Friday, November 27, 2009

Widget

Widget

Thursday, November 19, 2009

ಬೂದಿಯಿಂದ ಎದ್ದು ಬಂದ ತಾರೆ...

ಆರ್ಥುರ್ ಆಶ್ ಟೆನ್ನಿಸ್ ಕಂಡ ಮಹಾನ್ ಆಟಗಾರರಲ್ಲಿ ಒಬ್ಬ. ಏಡ್ಸ್ ರೋಗಕ್ಕೆ (ಹೃದಯ ಶಸ್ತ್ರ ಚಿಕಿತ್ಸೆಯ ವೇಳೆ, ದೂಷಿತ ರ‍ಕ್ತ ಪಡೆದ ಕಾರಣ) ತುತ್ತಾಗಿ ಸಾವಿನ ದವಡೆಯಲ್ಲಿ ನರಳುತ್ತಿದಾಗ, ಜಗತ್ತಿನ ಮೂಲೆ-ಮೂಲೆಗಳಿಂದ ಕ್ರೀಡಾಭಿಮಾನಿಗಳು ಆರ್ಥುರ್ ಆಶ್ ಗೆ ಪತ್ರ ಬರೆದು ಸಾಂತ್ವನ ಹೇಳಿದರು. ಅಂತ ಒಂದು ಪತ್ರದಲ್ಲಿ ಕ್ರೀಡಾಭಿಮಾನಿಯೊಬ್ಬರು - " ಆ ದೇವರು, ಅಂತಹ ಭಯಾನಕ ರೋಗವನ್ನು ನಿನ್ನಂತಹವನಿಗೆ ಏಕೆ ಕೂಟ್ಟ?" ಎಂಬ ಸಾರಉಳ್ಳ ಪತ್ರವನ್ನು ಬರೆದಿದ್ದರು. ಆದಕ್ಕೆ ಆರ್ಥುರ್ ಆಶ್ ಬರೆದ ಉತ್ತರ ಜೀವನದಲ್ಲಿ ಅವನಿಗಿದ್ದ ಮೌಲ್ಯಗಳು, ಮತ್ತು ಅವನ್ನು ಆರ್ಥುರ್ ಆಶ್ ಎತ್ತಿ ಹಿಡಿದ ರೀತಿಯನ್ನು ಬಿಂಬಿಸುತ್ತವೆ. ಆ ಪತ್ರದ ಸಾರಂಶ ಈ ಕೆಳಗೆ ಇದೆ -

" ಜಗತ್ತಿನಾದ್ಯಂತ ೫೦ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಶುರು ಮಾಡುತ್ತಾರೆ, ಅದರಲ್ಲಿ ೫ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಕಲಿಯುತ್ತಾರೆ, ಅದರಲ್ಲಿ ೫೦೦೦೦೦ ಮಕ್ಕಳು ಸ್ಪರ್ಧಾತ್ಮಕ ಟೆನ್ನಿಸ್ ಕಲಿಯುತ್ತಾರೆ, ಅದರಲ್ಲಿ ೫೦,೦೦೦ ಮಕ್ಕಳು ವಿವಿಧ ಸ್ಪರ್ಧೆಗಳ್ಳಲ್ಲಿ ಅಡಲು ಬರುತ್ತಾರೆ, ಅದರಲ್ಲಿ ೫೦೦೦ ಮಕ್ಕಳು ಗ್ರಾಂಡ್ ಸ್ಲಾಮ್ ಸ್ಪರ್ಧೆಗಳಿಗೆ ಆಡಲು ಬರುತ್ತಾರೆ, ಅದರಲ್ಲಿ ೫೦ ಜನ ವಿಂಬಲ್ಡನ್ ಸ್ಫರ್ಧೆಗೆ ಬರುತ್ತಾರೆ, ೪ ಜನ ಸೆಮಿ- ಫೈನಲ್ ಗೆ ಬಂದು, ಅದರಲ್ಲಿ ೨ ಜನ ಫೈನಲ್ ಆಡುವ ಅವಕಾಶ ಪಡೆದು, ಗೆದ್ದ ಕಪ್ ಅನ್ನು ಎತ್ತಿ ಹಿಡಿದಾಗ " ದೇವರೆ, ಇದಕ್ಕೆ ನನ್ನನ್ನು ಏಕೆ ಆಯ್ಕೆ ಮಾಡಿದೆ?" ಎಂದು ನಾನು ಎಂದೂ ಕೇಳದ ಕಾರಣ, ಇಂದು " ನನಗೆ ಇಂತಹ ರೋಗವನ್ನು ಏಕೆ ಕೊಟ್ಟೆ?" ಎಂದು ಏಕೆ ಕೇಳಲಿ.ಸಂತೋಷಗಳು ನಮ್ಮನ್ನು ಸಿಹಿಯಾಗಿಡುತ್ತವೆ, ಕಷ್ಟಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಯಾಗಿಡುತ್ತವೆ, ನೋವು ನಮ್ಮನ್ನು ಮಾನವನಾಗಿ ಇಡುತ್ತವೆ, ಸೋಲು ನಮ್ಮನ್ನು ಛಲವಂತರಾಗಿಸುತ್ತವೆ ಮತ್ತು ಗೆಲುವು ನಮ್ಮನ್ನು ಬಲವಂತರಾಗಿಸುತ್ತವೆ, ಆದರೆ ನಂಬಿಕೆ ಮತ್ತು ಛಲ ನಮ್ಮನ್ನು ಎಂತಹ ಪರಿಸ್ಥಿತಿಯಲ್ಲೂ ಮುಂದೆ ಸಾಗಲು ನೆರವಾಗುತ್ತವೆ.

ಆರ್ಥ್ರ ಆಶ್ ಸುಮಾರು ೧೧ ವರ್ಷಗಳ ವೃತ್ತಿಪರ ಟೆನ್ನಿಸ್ ಆಡಿ ಹಲವಾರು ದಾಖಲೆಗಳನ್ನು ಸ್ತಾಪಿಸಿದ ಅದರಲ್ಲಿ ಪ್ರಮುಖವಾದದ್ದು ಮತ್ತು ಇನ್ನು ಅಜಯಿಯಾಗಿ ಉಳಿದಿರುವುದು - ವಿಂಬಲ್ಡನ್, ಯು.ಎಸ್. ಒಪನ್, ಆಸ್ಟ್ರೇಲಿಯನ್ ಒಪನ್ ಗೆದ್ದ ಏಕೈಕ ಆಫ್ರೋ-ಅಮೇರಿಕನ ಮೂಲದ ಆಟಗಾರ ಎಂದು. ಟೆನ್ನಿಸ್ ಆಟಕ್ಕೆ ಅರ್ಥುರ್ ಆಶ್ ನ ಕೊಡುಗೆ, ಅವನು ಮಾಡಿದ ಧರ್ಮಾಥ ಕಾರ್ಯಗಳನ್ನು ದೃಷ್ಟಿಯಲ್ಲಿಟ್ಟು ಯು.ಎಸ್ ಸರ್ಕಾರ , ಯು.ಎಸ್. ಒಪನ್ ಆಡುವ ಪ್ರಮುಖ ಕ್ರೀಡಾಂಗಣವನ್ನು " ಅರ್ಥುರ್ ಅಶ್ ಕ್ರೀಡಾಂಗಣ" ಎಂದು ನಾಮಕರ‍ಣ ಮಾಡಿದೆ.

Saturday, October 31, 2009

ಮತ್ತೆ ಬಂದಿದೆ ಕನ್ನಡಮ್ಮನ ಹಬ್ಬ....

ಎಲ್ಲ ಕನ್ನಡಾಭಿಮಾನಿಗಳಿಗೆ(ಭಾಷೆ ಬಂದರೂ ಮಾತನಾಡದ ದುರಭಿಮಾನಿಗಳಿಗೆ, ರಾಜ್ಯದಲ್ಲೇ ಇದ್ದರೂ ಭಾಷೆಯನ್ನು ಕಲಿಯದ ನಿರಭಿಮಾನಿಗಳಿಗೆ) ಕನ್ನಡ ರಾಜ್ಯೇತ್ಸವದ ಹಾರ್ದಿಕ ಶುಭಾಷಯಗಳು. ಕನ್ನಡದ ಕಂಪು, ನುಡಿ ಸಾಹಿತ್ಯದ ಇಂಪು ಪಸರಿಸುತ್ತಿರಲಿ, ಆ ಕನ್ನಡಾಂಬೆಯ ಆಶೀರ್ವಾದ ಎಲ್ಲರ ಮೇಲೂ ಇರಲಿ. ರಾಜ್ಯೋತ್ಸವ ಕೇವಲ "ನವೆಂಬರ್ ಕನ್ನಡ" ದ ಆಚರಣೆಗೆ ಸೀಮಿತವಾಗಿರದೆ ಕನ್ನಡ ನಿತ್ಯೋತ್ಸವ ನಿತ್ಯವೂ ನಡೆಯಲಿ, ಜಾತಿ - ಮತ ಬೇಧವ ಮರೆತು ಎಲ್ಲರು ಸಶಕ್ತ ಕನ್ನಡ ನಾಡು - ನುಡಿಗಾಗಿ ಶ್ರಮಿಸೋಣ. ಜೈ ಕರ್ನಾಟಕ, ಜೈ ಕನ್ನಡಾಂಬೆ.

Tuesday, December 30, 2008

ಕನ್ನಡಮ್ಮ ಇಂಗ್ಲೀಷು ಕುದುರೆಯ ಮೇಲೇರಿ ಬಂದಾಗ...


ನೆನ್ನೆ ಕ್ಯಾಬ್ನಲ್ಲಿ ಆಫೀಸಿಗೆ ಬಂದು, ಕೈ ಗಡಿಯಾರ ನೋಡಿಕೊಂಡೆ. ಬರ್ರೋಬರ್ರಿ ೨೦ ನಿಮಿಷ ಬೇಗ ಬಂದಿದ್ದೆ. ನನ್ನ ಜಾಗಕ್ಕೆ ಬಂದು, ನನ್ನ ಲ್ಯಾಪ್-ಟಾಪ್ ಇಟ್ಟು, ಆಫೀಸಿನ ಹೊರಗೆ ಬಂದು, ಒಂದು ದಮ್ಮು ಹಚ್ಚಿ, ಆ ದಿನ ಮಾಡಬೇಕಾದ ಕೆಲಸದ ಪಟ್ಟಿಯನ್ನು ಮನಸ್ಸಿನಲ್ಲಿಯೇ ಮಾಡಿಕೊಂಡು, ಇನ್ನೇನು ಆಫೀಸಿನ ಒಳಗೆ ಬರಬೇಕು, ಆವಾಗ ಒಬ್ಬ ೨೦-೨೨ ವಯಸ್ಸಿನ ಯುವಕ, ಇಂಗ್ಲೀಷು ಪದಕೋಶ ಹಿಡಿದು ಬಂದು ತೆಗೆದು ಕೊಳ್ಳುವಂತೆ ದುಂಬಾಲುಬಿದ್ದ. ಇಂಗ್ಲೀಷಿನಲ್ಲಿಯೇ ಮಾತನಾಡಲು ಪ್ರಾರಂಬಿಸಿದ ಅವನು, ಸ್ವಲ್ಪ ಸಮಯದ ನಂತರ, ಹಿಂದಿಯಲ್ಲಿ ಕೊನೆಗೆ ಹರುಕು ಹಿಂದಿ/ಇಂಗ್ಲೀಷು ಉಪಯೋಗಿಸಿ convince ಮಾಡಲು ಪ್ರಯತ್ನ ಮಾಡಿದ. ನಾನು "simply not convinced " ಎಂದು ಅವನ್ನನ್ನು ಸಾಗಹಾಕಿ ಆಫೀಸಿನ ಒಳಗೆ ಬಂದೆ.
ಬೆಂಗಳೂರಿನಂತಹ cosmopolitan/metropolitan ನಗರದಲ್ಲಿ, ಬಹುಬಾಷಾ channels/mediums ಬೇಕಾಗಬಹುದು. ಆದರೆ ಕನ್ನಡಿಗನಾಗಿ ನಾನು, ಶಾಲೆಯಲ್ಲಿ, ಕಾಲೇಜಿನಲ್ಲಿ ಕನ್ನಡ ಕಲಿತ ಪರಿಣಾಮವಾಗಿ, ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ಬಳಸಲು ಇಷ್ಟಪಡುತ್ತೇನೆ. ಇದೆ ಸಂದರ್ಬದಲ್ಲಿ ಪ್ರೌಡಶಾಲೆಯ ಸುಬ್ರಾಯ ಮೇಷ್ಟ್ರು ಹೇಳಿದ ಮಾತು ನೆನಪಿಗೆ ಬರುತ್ತದೆ - " ಮನು, ಮಾತೃ ಬಾಷೆಯಲ್ಲಿ ಇರುವ ಸ್ವಾತಂತ್ರ್ಯ, ಸೃಜನಶೀಲತೆ, ಯೋಚನಾ ಲಹರಿ, ಇಂಗ್ಲೀಷನ್ನು ಬಾಷೆಯಾಗಿ ಶಾಲೆಯಲ್ಲಿ ಕಲಿಯುವ ನಿನಗೆ, ಕಲಿತಿರುವ ನನಗೆ, ಇಂಗ್ಲೀಷು ಉಪಯೋಗಿಸುವಾಗ ಬರಲು ಸಾಧ್ಯವಿಲ್ಲ" ಎಂದರು. ಇದೆ ರೀತಿ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಗಾಗಿ ಕಲಿಯುವಾಗ ಕ್ಲಾಸಿನಲ್ಲಿ - "ನೀವು ಎಲ್ಲರ ಜೊತೆ ಇಂಗ್ಲೀಷಿನಲ್ಲಿಯೇ ಮಾತನಾಡಬೇಕು, it will improve your confidence and reduce the vernacular way of speech/expression" ಎಂದು ಪ್ರೊ.ಪೂನಂ ನಾರಂಗ್ ಹೇಳಿದ ಮಾತು ಕೂಡ ನೆನಪಿದೆ.
ಇಬ್ಬರೂ ತುಂಬ ಕಲಿತವರೇ, ಇಬ್ಬರ ವಾದವೂ ಸರಿಯೇ, ವ್ಯವಹಾರಿಕ ಬಾಷೆಯಾಗಿ ಇಂಗ್ಲೀಷು ಉಪಯೋಗಿಸುವುದರಲ್ಲಿ ಯಾವ ಹಾನಿಯೂ ಇಲ್ಲ, ಆದರೆ ವ್ಯವಹಾರಿಕ ಬಾಷೆ ಮಾತೃ ಬಾಷೆಯ ಜಾಗ ತೆಗೆದುಕೊಳ್ಳೋ ರೀತಿ ಇಂಗ್ಲೀಷು ಪ್ರೀತಿ ನಮ್ಮ ಸುತ್ತಲುಬೆಳೆಯುತಿದ್ದೆ/ಬೆಳೆದಿದೆ . ಇಂತಹ ಬೆಳವಣಿಗೆ ಮಾರಕವಾಗುವ ಮುನ್ನ, mummy-daddy ಬಂದು ಅಪ್ಪ-ಅಮ್ಮ ಆಗುವ ಮುನ್ನ, ಆನೆ ಹೋಗಿ Elephant ಆಗುವ ಮುನ್ನ, ...ನಾವೆಲ್ಲರೂ ಜಾಗ್ರೃತವಾಗೋಣವೆ???

Friday, December 26, 2008

ಸಿಂಹ ಮತ್ತು ನರಿಯ ಕಥೆ

ಅದೊಂದು ಮುದಿ ಸಿಂಹ. ಅದರ ಕಾಲುಗಳು ತ್ರಾಣ ಕಳೆದುಕೊಂಡಿವೆ. ಓಡಾಡಿ ಬೇಟೆಯಾಡಲು ಆಗುತ್ತಿಲ್ಲ. ಹಸಿವಿನ್ನಿಂದ ಅದರ ದೇಹ ದಿನದಿಂದ ದಿನಕ್ಕೆ ಕುಗ್ಗ ತೊಡಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಾಯುವುದು ನಿಶ್ಚಿತವೆಂದು ಸಿಂಹಕ್ಕೆ ಮನವರಿಕೆಯಾಗುತ್ತದೆ. ಆದರೇನಂತೆ ಅದು ಕಾಡಿನ ರಾಜ, ಅದರ ಆದೇಶವನ್ನು ಕಾಡಿನ ಪ್ರಾಣಿಗಳು ಪಾಲಿಸಲೇಬೇಕು . ಅದಕೊಂದು ಉಪಾಯ ಹೊಳೆಯಿತು ಕೂಡಲೇ ನರಿಯನ್ನು ಕರೆಸಿಕೊಂಡಿತು. " ನರಿ, ನೀನು ಬಹಳ ಚತುರ. ಹಾಗಾಗಿ ನಿನ್ನನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕೊಂಡಿದ್ದೇನೆ" ಎಂದಿತು ಸಿಂಹ. ಮೊದಲೇ ಚತುರನಾದ ನರಿಯು ಸಿಂಹದ ಮಾತನ್ನು ನಂಬುವುದಿಲ್ಲ. ಆದರೆ ಸಿಂಹದ ಮಾತುಗಳನ್ನು ದಿಕ್ಕರಿಸುವ ಹಾಗು ಇಲ್ಲ, ಒಲ್ಲದ ಮನಸ್ಸಿನಿಂದ ನರಿಯು ಮಂತ್ರಿಯಾಗಲು ಓಪ್ಪಿಕೊಂಡಿತು. ಸಿಂಹಕ್ಕೆ ನರಿಯ ಒಪ್ಪಿಗೆ ಸಿಕ್ಕ ಮೇಲೆ ಖುಶಿಯಾಯಿತು.

"ನೋಡು ನರಿ, ನಾನು ಸಿಂಹ, ಮೃಗರಾಜ , ನನಗೆ ದಿನವು ಬೇಟೆಯಾಡುವ ಅಗತ್ಯವಿಲ್ಲ, ನನ್ನ ಮಂತ್ರಿಯಾದ ನೀನು ಇನ್ನು ಮುಂದೆ ನನಗೆ ಒಂದು ಪ್ರಾಣಿಯನ್ನು ಒದಗಿಸಬೇಕು " ಎಂದನ್ನುತ್ತದೆ ಸಿಂಹ. ಬೇರೆ ದಾರಿಯೇ ಕಾಣದ ನರಿಯು ಬೇಟೆಯಾಡಲು ಕಾಡಿನೊಳಗೆ ಹೋಗುತ್ತದೆ. ದಾರಿಯಲ್ಲಿ ನರಿಗೆ ಒಂದು ಕೊಬ್ಬಿದ ಕತ್ತೆ ಸಿಗುತ್ತದೆ. ಕತ್ತೆ ಯನ್ನು ಕಂಡ ನರಿಯು " ಕಾಡಿನ ರಾಜನಾದ ಸಿಂಹವು ನಿನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿಶ್ಚಯಿಸಿದೆ. ಅದಕ್ಕಾಗಿ ನಿನ್ನನ್ನು ಹುಡುಕುತಿದ್ದೆ " ಎಂದು ಹೇಳುತ್ತದೆ. ಸಿಂಹದ ಹೆಸರು ಕೇಳಿದ ಕತ್ತೆ ಗೆ ಹೆದರಿಕೆ ಶುರುವಾಗುತ್ತದೆ. ಅನುಮಾನವೂ ಶುರುವಾಗುತ್ತದೆ. "ಮುಖ್ಯಮಂತ್ರಿಯಾಗಲು ನಾನು ಯೋಗ್ಯನಲ್ಲ" ಎಂದು ನರಿಗೆ ಮಾರುತ್ತರ ನೀಡುತ್ತದೆ.

ನರಿ ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಕತ್ತೆಯನ್ನು ಹೊಗಳಲು ಶುರು ಮಾಡುತ್ತದೆ, " ನೀನು ಬಹಳ ಬುದ್ದಿವಂತ, ಪರಿಶ್ರಮಿ, ಹಾಗಾಗಿಯೇ ನಿನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ" ಎಂದು ಮುಖಸ್ತುತಿ ಮಾಡುತ್ತದೆ. ನರಿಯ ಮಾತನ್ನು ಕೇಳಿದ ಕತ್ತೆಗೆ ನರಿಯ ಮಾತುಗಳ ಮೇಲೆ ನಂಬಿಕೆ ಬರುತ್ತದೆ. ಸಿಂಹದ ಬಳಿಗೆ ಹೋಗುತ್ತದೆ. ಆದರೆ ಸಿಂಹವು ಕತ್ತೆಯು ಹತ್ತಿರ ಬಂದೊಡನೆ ತನ್ನ ಬಲವಾದ ಮುಷ್ಟಿಯನ್ನು ಅಪ್ಪಳಿಸಿ ಕತ್ತೆಯನ್ನು ಕೊಳ್ಳುತ್ತದೆ, ನಂತರ ತಿನ್ನಲು ಅಣಿಯಾಗುತ್ತದೆ. ಇನ್ನೇನು ತಿನ್ನಬೇಕು ಎನ್ನುವಾಗ ನರಿಯು ಸಿಂಹವನ್ನು ಕಂಡು - " ಮಹಾರಾಜ, ನೀವು ಸ್ನಾನ ಮಾಡಿ ತುಂಬ ದಿನಗಳಾಗಿದೆ, ಸ್ನಾನ ಮಾಡಿ ಬಂದು, ಕತ್ತೆಯನ್ನು ತಿನ್ನಿ " ಎನ್ನುತ್ತದೆ. ನರಿಯ ಮಾತು ಸಿಂಹಕ್ಕೆ ಸರಿಯೆನಿಸುತ್ತದೆ. ಕತ್ತೆಯನ್ನು ಕಾಯುತ್ತಿರು ಎಂದು ನರಿಗೆ ಹೇಳಿ ಸ್ನಾನ ಮಾಡಲು ಹೋಗುತ್ತದೆ. ಇತ್ತ ವಿಧೇಯತೆ ಇಂದ ಕಾಯುತ್ತಿದ ನರಿಯ ಬಾಯಾಲ್ಲಿ ನೀರು ಬರಲು ಶುರುವಾಗುತ್ತದೆ. ಅಷ್ಟಕ್ಕೂ ಕತ್ತೆಯನ್ನು ಕರೆ ತಂದವನು ನಾನು, ಅದಕ್ಕೆ ಅದರ ದೇಹದ ಒಳ್ಳೆಯ ಬಾಗ ನನಗೆ ಸೇರಬೇಕು ಎಂದು ಕತ್ತೆ ಯಾ ಮೆದುಳನ್ನು ತಿಂದು ಮುಗಿಸುತ್ತದೆ. ಸ್ನಾನ ಮಾಡಿ ಬಂದ ಸಿಂಹಕ್ಕೆ ಏನೋ ವ್ಯತ್ಯಾಸವಾದಂತೆ ಬಾಸವಾಗುತ್ತದೆ. ಅನುಮಾನದಿಂದ ಪ್ರಶ್ನಿಸಿದಾಗ - " ಕತ್ತೆಗೆ ನೀನು ಕೊಟ್ಟ ಗುದ್ದಿನಿಂದ ಅದರ ನೆತ್ತಿ ಒಳಗೆ ಹೋಗಿದೆ" ಎನ್ನುತ್ತದೆ ನರಿ. ನರಿಯ ಉತ್ತರದಿಂದ ತೃಪ್ತನಾಗಿ ಸಿಂಹವು ಕತ್ತೆಯನ್ನು ತಿನ್ನಲು ಕೂತ ಸಿಂಹಕ್ಕೆ ಕತ್ತೆ ಯಾ ಮೆದುಳೇ ಮಯಾವಾಗಿರುವುದು ತಿಳಿಯುತ್ತದೆ. ಮತ್ತೆ ನರಿಯ ಕಡೆ ಅನುಮಾನದಿಂದ ನೋಡುತ್ತದೆ " ಒಂದು ವೇಳೆ ಕತ್ತೆಗೆ ಮೆದುಳು ಇದ್ದಿದ್ದರೆ ಅದು ನಿನ್ನನ್ನು ಕಾಣಲು ಬರುತ್ತಿತ್ತೆ " ಸಿಂಹಕ್ಕೆ ಮರು ಪ್ರಶ್ನೆ ಹಾಕುತ್ತದೆ. ಮೆದುಳೇ ಇಲ್ಲದ ಮ್ಯಾನೇಜರ್ ಕೆಳಗೆ ಕೆಲಸ ಮಾಡೋ, ಅಥವಾ ನಮ್ಮ ಮೆದುಳೇ ಇಲ್ಲದ ಹಾಗೆ ಮಾಡುವ ಯಾಂತ್ರಿಕ ಕೆಲಸಕ್ಕೋ ಈ ಬ್ಲಾಗ್ ಸಮರ್ಪಿತ. ಮತ್ತೆ ಸಿಗುವವರೆಗೂ.....ಬೈ...ಹೊಸ ವರುಷದ ಶುಭಾಶಯಗಳು.

ಸರ್ವಾದಿಕಾರಿ ನರಿಯು, ಕುರಿಯು ನಾನದ ಕಥೆಯು....


ಅದೊಂದು ಬಹಳ ಬುದ್ದಿವಂತ ನರಿ. ಒಮ್ಮೆ ಆಹಾರವನ್ನು ಹುಡುಕಿಕೊಂಡು ಅದು ನಗರಕ್ಕೆ ಬರುತ್ತದೆ. ನರಿಯನ್ನು ಕಂಡ ನಗರದ ನಾಯಿಗಳು ನರಿಯನ್ನು ಅಟ್ಟಿಸಿಕೊಂಡು ಹೋಗುತ್ತವೆ, ನರಿಯು ಬೆಚ್ಚಿ ಬಿದ್ದು ಕಾಲಿಗೆ ಬುದ್ದಿ ಹೇಳುತ್ತಾ ಓಡಲು ಶುರು ಮಾಡಿ ಓಡಿ, ಓಡಿ ಒಬ್ಬ ಅಗಸನ ಮನೆಯನ್ನು ಪ್ರವೇಶಿಸುತ್ತದೆ, ಅದಕ್ಕೆ ದಿಗಿಲಾಗಿ , ಕಕ್ಕಾಬಿಕ್ಕಿಯಾಗಿ ಅಲ್ಲಿಯೇ ಇದ್ದ ಬಣ್ಣದ ತೊಟ್ಟಿಯಲ್ಲಿ ಬೀಳುತ್ತದೆ. ತೊಟ್ಟಿಯಲ್ಲಿದ್ದ ನೀಲಿ ಬಣ್ಣವೆಲ್ಲ ನರಿಯ ಮೈಗೆ ಹತ್ತಿ , ಅದು ನೀಲಿ ನರಿಯಾಗಿ ಹೊರ ಬರುತ್ತದೆ. ನರಿಯು ವಾಪಸ್ಸು, ತನ್ನ ಕಾಡಿಗೆ ಹೋದಾಗ , ಅಲ್ಲಿರುವ ಪ್ರಾಣಿಗಳೆಲ್ಲ ಅದನ್ನು ಕಂಡು ಆಶ್ಚರ್ಯ ಪಟ್ಟು ಇದ್ಯಾವುದೋ ಹೊಸ ಪ್ರಾಣಿಯ ಎಂದು ಅದನ್ನು ಪ್ರಶ್ನಿಸುತ್ತವೆ. ಇದೆ ಸರಿಯಾದ ಸಮಯವೆಂದು ನರಿಯು - " ನಾನು ದೇವ ಲೋಕದಿಂದ ಬಂದಿರುವ ದೇವ-ದೇವತೆಗಳ ಒಡೆಯನಾದ ಇಂದ್ರನ ಪ್ರತಿನಿಧಿ , ಈ ಕಾಡನ್ನು ರಕ್ಷಿಸಲು ಆ ಇಂದ್ರನೇ ನನ್ನನ್ನು ಈ ಕಾಡಿಗೆ ಕಳಿಸಿದ್ದಾನೆ "ಎಂದು ಬೊಗಳೆ ಬಿಡುತ್ತದೆ.

ಪಾಪ ಆ ಕಾಡಿನ ಮುಗ್ದ ಪ್ರಾಣಿಗಳು ನರಿಯ ಮಾತನ್ನು ನಂಬಿ, ನರಿಯು ಆ ಕಾಡಿನ ಸರ್ವಾದಿಕಾರಿಯ ಆಸನವನ್ನು ಏರಿ, ಸಿಂಹವನ್ನು ಪ್ರದಾನ ಮಂತ್ರಿಯನ್ನಾಗಿ, ಹುಲಿಯನ್ನು ತನ್ನ ಮಲಗುವ ಕೋಣೆಕಾವಲುಗಾರನನ್ನಾಗಿ ಹಾಗಿ ಆನೆಯನ್ನು ದ್ವಾರಪಾಲಕನನ್ನಾಗಿ ನೇಮಿಸಿ ನರಿಯು ತನ್ನ ಆಳ್ವಿಕೆಯನ್ನು ಪ್ರಾರಂಭ ಮಾಡುತ್ತದೆ. ಕಾಡಿನ ಪ್ರಾಣಿಗಳು ಬೇಟೆಯಾಡಿ ತಂದ ಬಲಿಗಳನ್ನು, ನರಿಯು ಸಮನಾಗಿ ಎಲ್ಲರಿಗೂ ಹಂಚಿ ರಾಜಧರ್ಮವನ್ನು ಪಾಲಿಸುತ್ತಿರುತ್ತದೆ. ಒಂದು ಸಲ ನರಿಯು ಗದ್ದುಗೆಯ ಮೇಲೆ ಆಸೀನವಾಗಿರುತ್ತದೆ, ಆ ವೇಳೆಯಲ್ಲಿ ನರಿಗಳ ಹಿಂಡೊಂದು ಸಮೀಪದಲ್ಲೇ ಹಾಡು ಹೋಗುತಿರುತ್ತವೆ. ಹಾಗೆ ಹೋಗುತ್ತಾ ಇರುವ ನರಿಗಳು ಜೋರಾಗಿ ಕೂಗುತ್ತಾ ಸಾಗುತ್ತಿರುತ್ತವೆ. ಈ ಕೂಗನ್ನು ಕೇಳಿ ರಾಜನಾಗಿದ್ದ ನರಿಗೆ ತಡೆದು ಕೊಳ್ಳಲಾಗದೆ, ಕೂಗಲಾರಂಭಿಸುತ್ತದೆ. ಆದರೆ ಗದ್ದುಗೆಯ ಮೇಲೆ ಕೂತಿದ್ದ ತನ್ನ ರಾಜನ ನಿಜ ಬಣ್ಣ ತಿಳಿದ ಕಾಡಿನ ಪ್ರಾಣಿಗಳು ನರಿಯು ಬಡಿದು, ಬಡಿದು ಸಾಯಿಸುತ್ತವೆ. ಈ ನೀತಿ ಕಥೆಯನ್ನು ಇಲ್ಲಿ ಬರೆಯಲ್ಲೂ ಇಷ್ಟೇ ಕಾರಣ- ನಮ್ಮ ಸುತ್ತ ಮುತ್ತ ಈ ನರಿಯ ಹಾಗೆ ಬಣ್ಣ ಬಳಿದು ಕೊಂಡು ಜನ ಕಾಣ ಸಿಗುತ್ತಾರೆ , ಅಂಥ ಒಂದು ನರಿಯ ಕೆಳಗೆ ನಾನು ಕೆಲಸ ಮಾಡುತಿದ್ದೆ ಎಂಬ ನೆನಪು ಬಂದ ಹಾಗೆ ಈ ಕಥೆಯನ್ನು ಇಲ್ಲಿ ಬರೆದು ಹಾಕುತ್ತಿದ್ದೇನೆ.