ಟೆಲಿನ ಕಾರಿಡಾರು ಗುಡಿಸುವ ಶಿಕ್ಷೆಯಾಯಿತು. ಅಂದಿನಿಂದ ಅವನು ನಮ್ಮ ತಂಟೆಗೆ ಬರಲಿಲ್ಲ, ನಾವು ಅವನ ತಂಟೆಗೆ ಹೋಗಲಿಲ್ಲ.

Thursday, November 19, 2009

ಬೂದಿಯಿಂದ ಎದ್ದು ಬಂದ ತಾರೆ...

ಆರ್ಥುರ್ ಆಶ್ ಟೆನ್ನಿಸ್ ಕಂಡ ಮಹಾನ್ ಆಟಗಾರರಲ್ಲಿ ಒಬ್ಬ. ಏಡ್ಸ್ ರೋಗಕ್ಕೆ (ಹೃದಯ ಶಸ್ತ್ರ ಚಿಕಿತ್ಸೆಯ ವೇಳೆ, ದೂಷಿತ ರ‍ಕ್ತ ಪಡೆದ ಕಾರಣ) ತುತ್ತಾಗಿ ಸಾವಿನ ದವಡೆಯಲ್ಲಿ ನರಳುತ್ತಿದಾಗ, ಜಗತ್ತಿನ ಮೂಲೆ-ಮೂಲೆಗಳಿಂದ ಕ್ರೀಡಾಭಿಮಾನಿಗಳು ಆರ್ಥುರ್ ಆಶ್ ಗೆ ಪತ್ರ ಬರೆದು ಸಾಂತ್ವನ ಹೇಳಿದರು. ಅಂತ ಒಂದು ಪತ್ರದಲ್ಲಿ ಕ್ರೀಡಾಭಿಮಾನಿಯೊಬ್ಬರು - " ಆ ದೇವರು, ಅಂತಹ ಭಯಾನಕ ರೋಗವನ್ನು ನಿನ್ನಂತಹವನಿಗೆ ಏಕೆ ಕೂಟ್ಟ?" ಎಂಬ ಸಾರಉಳ್ಳ ಪತ್ರವನ್ನು ಬರೆದಿದ್ದರು. ಆದಕ್ಕೆ ಆರ್ಥುರ್ ಆಶ್ ಬರೆದ ಉತ್ತರ ಜೀವನದಲ್ಲಿ ಅವನಿಗಿದ್ದ ಮೌಲ್ಯಗಳು, ಮತ್ತು ಅವನ್ನು ಆರ್ಥುರ್ ಆಶ್ ಎತ್ತಿ ಹಿಡಿದ ರೀತಿಯನ್ನು ಬಿಂಬಿಸುತ್ತವೆ. ಆ ಪತ್ರದ ಸಾರಂಶ ಈ ಕೆಳಗೆ ಇದೆ -

" ಜಗತ್ತಿನಾದ್ಯಂತ ೫೦ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಶುರು ಮಾಡುತ್ತಾರೆ, ಅದರಲ್ಲಿ ೫ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಕಲಿಯುತ್ತಾರೆ, ಅದರಲ್ಲಿ ೫೦೦೦೦೦ ಮಕ್ಕಳು ಸ್ಪರ್ಧಾತ್ಮಕ ಟೆನ್ನಿಸ್ ಕಲಿಯುತ್ತಾರೆ, ಅದರಲ್ಲಿ ೫೦,೦೦೦ ಮಕ್ಕಳು ವಿವಿಧ ಸ್ಪರ್ಧೆಗಳ್ಳಲ್ಲಿ ಅಡಲು ಬರುತ್ತಾರೆ, ಅದರಲ್ಲಿ ೫೦೦೦ ಮಕ್ಕಳು ಗ್ರಾಂಡ್ ಸ್ಲಾಮ್ ಸ್ಪರ್ಧೆಗಳಿಗೆ ಆಡಲು ಬರುತ್ತಾರೆ, ಅದರಲ್ಲಿ ೫೦ ಜನ ವಿಂಬಲ್ಡನ್ ಸ್ಫರ್ಧೆಗೆ ಬರುತ್ತಾರೆ, ೪ ಜನ ಸೆಮಿ- ಫೈನಲ್ ಗೆ ಬಂದು, ಅದರಲ್ಲಿ ೨ ಜನ ಫೈನಲ್ ಆಡುವ ಅವಕಾಶ ಪಡೆದು, ಗೆದ್ದ ಕಪ್ ಅನ್ನು ಎತ್ತಿ ಹಿಡಿದಾಗ " ದೇವರೆ, ಇದಕ್ಕೆ ನನ್ನನ್ನು ಏಕೆ ಆಯ್ಕೆ ಮಾಡಿದೆ?" ಎಂದು ನಾನು ಎಂದೂ ಕೇಳದ ಕಾರಣ, ಇಂದು " ನನಗೆ ಇಂತಹ ರೋಗವನ್ನು ಏಕೆ ಕೊಟ್ಟೆ?" ಎಂದು ಏಕೆ ಕೇಳಲಿ.ಸಂತೋಷಗಳು ನಮ್ಮನ್ನು ಸಿಹಿಯಾಗಿಡುತ್ತವೆ, ಕಷ್ಟಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಯಾಗಿಡುತ್ತವೆ, ನೋವು ನಮ್ಮನ್ನು ಮಾನವನಾಗಿ ಇಡುತ್ತವೆ, ಸೋಲು ನಮ್ಮನ್ನು ಛಲವಂತರಾಗಿಸುತ್ತವೆ ಮತ್ತು ಗೆಲುವು ನಮ್ಮನ್ನು ಬಲವಂತರಾಗಿಸುತ್ತವೆ, ಆದರೆ ನಂಬಿಕೆ ಮತ್ತು ಛಲ ನಮ್ಮನ್ನು ಎಂತಹ ಪರಿಸ್ಥಿತಿಯಲ್ಲೂ ಮುಂದೆ ಸಾಗಲು ನೆರವಾಗುತ್ತವೆ.

ಆರ್ಥ್ರ ಆಶ್ ಸುಮಾರು ೧೧ ವರ್ಷಗಳ ವೃತ್ತಿಪರ ಟೆನ್ನಿಸ್ ಆಡಿ ಹಲವಾರು ದಾಖಲೆಗಳನ್ನು ಸ್ತಾಪಿಸಿದ ಅದರಲ್ಲಿ ಪ್ರಮುಖವಾದದ್ದು ಮತ್ತು ಇನ್ನು ಅಜಯಿಯಾಗಿ ಉಳಿದಿರುವುದು - ವಿಂಬಲ್ಡನ್, ಯು.ಎಸ್. ಒಪನ್, ಆಸ್ಟ್ರೇಲಿಯನ್ ಒಪನ್ ಗೆದ್ದ ಏಕೈಕ ಆಫ್ರೋ-ಅಮೇರಿಕನ ಮೂಲದ ಆಟಗಾರ ಎಂದು. ಟೆನ್ನಿಸ್ ಆಟಕ್ಕೆ ಅರ್ಥುರ್ ಆಶ್ ನ ಕೊಡುಗೆ, ಅವನು ಮಾಡಿದ ಧರ್ಮಾಥ ಕಾರ್ಯಗಳನ್ನು ದೃಷ್ಟಿಯಲ್ಲಿಟ್ಟು ಯು.ಎಸ್ ಸರ್ಕಾರ , ಯು.ಎಸ್. ಒಪನ್ ಆಡುವ ಪ್ರಮುಖ ಕ್ರೀಡಾಂಗಣವನ್ನು " ಅರ್ಥುರ್ ಅಶ್ ಕ್ರೀಡಾಂಗಣ" ಎಂದು ನಾಮಕರ‍ಣ ಮಾಡಿದೆ.

Saturday, October 31, 2009

ಮತ್ತೆ ಬಂದಿದೆ ಕನ್ನಡಮ್ಮನ ಹಬ್ಬ....

ಎಲ್ಲ ಕನ್ನಡಾಭಿಮಾನಿಗಳಿಗೆ(ಭಾಷೆ ಬಂದರೂ ಮಾತನಾಡದ ದುರಭಿಮಾನಿಗಳಿಗೆ, ರಾಜ್ಯದಲ್ಲೇ ಇದ್ದರೂ ಭಾಷೆಯನ್ನು ಕಲಿಯದ ನಿರಭಿಮಾನಿಗಳಿಗೆ) ಕನ್ನಡ ರಾಜ್ಯೇತ್ಸವದ ಹಾರ್ದಿಕ ಶುಭಾಷಯಗಳು. ಕನ್ನಡದ ಕಂಪು, ನುಡಿ ಸಾಹಿತ್ಯದ ಇಂಪು ಪಸರಿಸುತ್ತಿರಲಿ, ಆ ಕನ್ನಡಾಂಬೆಯ ಆಶೀರ್ವಾದ ಎಲ್ಲರ ಮೇಲೂ ಇರಲಿ. ರಾಜ್ಯೋತ್ಸವ ಕೇವಲ "ನವೆಂಬರ್ ಕನ್ನಡ" ದ ಆಚರಣೆಗೆ ಸೀಮಿತವಾಗಿರದೆ ಕನ್ನಡ ನಿತ್ಯೋತ್ಸವ ನಿತ್ಯವೂ ನಡೆಯಲಿ, ಜಾತಿ - ಮತ ಬೇಧವ ಮರೆತು ಎಲ್ಲರು ಸಶಕ್ತ ಕನ್ನಡ ನಾಡು - ನುಡಿಗಾಗಿ ಶ್ರಮಿಸೋಣ. ಜೈ ಕರ್ನಾಟಕ, ಜೈ ಕನ್ನಡಾಂಬೆ.

Sunday, October 11, 2009

ಒಂದು ಕವಿತೆಯ ಸುತ್ತ...

ಜಯನಗರ ೪ನೇ ಬ್ಲಾಕಿನ ಹಳೆಯ ಪುಸ್ತಕ ಮಳಿಗೆಯಲ್ಲಿ ಕೊಂಡ ಒಂದು ರಸಾಯನಶಾಸ್ತ್ರ ಪುಸ್ತಕದ ಕೊನೆಯ ಪುಟದಲ್ಲಿ ಸಿಕ್ಕ ಒಂದು ಹಿಂದಿ ಶಾಯರಿ/ ಕವಿತೆ. ಓದಿ, ಆನಂದಿಸಿ...

न ये chemistry होती, न ये chemistry होती,
न मैं student होता,न ये lab होता,
न ये accident होता, अभी practical में आयी नज़र एक लड़की ,
सुंदर थी नाक उसकी Test Tube जैसी,बातों मैं उसकी Glucose की मिठास थी ,
सांसों में Ester की खुशबु भी साथ थी,आंखों से झलकता था कुछ इस तरंह का प्यार,
बिन पिए ही हो जाता था Alcohol का खुमार,बेचैन सा होता था उसकी Presence का एहसास,
अंधेरे में होता था Radium का आभास,नज़रें मिलीं, Reaction हुआ कुछ इस तरह,
लव का Production हुआ ,लगने लगे उस के घर के चक्कर ,
ऐसे Nucleus के चरों तरफ़ Electron होए जैसे ,उस दिन हमारे Test का Confirmation हुआ,
अब उसके Daddy से हमारा Introduction हुआ,सुन कर हमारी बात वोह ऐसे उचल पड़े,
Ignition Tube में जैसे Sodium भड़क उठे ,वोह बोले होश में आओ पहचानो अपनी औकात,
Iron मिल नहीं सकता कभी Gold के साथ,ये सुन कर टुटा हमारे अरमानों भरा घर ,
और हम चुप रहे daddy की बत्तों का कड़वा घूँट पि कर,अब उस की यादों के सिवा हमारा कम चलता न था,
और लैब में हमारे दिल के सिवा कुछ और जलता न था,जिंदगी हो गयी Unsaturated Hydro carbon की तरह,
और हम फिरते हैं आवारा Hydrogen की तरह.

ಸುಮಾರು ದಿನಗಳಿಂದ ಏನನ್ನು ಪೋಸ್ಟ್ ಮಾಡದ ಕಾರಣ, ಇದನ್ನು ಪೋಸ್ಟ್ ಮಾಡಿದ್ದೇನೆ.

Monday, March 16, 2009

ನೂರು ಜನ್ಮಕೂ ನೂರಾರು ಜನ್ಮಕೂ...

ನಾನು ಮೆಚ್ಚಿದ ಹಾಡುಗಳಲ್ಲಿ ಒಂದು. ನೋಡಿ, ಕೇಳಿ ಆನಂದಿಸಿ...


Tuesday, December 30, 2008

ಕನ್ನಡಮ್ಮ ಇಂಗ್ಲೀಷು ಕುದುರೆಯ ಮೇಲೇರಿ ಬಂದಾಗ...


ನೆನ್ನೆ ಕ್ಯಾಬ್ನಲ್ಲಿ ಆಫೀಸಿಗೆ ಬಂದು, ಕೈ ಗಡಿಯಾರ ನೋಡಿಕೊಂಡೆ. ಬರ್ರೋಬರ್ರಿ ೨೦ ನಿಮಿಷ ಬೇಗ ಬಂದಿದ್ದೆ. ನನ್ನ ಜಾಗಕ್ಕೆ ಬಂದು, ನನ್ನ ಲ್ಯಾಪ್-ಟಾಪ್ ಇಟ್ಟು, ಆಫೀಸಿನ ಹೊರಗೆ ಬಂದು, ಒಂದು ದಮ್ಮು ಹಚ್ಚಿ, ಆ ದಿನ ಮಾಡಬೇಕಾದ ಕೆಲಸದ ಪಟ್ಟಿಯನ್ನು ಮನಸ್ಸಿನಲ್ಲಿಯೇ ಮಾಡಿಕೊಂಡು, ಇನ್ನೇನು ಆಫೀಸಿನ ಒಳಗೆ ಬರಬೇಕು, ಆವಾಗ ಒಬ್ಬ ೨೦-೨೨ ವಯಸ್ಸಿನ ಯುವಕ, ಇಂಗ್ಲೀಷು ಪದಕೋಶ ಹಿಡಿದು ಬಂದು ತೆಗೆದು ಕೊಳ್ಳುವಂತೆ ದುಂಬಾಲುಬಿದ್ದ. ಇಂಗ್ಲೀಷಿನಲ್ಲಿಯೇ ಮಾತನಾಡಲು ಪ್ರಾರಂಬಿಸಿದ ಅವನು, ಸ್ವಲ್ಪ ಸಮಯದ ನಂತರ, ಹಿಂದಿಯಲ್ಲಿ ಕೊನೆಗೆ ಹರುಕು ಹಿಂದಿ/ಇಂಗ್ಲೀಷು ಉಪಯೋಗಿಸಿ convince ಮಾಡಲು ಪ್ರಯತ್ನ ಮಾಡಿದ. ನಾನು "simply not convinced " ಎಂದು ಅವನ್ನನ್ನು ಸಾಗಹಾಕಿ ಆಫೀಸಿನ ಒಳಗೆ ಬಂದೆ.
ಬೆಂಗಳೂರಿನಂತಹ cosmopolitan/metropolitan ನಗರದಲ್ಲಿ, ಬಹುಬಾಷಾ channels/mediums ಬೇಕಾಗಬಹುದು. ಆದರೆ ಕನ್ನಡಿಗನಾಗಿ ನಾನು, ಶಾಲೆಯಲ್ಲಿ, ಕಾಲೇಜಿನಲ್ಲಿ ಕನ್ನಡ ಕಲಿತ ಪರಿಣಾಮವಾಗಿ, ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ಬಳಸಲು ಇಷ್ಟಪಡುತ್ತೇನೆ. ಇದೆ ಸಂದರ್ಬದಲ್ಲಿ ಪ್ರೌಡಶಾಲೆಯ ಸುಬ್ರಾಯ ಮೇಷ್ಟ್ರು ಹೇಳಿದ ಮಾತು ನೆನಪಿಗೆ ಬರುತ್ತದೆ - " ಮನು, ಮಾತೃ ಬಾಷೆಯಲ್ಲಿ ಇರುವ ಸ್ವಾತಂತ್ರ್ಯ, ಸೃಜನಶೀಲತೆ, ಯೋಚನಾ ಲಹರಿ, ಇಂಗ್ಲೀಷನ್ನು ಬಾಷೆಯಾಗಿ ಶಾಲೆಯಲ್ಲಿ ಕಲಿಯುವ ನಿನಗೆ, ಕಲಿತಿರುವ ನನಗೆ, ಇಂಗ್ಲೀಷು ಉಪಯೋಗಿಸುವಾಗ ಬರಲು ಸಾಧ್ಯವಿಲ್ಲ" ಎಂದರು. ಇದೆ ರೀತಿ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಗಾಗಿ ಕಲಿಯುವಾಗ ಕ್ಲಾಸಿನಲ್ಲಿ - "ನೀವು ಎಲ್ಲರ ಜೊತೆ ಇಂಗ್ಲೀಷಿನಲ್ಲಿಯೇ ಮಾತನಾಡಬೇಕು, it will improve your confidence and reduce the vernacular way of speech/expression" ಎಂದು ಪ್ರೊ.ಪೂನಂ ನಾರಂಗ್ ಹೇಳಿದ ಮಾತು ಕೂಡ ನೆನಪಿದೆ.
ಇಬ್ಬರೂ ತುಂಬ ಕಲಿತವರೇ, ಇಬ್ಬರ ವಾದವೂ ಸರಿಯೇ, ವ್ಯವಹಾರಿಕ ಬಾಷೆಯಾಗಿ ಇಂಗ್ಲೀಷು ಉಪಯೋಗಿಸುವುದರಲ್ಲಿ ಯಾವ ಹಾನಿಯೂ ಇಲ್ಲ, ಆದರೆ ವ್ಯವಹಾರಿಕ ಬಾಷೆ ಮಾತೃ ಬಾಷೆಯ ಜಾಗ ತೆಗೆದುಕೊಳ್ಳೋ ರೀತಿ ಇಂಗ್ಲೀಷು ಪ್ರೀತಿ ನಮ್ಮ ಸುತ್ತಲುಬೆಳೆಯುತಿದ್ದೆ/ಬೆಳೆದಿದೆ . ಇಂತಹ ಬೆಳವಣಿಗೆ ಮಾರಕವಾಗುವ ಮುನ್ನ, mummy-daddy ಬಂದು ಅಪ್ಪ-ಅಮ್ಮ ಆಗುವ ಮುನ್ನ, ಆನೆ ಹೋಗಿ Elephant ಆಗುವ ಮುನ್ನ, ...ನಾವೆಲ್ಲರೂ ಜಾಗ್ರೃತವಾಗೋಣವೆ???

Friday, December 26, 2008

ಸಿಂಹ ಮತ್ತು ನರಿಯ ಕಥೆ

ಅದೊಂದು ಮುದಿ ಸಿಂಹ. ಅದರ ಕಾಲುಗಳು ತ್ರಾಣ ಕಳೆದುಕೊಂಡಿವೆ. ಓಡಾಡಿ ಬೇಟೆಯಾಡಲು ಆಗುತ್ತಿಲ್ಲ. ಹಸಿವಿನ್ನಿಂದ ಅದರ ದೇಹ ದಿನದಿಂದ ದಿನಕ್ಕೆ ಕುಗ್ಗ ತೊಡಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಾಯುವುದು ನಿಶ್ಚಿತವೆಂದು ಸಿಂಹಕ್ಕೆ ಮನವರಿಕೆಯಾಗುತ್ತದೆ. ಆದರೇನಂತೆ ಅದು ಕಾಡಿನ ರಾಜ, ಅದರ ಆದೇಶವನ್ನು ಕಾಡಿನ ಪ್ರಾಣಿಗಳು ಪಾಲಿಸಲೇಬೇಕು . ಅದಕೊಂದು ಉಪಾಯ ಹೊಳೆಯಿತು ಕೂಡಲೇ ನರಿಯನ್ನು ಕರೆಸಿಕೊಂಡಿತು. " ನರಿ, ನೀನು ಬಹಳ ಚತುರ. ಹಾಗಾಗಿ ನಿನ್ನನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕೊಂಡಿದ್ದೇನೆ" ಎಂದಿತು ಸಿಂಹ. ಮೊದಲೇ ಚತುರನಾದ ನರಿಯು ಸಿಂಹದ ಮಾತನ್ನು ನಂಬುವುದಿಲ್ಲ. ಆದರೆ ಸಿಂಹದ ಮಾತುಗಳನ್ನು ದಿಕ್ಕರಿಸುವ ಹಾಗು ಇಲ್ಲ, ಒಲ್ಲದ ಮನಸ್ಸಿನಿಂದ ನರಿಯು ಮಂತ್ರಿಯಾಗಲು ಓಪ್ಪಿಕೊಂಡಿತು. ಸಿಂಹಕ್ಕೆ ನರಿಯ ಒಪ್ಪಿಗೆ ಸಿಕ್ಕ ಮೇಲೆ ಖುಶಿಯಾಯಿತು.

"ನೋಡು ನರಿ, ನಾನು ಸಿಂಹ, ಮೃಗರಾಜ , ನನಗೆ ದಿನವು ಬೇಟೆಯಾಡುವ ಅಗತ್ಯವಿಲ್ಲ, ನನ್ನ ಮಂತ್ರಿಯಾದ ನೀನು ಇನ್ನು ಮುಂದೆ ನನಗೆ ಒಂದು ಪ್ರಾಣಿಯನ್ನು ಒದಗಿಸಬೇಕು " ಎಂದನ್ನುತ್ತದೆ ಸಿಂಹ. ಬೇರೆ ದಾರಿಯೇ ಕಾಣದ ನರಿಯು ಬೇಟೆಯಾಡಲು ಕಾಡಿನೊಳಗೆ ಹೋಗುತ್ತದೆ. ದಾರಿಯಲ್ಲಿ ನರಿಗೆ ಒಂದು ಕೊಬ್ಬಿದ ಕತ್ತೆ ಸಿಗುತ್ತದೆ. ಕತ್ತೆ ಯನ್ನು ಕಂಡ ನರಿಯು " ಕಾಡಿನ ರಾಜನಾದ ಸಿಂಹವು ನಿನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿಶ್ಚಯಿಸಿದೆ. ಅದಕ್ಕಾಗಿ ನಿನ್ನನ್ನು ಹುಡುಕುತಿದ್ದೆ " ಎಂದು ಹೇಳುತ್ತದೆ. ಸಿಂಹದ ಹೆಸರು ಕೇಳಿದ ಕತ್ತೆ ಗೆ ಹೆದರಿಕೆ ಶುರುವಾಗುತ್ತದೆ. ಅನುಮಾನವೂ ಶುರುವಾಗುತ್ತದೆ. "ಮುಖ್ಯಮಂತ್ರಿಯಾಗಲು ನಾನು ಯೋಗ್ಯನಲ್ಲ" ಎಂದು ನರಿಗೆ ಮಾರುತ್ತರ ನೀಡುತ್ತದೆ.

ನರಿ ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಕತ್ತೆಯನ್ನು ಹೊಗಳಲು ಶುರು ಮಾಡುತ್ತದೆ, " ನೀನು ಬಹಳ ಬುದ್ದಿವಂತ, ಪರಿಶ್ರಮಿ, ಹಾಗಾಗಿಯೇ ನಿನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ" ಎಂದು ಮುಖಸ್ತುತಿ ಮಾಡುತ್ತದೆ. ನರಿಯ ಮಾತನ್ನು ಕೇಳಿದ ಕತ್ತೆಗೆ ನರಿಯ ಮಾತುಗಳ ಮೇಲೆ ನಂಬಿಕೆ ಬರುತ್ತದೆ. ಸಿಂಹದ ಬಳಿಗೆ ಹೋಗುತ್ತದೆ. ಆದರೆ ಸಿಂಹವು ಕತ್ತೆಯು ಹತ್ತಿರ ಬಂದೊಡನೆ ತನ್ನ ಬಲವಾದ ಮುಷ್ಟಿಯನ್ನು ಅಪ್ಪಳಿಸಿ ಕತ್ತೆಯನ್ನು ಕೊಳ್ಳುತ್ತದೆ, ನಂತರ ತಿನ್ನಲು ಅಣಿಯಾಗುತ್ತದೆ. ಇನ್ನೇನು ತಿನ್ನಬೇಕು ಎನ್ನುವಾಗ ನರಿಯು ಸಿಂಹವನ್ನು ಕಂಡು - " ಮಹಾರಾಜ, ನೀವು ಸ್ನಾನ ಮಾಡಿ ತುಂಬ ದಿನಗಳಾಗಿದೆ, ಸ್ನಾನ ಮಾಡಿ ಬಂದು, ಕತ್ತೆಯನ್ನು ತಿನ್ನಿ " ಎನ್ನುತ್ತದೆ. ನರಿಯ ಮಾತು ಸಿಂಹಕ್ಕೆ ಸರಿಯೆನಿಸುತ್ತದೆ. ಕತ್ತೆಯನ್ನು ಕಾಯುತ್ತಿರು ಎಂದು ನರಿಗೆ ಹೇಳಿ ಸ್ನಾನ ಮಾಡಲು ಹೋಗುತ್ತದೆ. ಇತ್ತ ವಿಧೇಯತೆ ಇಂದ ಕಾಯುತ್ತಿದ ನರಿಯ ಬಾಯಾಲ್ಲಿ ನೀರು ಬರಲು ಶುರುವಾಗುತ್ತದೆ. ಅಷ್ಟಕ್ಕೂ ಕತ್ತೆಯನ್ನು ಕರೆ ತಂದವನು ನಾನು, ಅದಕ್ಕೆ ಅದರ ದೇಹದ ಒಳ್ಳೆಯ ಬಾಗ ನನಗೆ ಸೇರಬೇಕು ಎಂದು ಕತ್ತೆ ಯಾ ಮೆದುಳನ್ನು ತಿಂದು ಮುಗಿಸುತ್ತದೆ. ಸ್ನಾನ ಮಾಡಿ ಬಂದ ಸಿಂಹಕ್ಕೆ ಏನೋ ವ್ಯತ್ಯಾಸವಾದಂತೆ ಬಾಸವಾಗುತ್ತದೆ. ಅನುಮಾನದಿಂದ ಪ್ರಶ್ನಿಸಿದಾಗ - " ಕತ್ತೆಗೆ ನೀನು ಕೊಟ್ಟ ಗುದ್ದಿನಿಂದ ಅದರ ನೆತ್ತಿ ಒಳಗೆ ಹೋಗಿದೆ" ಎನ್ನುತ್ತದೆ ನರಿ. ನರಿಯ ಉತ್ತರದಿಂದ ತೃಪ್ತನಾಗಿ ಸಿಂಹವು ಕತ್ತೆಯನ್ನು ತಿನ್ನಲು ಕೂತ ಸಿಂಹಕ್ಕೆ ಕತ್ತೆ ಯಾ ಮೆದುಳೇ ಮಯಾವಾಗಿರುವುದು ತಿಳಿಯುತ್ತದೆ. ಮತ್ತೆ ನರಿಯ ಕಡೆ ಅನುಮಾನದಿಂದ ನೋಡುತ್ತದೆ " ಒಂದು ವೇಳೆ ಕತ್ತೆಗೆ ಮೆದುಳು ಇದ್ದಿದ್ದರೆ ಅದು ನಿನ್ನನ್ನು ಕಾಣಲು ಬರುತ್ತಿತ್ತೆ " ಸಿಂಹಕ್ಕೆ ಮರು ಪ್ರಶ್ನೆ ಹಾಕುತ್ತದೆ. ಮೆದುಳೇ ಇಲ್ಲದ ಮ್ಯಾನೇಜರ್ ಕೆಳಗೆ ಕೆಲಸ ಮಾಡೋ, ಅಥವಾ ನಮ್ಮ ಮೆದುಳೇ ಇಲ್ಲದ ಹಾಗೆ ಮಾಡುವ ಯಾಂತ್ರಿಕ ಕೆಲಸಕ್ಕೋ ಈ ಬ್ಲಾಗ್ ಸಮರ್ಪಿತ. ಮತ್ತೆ ಸಿಗುವವರೆಗೂ.....ಬೈ...ಹೊಸ ವರುಷದ ಶುಭಾಶಯಗಳು.