Tuesday, December 30, 2008

ಕನ್ನಡಮ್ಮ ಇಂಗ್ಲೀಷು ಕುದುರೆಯ ಮೇಲೇರಿ ಬಂದಾಗ...


ನೆನ್ನೆ ಕ್ಯಾಬ್ನಲ್ಲಿ ಆಫೀಸಿಗೆ ಬಂದು, ಕೈ ಗಡಿಯಾರ ನೋಡಿಕೊಂಡೆ. ಬರ್ರೋಬರ್ರಿ ೨೦ ನಿಮಿಷ ಬೇಗ ಬಂದಿದ್ದೆ. ನನ್ನ ಜಾಗಕ್ಕೆ ಬಂದು, ನನ್ನ ಲ್ಯಾಪ್-ಟಾಪ್ ಇಟ್ಟು, ಆಫೀಸಿನ ಹೊರಗೆ ಬಂದು, ಒಂದು ದಮ್ಮು ಹಚ್ಚಿ, ಆ ದಿನ ಮಾಡಬೇಕಾದ ಕೆಲಸದ ಪಟ್ಟಿಯನ್ನು ಮನಸ್ಸಿನಲ್ಲಿಯೇ ಮಾಡಿಕೊಂಡು, ಇನ್ನೇನು ಆಫೀಸಿನ ಒಳಗೆ ಬರಬೇಕು, ಆವಾಗ ಒಬ್ಬ ೨೦-೨೨ ವಯಸ್ಸಿನ ಯುವಕ, ಇಂಗ್ಲೀಷು ಪದಕೋಶ ಹಿಡಿದು ಬಂದು ತೆಗೆದು ಕೊಳ್ಳುವಂತೆ ದುಂಬಾಲುಬಿದ್ದ. ಇಂಗ್ಲೀಷಿನಲ್ಲಿಯೇ ಮಾತನಾಡಲು ಪ್ರಾರಂಬಿಸಿದ ಅವನು, ಸ್ವಲ್ಪ ಸಮಯದ ನಂತರ, ಹಿಂದಿಯಲ್ಲಿ ಕೊನೆಗೆ ಹರುಕು ಹಿಂದಿ/ಇಂಗ್ಲೀಷು ಉಪಯೋಗಿಸಿ convince ಮಾಡಲು ಪ್ರಯತ್ನ ಮಾಡಿದ. ನಾನು "simply not convinced " ಎಂದು ಅವನ್ನನ್ನು ಸಾಗಹಾಕಿ ಆಫೀಸಿನ ಒಳಗೆ ಬಂದೆ.
ಬೆಂಗಳೂರಿನಂತಹ cosmopolitan/metropolitan ನಗರದಲ್ಲಿ, ಬಹುಬಾಷಾ channels/mediums ಬೇಕಾಗಬಹುದು. ಆದರೆ ಕನ್ನಡಿಗನಾಗಿ ನಾನು, ಶಾಲೆಯಲ್ಲಿ, ಕಾಲೇಜಿನಲ್ಲಿ ಕನ್ನಡ ಕಲಿತ ಪರಿಣಾಮವಾಗಿ, ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ಬಳಸಲು ಇಷ್ಟಪಡುತ್ತೇನೆ. ಇದೆ ಸಂದರ್ಬದಲ್ಲಿ ಪ್ರೌಡಶಾಲೆಯ ಸುಬ್ರಾಯ ಮೇಷ್ಟ್ರು ಹೇಳಿದ ಮಾತು ನೆನಪಿಗೆ ಬರುತ್ತದೆ - " ಮನು, ಮಾತೃ ಬಾಷೆಯಲ್ಲಿ ಇರುವ ಸ್ವಾತಂತ್ರ್ಯ, ಸೃಜನಶೀಲತೆ, ಯೋಚನಾ ಲಹರಿ, ಇಂಗ್ಲೀಷನ್ನು ಬಾಷೆಯಾಗಿ ಶಾಲೆಯಲ್ಲಿ ಕಲಿಯುವ ನಿನಗೆ, ಕಲಿತಿರುವ ನನಗೆ, ಇಂಗ್ಲೀಷು ಉಪಯೋಗಿಸುವಾಗ ಬರಲು ಸಾಧ್ಯವಿಲ್ಲ" ಎಂದರು. ಇದೆ ರೀತಿ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಗಾಗಿ ಕಲಿಯುವಾಗ ಕ್ಲಾಸಿನಲ್ಲಿ - "ನೀವು ಎಲ್ಲರ ಜೊತೆ ಇಂಗ್ಲೀಷಿನಲ್ಲಿಯೇ ಮಾತನಾಡಬೇಕು, it will improve your confidence and reduce the vernacular way of speech/expression" ಎಂದು ಪ್ರೊ.ಪೂನಂ ನಾರಂಗ್ ಹೇಳಿದ ಮಾತು ಕೂಡ ನೆನಪಿದೆ.
ಇಬ್ಬರೂ ತುಂಬ ಕಲಿತವರೇ, ಇಬ್ಬರ ವಾದವೂ ಸರಿಯೇ, ವ್ಯವಹಾರಿಕ ಬಾಷೆಯಾಗಿ ಇಂಗ್ಲೀಷು ಉಪಯೋಗಿಸುವುದರಲ್ಲಿ ಯಾವ ಹಾನಿಯೂ ಇಲ್ಲ, ಆದರೆ ವ್ಯವಹಾರಿಕ ಬಾಷೆ ಮಾತೃ ಬಾಷೆಯ ಜಾಗ ತೆಗೆದುಕೊಳ್ಳೋ ರೀತಿ ಇಂಗ್ಲೀಷು ಪ್ರೀತಿ ನಮ್ಮ ಸುತ್ತಲುಬೆಳೆಯುತಿದ್ದೆ/ಬೆಳೆದಿದೆ . ಇಂತಹ ಬೆಳವಣಿಗೆ ಮಾರಕವಾಗುವ ಮುನ್ನ, mummy-daddy ಬಂದು ಅಪ್ಪ-ಅಮ್ಮ ಆಗುವ ಮುನ್ನ, ಆನೆ ಹೋಗಿ Elephant ಆಗುವ ಮುನ್ನ, ...ನಾವೆಲ್ಲರೂ ಜಾಗ್ರೃತವಾಗೋಣವೆ???

Friday, December 26, 2008

ಸಿಂಹ ಮತ್ತು ನರಿಯ ಕಥೆ

ಅದೊಂದು ಮುದಿ ಸಿಂಹ. ಅದರ ಕಾಲುಗಳು ತ್ರಾಣ ಕಳೆದುಕೊಂಡಿವೆ. ಓಡಾಡಿ ಬೇಟೆಯಾಡಲು ಆಗುತ್ತಿಲ್ಲ. ಹಸಿವಿನ್ನಿಂದ ಅದರ ದೇಹ ದಿನದಿಂದ ದಿನಕ್ಕೆ ಕುಗ್ಗ ತೊಡಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಾಯುವುದು ನಿಶ್ಚಿತವೆಂದು ಸಿಂಹಕ್ಕೆ ಮನವರಿಕೆಯಾಗುತ್ತದೆ. ಆದರೇನಂತೆ ಅದು ಕಾಡಿನ ರಾಜ, ಅದರ ಆದೇಶವನ್ನು ಕಾಡಿನ ಪ್ರಾಣಿಗಳು ಪಾಲಿಸಲೇಬೇಕು . ಅದಕೊಂದು ಉಪಾಯ ಹೊಳೆಯಿತು ಕೂಡಲೇ ನರಿಯನ್ನು ಕರೆಸಿಕೊಂಡಿತು. " ನರಿ, ನೀನು ಬಹಳ ಚತುರ. ಹಾಗಾಗಿ ನಿನ್ನನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕೊಂಡಿದ್ದೇನೆ" ಎಂದಿತು ಸಿಂಹ. ಮೊದಲೇ ಚತುರನಾದ ನರಿಯು ಸಿಂಹದ ಮಾತನ್ನು ನಂಬುವುದಿಲ್ಲ. ಆದರೆ ಸಿಂಹದ ಮಾತುಗಳನ್ನು ದಿಕ್ಕರಿಸುವ ಹಾಗು ಇಲ್ಲ, ಒಲ್ಲದ ಮನಸ್ಸಿನಿಂದ ನರಿಯು ಮಂತ್ರಿಯಾಗಲು ಓಪ್ಪಿಕೊಂಡಿತು. ಸಿಂಹಕ್ಕೆ ನರಿಯ ಒಪ್ಪಿಗೆ ಸಿಕ್ಕ ಮೇಲೆ ಖುಶಿಯಾಯಿತು.

"ನೋಡು ನರಿ, ನಾನು ಸಿಂಹ, ಮೃಗರಾಜ , ನನಗೆ ದಿನವು ಬೇಟೆಯಾಡುವ ಅಗತ್ಯವಿಲ್ಲ, ನನ್ನ ಮಂತ್ರಿಯಾದ ನೀನು ಇನ್ನು ಮುಂದೆ ನನಗೆ ಒಂದು ಪ್ರಾಣಿಯನ್ನು ಒದಗಿಸಬೇಕು " ಎಂದನ್ನುತ್ತದೆ ಸಿಂಹ. ಬೇರೆ ದಾರಿಯೇ ಕಾಣದ ನರಿಯು ಬೇಟೆಯಾಡಲು ಕಾಡಿನೊಳಗೆ ಹೋಗುತ್ತದೆ. ದಾರಿಯಲ್ಲಿ ನರಿಗೆ ಒಂದು ಕೊಬ್ಬಿದ ಕತ್ತೆ ಸಿಗುತ್ತದೆ. ಕತ್ತೆ ಯನ್ನು ಕಂಡ ನರಿಯು " ಕಾಡಿನ ರಾಜನಾದ ಸಿಂಹವು ನಿನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿಶ್ಚಯಿಸಿದೆ. ಅದಕ್ಕಾಗಿ ನಿನ್ನನ್ನು ಹುಡುಕುತಿದ್ದೆ " ಎಂದು ಹೇಳುತ್ತದೆ. ಸಿಂಹದ ಹೆಸರು ಕೇಳಿದ ಕತ್ತೆ ಗೆ ಹೆದರಿಕೆ ಶುರುವಾಗುತ್ತದೆ. ಅನುಮಾನವೂ ಶುರುವಾಗುತ್ತದೆ. "ಮುಖ್ಯಮಂತ್ರಿಯಾಗಲು ನಾನು ಯೋಗ್ಯನಲ್ಲ" ಎಂದು ನರಿಗೆ ಮಾರುತ್ತರ ನೀಡುತ್ತದೆ.

ನರಿ ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಕತ್ತೆಯನ್ನು ಹೊಗಳಲು ಶುರು ಮಾಡುತ್ತದೆ, " ನೀನು ಬಹಳ ಬುದ್ದಿವಂತ, ಪರಿಶ್ರಮಿ, ಹಾಗಾಗಿಯೇ ನಿನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ" ಎಂದು ಮುಖಸ್ತುತಿ ಮಾಡುತ್ತದೆ. ನರಿಯ ಮಾತನ್ನು ಕೇಳಿದ ಕತ್ತೆಗೆ ನರಿಯ ಮಾತುಗಳ ಮೇಲೆ ನಂಬಿಕೆ ಬರುತ್ತದೆ. ಸಿಂಹದ ಬಳಿಗೆ ಹೋಗುತ್ತದೆ. ಆದರೆ ಸಿಂಹವು ಕತ್ತೆಯು ಹತ್ತಿರ ಬಂದೊಡನೆ ತನ್ನ ಬಲವಾದ ಮುಷ್ಟಿಯನ್ನು ಅಪ್ಪಳಿಸಿ ಕತ್ತೆಯನ್ನು ಕೊಳ್ಳುತ್ತದೆ, ನಂತರ ತಿನ್ನಲು ಅಣಿಯಾಗುತ್ತದೆ. ಇನ್ನೇನು ತಿನ್ನಬೇಕು ಎನ್ನುವಾಗ ನರಿಯು ಸಿಂಹವನ್ನು ಕಂಡು - " ಮಹಾರಾಜ, ನೀವು ಸ್ನಾನ ಮಾಡಿ ತುಂಬ ದಿನಗಳಾಗಿದೆ, ಸ್ನಾನ ಮಾಡಿ ಬಂದು, ಕತ್ತೆಯನ್ನು ತಿನ್ನಿ " ಎನ್ನುತ್ತದೆ. ನರಿಯ ಮಾತು ಸಿಂಹಕ್ಕೆ ಸರಿಯೆನಿಸುತ್ತದೆ. ಕತ್ತೆಯನ್ನು ಕಾಯುತ್ತಿರು ಎಂದು ನರಿಗೆ ಹೇಳಿ ಸ್ನಾನ ಮಾಡಲು ಹೋಗುತ್ತದೆ. ಇತ್ತ ವಿಧೇಯತೆ ಇಂದ ಕಾಯುತ್ತಿದ ನರಿಯ ಬಾಯಾಲ್ಲಿ ನೀರು ಬರಲು ಶುರುವಾಗುತ್ತದೆ. ಅಷ್ಟಕ್ಕೂ ಕತ್ತೆಯನ್ನು ಕರೆ ತಂದವನು ನಾನು, ಅದಕ್ಕೆ ಅದರ ದೇಹದ ಒಳ್ಳೆಯ ಬಾಗ ನನಗೆ ಸೇರಬೇಕು ಎಂದು ಕತ್ತೆ ಯಾ ಮೆದುಳನ್ನು ತಿಂದು ಮುಗಿಸುತ್ತದೆ. ಸ್ನಾನ ಮಾಡಿ ಬಂದ ಸಿಂಹಕ್ಕೆ ಏನೋ ವ್ಯತ್ಯಾಸವಾದಂತೆ ಬಾಸವಾಗುತ್ತದೆ. ಅನುಮಾನದಿಂದ ಪ್ರಶ್ನಿಸಿದಾಗ - " ಕತ್ತೆಗೆ ನೀನು ಕೊಟ್ಟ ಗುದ್ದಿನಿಂದ ಅದರ ನೆತ್ತಿ ಒಳಗೆ ಹೋಗಿದೆ" ಎನ್ನುತ್ತದೆ ನರಿ. ನರಿಯ ಉತ್ತರದಿಂದ ತೃಪ್ತನಾಗಿ ಸಿಂಹವು ಕತ್ತೆಯನ್ನು ತಿನ್ನಲು ಕೂತ ಸಿಂಹಕ್ಕೆ ಕತ್ತೆ ಯಾ ಮೆದುಳೇ ಮಯಾವಾಗಿರುವುದು ತಿಳಿಯುತ್ತದೆ. ಮತ್ತೆ ನರಿಯ ಕಡೆ ಅನುಮಾನದಿಂದ ನೋಡುತ್ತದೆ " ಒಂದು ವೇಳೆ ಕತ್ತೆಗೆ ಮೆದುಳು ಇದ್ದಿದ್ದರೆ ಅದು ನಿನ್ನನ್ನು ಕಾಣಲು ಬರುತ್ತಿತ್ತೆ " ಸಿಂಹಕ್ಕೆ ಮರು ಪ್ರಶ್ನೆ ಹಾಕುತ್ತದೆ. ಮೆದುಳೇ ಇಲ್ಲದ ಮ್ಯಾನೇಜರ್ ಕೆಳಗೆ ಕೆಲಸ ಮಾಡೋ, ಅಥವಾ ನಮ್ಮ ಮೆದುಳೇ ಇಲ್ಲದ ಹಾಗೆ ಮಾಡುವ ಯಾಂತ್ರಿಕ ಕೆಲಸಕ್ಕೋ ಈ ಬ್ಲಾಗ್ ಸಮರ್ಪಿತ. ಮತ್ತೆ ಸಿಗುವವರೆಗೂ.....ಬೈ...ಹೊಸ ವರುಷದ ಶುಭಾಶಯಗಳು.

ಸರ್ವಾದಿಕಾರಿ ನರಿಯು, ಕುರಿಯು ನಾನದ ಕಥೆಯು....


ಅದೊಂದು ಬಹಳ ಬುದ್ದಿವಂತ ನರಿ. ಒಮ್ಮೆ ಆಹಾರವನ್ನು ಹುಡುಕಿಕೊಂಡು ಅದು ನಗರಕ್ಕೆ ಬರುತ್ತದೆ. ನರಿಯನ್ನು ಕಂಡ ನಗರದ ನಾಯಿಗಳು ನರಿಯನ್ನು ಅಟ್ಟಿಸಿಕೊಂಡು ಹೋಗುತ್ತವೆ, ನರಿಯು ಬೆಚ್ಚಿ ಬಿದ್ದು ಕಾಲಿಗೆ ಬುದ್ದಿ ಹೇಳುತ್ತಾ ಓಡಲು ಶುರು ಮಾಡಿ ಓಡಿ, ಓಡಿ ಒಬ್ಬ ಅಗಸನ ಮನೆಯನ್ನು ಪ್ರವೇಶಿಸುತ್ತದೆ, ಅದಕ್ಕೆ ದಿಗಿಲಾಗಿ , ಕಕ್ಕಾಬಿಕ್ಕಿಯಾಗಿ ಅಲ್ಲಿಯೇ ಇದ್ದ ಬಣ್ಣದ ತೊಟ್ಟಿಯಲ್ಲಿ ಬೀಳುತ್ತದೆ. ತೊಟ್ಟಿಯಲ್ಲಿದ್ದ ನೀಲಿ ಬಣ್ಣವೆಲ್ಲ ನರಿಯ ಮೈಗೆ ಹತ್ತಿ , ಅದು ನೀಲಿ ನರಿಯಾಗಿ ಹೊರ ಬರುತ್ತದೆ. ನರಿಯು ವಾಪಸ್ಸು, ತನ್ನ ಕಾಡಿಗೆ ಹೋದಾಗ , ಅಲ್ಲಿರುವ ಪ್ರಾಣಿಗಳೆಲ್ಲ ಅದನ್ನು ಕಂಡು ಆಶ್ಚರ್ಯ ಪಟ್ಟು ಇದ್ಯಾವುದೋ ಹೊಸ ಪ್ರಾಣಿಯ ಎಂದು ಅದನ್ನು ಪ್ರಶ್ನಿಸುತ್ತವೆ. ಇದೆ ಸರಿಯಾದ ಸಮಯವೆಂದು ನರಿಯು - " ನಾನು ದೇವ ಲೋಕದಿಂದ ಬಂದಿರುವ ದೇವ-ದೇವತೆಗಳ ಒಡೆಯನಾದ ಇಂದ್ರನ ಪ್ರತಿನಿಧಿ , ಈ ಕಾಡನ್ನು ರಕ್ಷಿಸಲು ಆ ಇಂದ್ರನೇ ನನ್ನನ್ನು ಈ ಕಾಡಿಗೆ ಕಳಿಸಿದ್ದಾನೆ "ಎಂದು ಬೊಗಳೆ ಬಿಡುತ್ತದೆ.

ಪಾಪ ಆ ಕಾಡಿನ ಮುಗ್ದ ಪ್ರಾಣಿಗಳು ನರಿಯ ಮಾತನ್ನು ನಂಬಿ, ನರಿಯು ಆ ಕಾಡಿನ ಸರ್ವಾದಿಕಾರಿಯ ಆಸನವನ್ನು ಏರಿ, ಸಿಂಹವನ್ನು ಪ್ರದಾನ ಮಂತ್ರಿಯನ್ನಾಗಿ, ಹುಲಿಯನ್ನು ತನ್ನ ಮಲಗುವ ಕೋಣೆಕಾವಲುಗಾರನನ್ನಾಗಿ ಹಾಗಿ ಆನೆಯನ್ನು ದ್ವಾರಪಾಲಕನನ್ನಾಗಿ ನೇಮಿಸಿ ನರಿಯು ತನ್ನ ಆಳ್ವಿಕೆಯನ್ನು ಪ್ರಾರಂಭ ಮಾಡುತ್ತದೆ. ಕಾಡಿನ ಪ್ರಾಣಿಗಳು ಬೇಟೆಯಾಡಿ ತಂದ ಬಲಿಗಳನ್ನು, ನರಿಯು ಸಮನಾಗಿ ಎಲ್ಲರಿಗೂ ಹಂಚಿ ರಾಜಧರ್ಮವನ್ನು ಪಾಲಿಸುತ್ತಿರುತ್ತದೆ. ಒಂದು ಸಲ ನರಿಯು ಗದ್ದುಗೆಯ ಮೇಲೆ ಆಸೀನವಾಗಿರುತ್ತದೆ, ಆ ವೇಳೆಯಲ್ಲಿ ನರಿಗಳ ಹಿಂಡೊಂದು ಸಮೀಪದಲ್ಲೇ ಹಾಡು ಹೋಗುತಿರುತ್ತವೆ. ಹಾಗೆ ಹೋಗುತ್ತಾ ಇರುವ ನರಿಗಳು ಜೋರಾಗಿ ಕೂಗುತ್ತಾ ಸಾಗುತ್ತಿರುತ್ತವೆ. ಈ ಕೂಗನ್ನು ಕೇಳಿ ರಾಜನಾಗಿದ್ದ ನರಿಗೆ ತಡೆದು ಕೊಳ್ಳಲಾಗದೆ, ಕೂಗಲಾರಂಭಿಸುತ್ತದೆ. ಆದರೆ ಗದ್ದುಗೆಯ ಮೇಲೆ ಕೂತಿದ್ದ ತನ್ನ ರಾಜನ ನಿಜ ಬಣ್ಣ ತಿಳಿದ ಕಾಡಿನ ಪ್ರಾಣಿಗಳು ನರಿಯು ಬಡಿದು, ಬಡಿದು ಸಾಯಿಸುತ್ತವೆ. ಈ ನೀತಿ ಕಥೆಯನ್ನು ಇಲ್ಲಿ ಬರೆಯಲ್ಲೂ ಇಷ್ಟೇ ಕಾರಣ- ನಮ್ಮ ಸುತ್ತ ಮುತ್ತ ಈ ನರಿಯ ಹಾಗೆ ಬಣ್ಣ ಬಳಿದು ಕೊಂಡು ಜನ ಕಾಣ ಸಿಗುತ್ತಾರೆ , ಅಂಥ ಒಂದು ನರಿಯ ಕೆಳಗೆ ನಾನು ಕೆಲಸ ಮಾಡುತಿದ್ದೆ ಎಂಬ ನೆನಪು ಬಂದ ಹಾಗೆ ಈ ಕಥೆಯನ್ನು ಇಲ್ಲಿ ಬರೆದು ಹಾಕುತ್ತಿದ್ದೇನೆ.

ಒಂಟಿತನದ ಗುರುವೇ ಒಲವೇ ?


ಹೊರಗೆ ಧೋ ಎಂದು ಮಳೆ ಸುರಿಯುತ್ತಿತ್ತು. ಬೆಂಗಳೂರು ಕಂಡ ಆ ವರ್ಷದ ಜೋರು ಮಳೆ ದಿನಗಳ್ಳಲ್ಲಿ ಅದೂ ಒಂದು.ನಾಳೆ ಅವಳ ಮದುವೆ. ಟೇಬಲ್ ಮೇಲೆ ಅವಳು ಬಂದು ಮಹೇಶನಿಗೆ ತಲುಪಿಸಿ ಹೋಗಿದ್ದ ಮುದ್ದಾದ ವಿವಾಹ ಆವ್ಹಾನ ಪತ್ರ.ಆಗ ರಾತ್ರಿಯ ೧೧:೪೫ ಗಂಟೆ,೨ ಕ್ವಾರ್ಟರ್ ರಂ ಕುಡಿದು ಮುಗಿಸಿ,ಮಹೇಶನಿಗೆ ಮೂರನೆಯದನ್ನು ತರಲು ಹೇಳಿದೆ. ಮಹೇಶ ಅಂದ "ಅಣ್ಣ, ತುಂಬ ಕುಡಿದಿದ್ದಿರ,ಮನೆಗೆ ಬೇರೆ ಹೋಗ ಬೇಕು ನೀವು,ಬೇಡ ಅಣ್ಣ" ಎಂದು ಗೋಗರೆದ.ಅದಕ್ಕೆ ನಾನು " "ಮಹೇಶ, ಯಾಕೋ ಇವತ್ತು ಅವಳ ನೆನಪು ತುಂಬ ಕಾಡುತ್ತಿದೆ, ಮರೆಯಲಾದರೂ ಕುಡಿಯಲೇ ಬೇಕು,ನೆನಪುಗಳನ್ನು ಅಳಿಸಿ ಹಾಕಲು ಸಮಯವೇ ಮದ್ದು,ಆ ಸಮಯವನ್ನು ಇದಿರು ಗೊಳ್ಳುತ್ತಾ ಕೂಡಲು ಇದೇ ಮದ್ದು,ತೆಗೆದು ಕೊಂಡು ಬಾ" ಎಂದೆ. ಮಹೇಶ ಇನ್ನೊಂದು ಕ್ವಾರ್ಟರ್ ತಂದು ಟೇಬಲ್ ಮೇಲೆ ಇಟ್ಟು ನನ್ನ ಮುಂದೆ ಕುಳಿತ.ಒಂದೊಂದೇ ಗುಟುಕು ಒಳಗೆ ಆದ ಹಾಗೆ ದುಖಃ ಉಮ್ಮಳಿಸಿ ಬಂದ ಅನುಭವ, ಹಳೆ ನೆನಪುಗಳು ಗೋಣಿಯ ಒಳಗಿಂದ ಹೊರ ಹರವಿಕೊಂಡು ಕೂತ ಅಜ್ಜಿಯ ಹಾಗೆ ನಾನು ಮಹೇಶನ ಮುಂದೆ ಕುಳಿತಿದ್ದೆ. ಸ್ನಾತಕೋತ್ತರ ಪದವಿಯಲ್ಲಿ ಅವಳು ನನ್ನ ಜೂನಿಯರ್,ಇಬ್ಬರು ಜೊತೆಗೂಡಿ ಒಂದೇ ಕಂಪನಿಗೆ ಪ್ರಾಜೆಕ್ಟ್ ಮಾಡುವಾಗ ಆದ ಗೆಳೆತನ, ನಮಗೆ ಅರಿವಿಲ್ಲದಂತೆ ಪ್ರೀತಿಗೆ ತಿರುಗಿತು. ನಾನು ದಿನವೂ ಫ್ರೆಂಚ್ ಕ್ಲಾಸ್ ಎಂದು ಮನೆಯಲ್ಲಿ ಸುಳ್ಳು ಹೇಳಿ ಅವಳೊಂದಿಗೆ ಕಳೆದ ಗಳಿಗೆಗಳು,ವೀಕೆಂಡ್ನಲ್ಲಿ ಸುತ್ತಿದ ಚಾಮುಂಡಿ ಬೆಟ್ಟ,ಕುಕ್ಕರಲ್ಲಿ ಕೆರೆ, ದಿನವೂ ಕೆಫೆ ಮಲ್ಲಿಗೆಯಲ್ಲಿ ತಿನ್ನುತಿದ್ದ ಬೆಳಗಿನ ತಿಂಡಿ,ಮೊದಲ ಬಾರಿ ಅವಳ ಅಪ್ಪ ಅಮ್ಮನನ್ನು ಭೇಟಿ ಮಾಡಿದಾಗ ಹೊಟ್ಟೆಯೊಳಗೆ ಹಾರಾಡಿದ ಚಿಟ್ಟೆಗಳು,ಮುಂಬೈನಿಂದ ವಾಪಸ್ಸು ಬಂದ ಮೇಲೆ ಅವಳನ್ನು ಕೊನೆ ಬಾರಿ ಬೇಟಿ ಮಾಡಿದ ಮಲ್ಲೇಶ್ವರದ ಕಾಫಿ ಡೇ,ಅವಳು ನನ್ನನು ಕಾರಣ ಹೇಳದೆ ತೊರೆದು ಹೋದ ಆ ಗಳಿಗೆ ಎಲ್ಲವು ಒಂದೇ ಸಾರಿ ಮನವನ್ನು ಹಿಂಡಿ ಹಿಪ್ಪೆ ಮಾಡಿತು.ಮನಸ್ಸಿನಲ್ಲಿ ಆದ ಆ ಗಾಯ ಮಾಸಲು ನಾನು ಕುಡಿಯುತಿದ್ದೆ,ಮಹೇಶ ೯೮.೩ ಹಚ್ಚಿ ಕೂತಿದ್ದ.ನಾಳೆ ನಾನು ಬೆಂಗಳೂರಿನಲ್ಲಿ ಇರಲ್ಲಾರೆ, ಇರ ಬಾರದು ಕೂಡ ಎಂದು ಕೊಳ್ಳುತಿರುವ ಆ ಕ್ಷಣದಲ್ಲೇ ಗಾಳಿಪಟದ ಆ ಹಾಡು ೯೮.೩ ನ ಲವ್ ಗುರು ಕಾರ್ಯಕ್ರಮದಲ್ಲಿ ಪ್ರೇಮಿಗಳಿಗಾಗಿ dedicate ಮಾಡಲ್ಪಡುತಿತ್ತು....

ಒಂದೆ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಣ್ಣಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲ್ಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು
ಕೊನೆ ಇರದ ಏಕಾಂತವೆ ಒಲವೆe
ಒಂದೇ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ


ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ?
ಪ್ರಾಣ ಉಳಿಸುವ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ?
ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲ್ಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು , ಕಣ್ಣ ಹನಿ ಸುಮ್ಮನೆ ಒಳಗೆ , ಅವಳನ್ನೇ ಜಪಿಸುವುದೆ ಒಲವೇ ?
ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ?
ಪ್ರಾಣ ಉಳಿಸುವ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ?

ನಾಲ್ಕು ಪದದ ಗೀತೆಯಲ್ಲಿ ಮಿಡಿತಗಳ ಬಣ್ಣಿಸಬಹುದೇ?
ಮೂರು ಸ್ವರದ ಹಾಡಿನಲ್ಲಿ ಮಿಡಿತಗಳ ಬಣ್ಣಿಸಬಹುದೆ?
ಉಕ್ಕಿ ಬರುವ ಕಂಠದಲ್ಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೇ ?
ಹಾಡು ಮುಗಿಯುವ ಹೊತ್ತಿಗೆ ನನ್ನ ಕಣ್ಣುಗಳು ಒದ್ದೆಯಾದವು, ಹೊರಗೆ ಮಳೆಯೂ ನನ್ನ ನೋವಿನಲ್ಲಿ ಪಾಲು ಪಡೆದು ಇನ್ನು ಜೋರಾಗಿ ಬೀಳಲು ಪ್ರಾರಂಬಿಸ್ಸಿತ್ತು .

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು


ನನ್ನ ಆರ್ಕುಟ್ ಗೆ ತುಂಬ ದಿನಗಳು ಕಳೆದ ಮೇಲೆ ಲಾಗಿನ್ ಮಾಡಿದೆ . ನನ್ನ ಜೊತೆ ಓದಿದ ಕೆಲ ಓದಿದ ಕೆಲ ಗೆಳೆಯರನ್ನು ನಾನು ನನ್ನ HITLIST ಗೆ ಸೇರಿಸುತ್ತ, ಕೆಲವರ ಜಾಲವಾಡುತಿದ್ದೆ , ಆ ಕ್ಷಣದಲ್ಲಿ ಸಿಕ್ಕಿತು ನೋಡಿ ಅವನ ಪ್ರೊಫೈಲ್ .ಅವನನ್ನು ನಾನು ಎಂದೂ ಕ್ಷಮಿಸಲಾರೆ,ತಾಂತ್ರಿಕ ಶಿಕ್ಷಣ ನನ್ನ ಜೊತೆ ಓದಿ,ಉನ್ನತ ವ್ಯಾಸಂಗಕ್ಕೆ ಅಮೆರಿಕೆಗೆ ಹೋಗಿ,ಅಲ್ಲೇ ಕೆಲಸ ಪಡೆದು, ಅಲ್ಲಿಯೇ ನೆಲೆ ನಿಂತವ.ಕೆಲ ವರುಷಗಳ ಹಿಂದೆ ಭಾರತಕ್ಕೆ ವಾಪಸ್ಸು ರಜೆಯ ಮೇಲೆ ಬಂದಿದ್ದ.ವಿಮಾನ ನಿಲ್ದಾಣಕ್ಕೆ ಅವನ್ನನ್ನು ಬರ ಮಾಡಿ ಕೊಳ್ಳಲ್ಲು ನಾನು ಹೋಗಿದ್ದೆ.

ವಿಮಾನ ನಿಲ್ದಾಣ ದಿಂದ ಆಚೆ ಬಂದ ಮೇಲೆ ಶುರು ಮಾಡಿದ, ಅಮೇರಿಕಾದ ಗುಣಗಾನ ಅಲ್ಲಿನ ವ್ಯವಸ್ಥೆ,ರಸ್ತೆ,ಆರ್ಥಿಕ ತಾಕತ್ತು,ಅದು ಇದು ಅಂಥ.ಸ್ವಲ್ಪ ಹೊತ್ತು ನಾನು ಸುಮ್ಮನಿದ್ದೆ,ಅವನ ಈ ಗುಣ ನನಗೆ ಹೊಸತಾಗಿರಲಿಲ್ಲ. ವಿಮಾನ ನಿಲ್ದಾಣ ದಲ್ಲಿ ಆದ ಭದ್ರತಾ ತಪಾಸಣೆ ಇಂದ ಹಿಡಿದು,ವಾಹನ ದಟ್ಟಣೆ,ಮಾಲಿನ್ಯ ,corruption,ಪಾಲಿಟಿಕ್ಸ್ ಅದು ಇದು ಅಂಥ ಶುರು ಮಾಡಿದ ಭಾರತವನ್ನು ತೆಗಳಲು .ನನ್ನ ಪಿತ್ತ ನೆತ್ತಿಗೇರಿ ಹೋಯಿತು - "ಮಗನೆ, ಇನ್ನು ಒಂದು ಮಾತು ಆಡಿದರೆ ಇಲ್ಲೇ ರೋಡ್ ಮೇಲೆ ಹಾಕಿ ತುಳಿದು ಸಾಯಿಸ್ಬಿಡ್ತ್ಹೇನೆ. ಹುಟ್ಟಿದ್ದು ಇಲ್ಲಿ, ಓದಿದ್ದು ಇಲ್ಲಿ,ಬೆಳೆದಿದ್ದು ಇಲ್ಲಿ. ನಿನ್ನ ಅಪ್ಪ-ಅಮ್ಮ ಮತ್ತು ನಿನ್ನ ಸಂಪೂರ್ಣ ಕುಟುಂಬ ವರ್ಗ ಇರುವುದು ಇಲ್ಲಿ,ಈಗ ನಿನಗೆ ಡಾಲರ್ ಸಂಬಳ ಕೊಡೊ US job ಇರೋದ್ರಿಂದ, ಅಲ್ಲಿನ ವ್ಯವಸ್ಥೆ ಉತ್ತಮ ಆಗಿ ಹೋಯಿತಾ? ನನ್ ಮಗನೆ , ನಿನಗೆ ಇಂಡಿಯಾ ದಿಂದ ಅತಿಯಾದ ಪ್ರಾಬ್ಲಮ್ ಇದೆ ಅಂದ್ರೆ ವಾಪಸ್ಸು ಬರುವ ದರ್ದು ಯಾಕೆ? ಅಲ್ಲೇ ನಿನ್ನ ಅಮೆರಿಕಾಮ್ಮನ ಮಡಿಲಲ್ಲಿ-I'm for sale, ನನ್ನನ್ನು ದತ್ತು ತಗ್ಗೊಳ್ಲಿ ಅಂಥ ಫಲಕ ಹಾಕೊಂಡು ಬಿದ್ದಿರು" ಎಂದೆ .ಕಾರ್ ನಿಲ್ಲಿಸಿ ಅವನಿಗೆ ೧೦೦ ರೂಪಾಯಿ ಕೊಟ್ಟು, ಬಸ್ಸಿನಲ್ಲಿ ಮನೆಗೆ ಹೋಗು , ನಿನ್ನ ಅಮೆರಿಕಾಮ್ಮನ ಭೂತ ಇಳಿಯುತ್ತೆ eನಡೆ. ಅವನು ಅಂದಿನಿಂದ ನನ್ನನ್ನು ಮತ್ತೆ ಸಂಪರ್ಕಿಸಲು ಪ್ರಯತ್ನ ಮಾಡಲಿಲ್ಲ,ಆದರೆ ಅಮೆರಿಕೆಗೆ ವಾಪಸು ಹೋದ ಮೇಲೆ ನನ್ನ ಮೇಲೆ ಇಲ್ಲದ ಸಲ್ಲದ ಗೂಬೆ ಕೂರಿಸಿ ಅಲ್ಲಿರುವ ಇತರ ಗೆಳೆಯರಿಗೆ ಒಂದು ಮೇಲ್ ಮಾಡಿದ.ನನ್ನ ವಯುಕ್ತಿಕ ನಿಲುವನ್ನು ನೀವು ಕೇಳಿದರೆ ನನಗೆ ಯಾವ ಸಂಸ್ಕೃತಿಯು ಕೆಟ್ಟದಲ್ಲ,ಯಾವ ದೇಶವು ಕೆಟ್ಟದಲ್ಲ,ನೆಲ ಜಲಗಳು ಎಲ್ಲಿ ಹೋದರೂ ಮಾನವನನ್ನು ಪೊರೆದು ಬೆಳಸುತ್ತವೆ. ನಾನು short term assigments ಮೇಲೆ ಹೊರ ದೇಶಗಳಿಗೆ ಹೋಗಿ ಬರುವ ಅವಕಾಶಗಳು ಸಿಕ್ಕಿವೆ. ಅಲ್ಲಿನ ನೆಲ, ಜಲ, ಬಾಷೆ , ಸಂಸ್ಕೃತಿಗಳನ್ನು ಕಂಡು ನಿಬೆರಗಾಗ್ಗಿದೆ. ಬಹಳಷ್ಟು ಕಲಿಯುವ ಸದವಕಾಶ ಒದಗಿ ಬಂದಿದೆ,ಆದರ ನನ್ನ ದೇಶವನ್ನು ಅವುಗಳ ಮುಂದೆ ಎಂದು ತುಲನಾತ್ಮಕ ವಿಮರ್ಶಗೆ ಒರೆ ಹಚ್ಚಲಿಲ್ಲ-ಭಾರತದ ಬಗ್ಗೆ ನನಗೆ ಹೆಮ್ಮೆ,ಗೌರವ ಹೇಗಿದೆಯೋ, ಅದೇ ರೀತಿ ಬೇರೆ ದೇಶಗಳ ಬಗ್ಗೆಯೂ ಇದೆ.ಆದರೆ ನನ್ನ ಕೆಲ ಗೆಳೆಯರು ಇದಕ್ಕೆ ವಿರುದ್ಧವಾಗಿ ಅಲ್ಲಿನ ಸಂಸ್ಕೃತಿಯನ್ನು ಉತ್ತಮ ಎನ್ನುವುದು ನನಗೇಕೋ ಜೀರ್ಣ ಮಾಡಿಕೊಳ್ಳಲಾಗದ ತುತ್ತು. ನಿಜಾಂಶ ತಿಳಿಯದೆ ಅವರು ಮಾಡುವ ಪ್ರಮಾದದಿಂದ ಎಸ್ಟೋ ಬಾರಿ ನನ್ನ ಮನ ನೊಂದಿದೆ,ಇಂದೂ ನೋಯುತ್ತದೆ.ದೂರದಲ್ಲಿ ಎಲ್ಲೋ ಗೋಪಾಲ ಕೃಷ್ಣ ಅಡಿಗರ ಹಾಡು ಕೇಳಿಬರುತ್ತಿದೆ......


ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮನ್ನಿನ್ನ ಕಣ್ಣನು
ಹೂವು ಹಾಸಿಗೆ ಚಂದ್ರ ಚಂದನ ಬಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದಿರಿಂಗಣ
ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದೂ ಇಲ್ಲಿಗೂ ಹಾಯಿತೆ
ವಿವಶವಾಯಿತು ಪ್ರಾಣ ಹ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕಯ್ಯನು
ಯಾವೆ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನೂ

"america america " ಚಿತ್ರದಲ್ಲಿ ಬರುವ ಒಂದು ಸನ್ನಿವೇಶ ಕಣ್ಣುಗಳ ಮುಂದೆ ಬಂದು ನಿಂತಿದೆ- ತನ್ನ ಗೆಳೆಯ ಶಶಾಂಕನಿಗೆ, ಸೂರ್ಯ ಹೇಳುವ ಮಾತು
- ನನ್ನ ಅಮ್ಮ ಹರುಕು ಸೀರೆ ಧರಿಸಿದ್ದಾಳೆ ಎಂದು, ರೇಷ್ಮೆ ಸೀರೆ ಧರಿಸಿದ ಬೇರೆ ಯಾರನ್ನೋ ಅಮ್ಮ ಎನ್ನಲಾಗದು. ಈ ನೆನಪಿನಲ್ಲೇ ಹೊರದೇಶದಲ್ಲಿ ನೆಲೆಸಿ ಭಾರತವನ್ನು ಆಗಸ್ಟ್ ೧೫ ರಂದೋ, ಅಥವಾ ಗಣ ರಾಜ್ಯೋತ್ಸವ ದಂದೋ, ಅಥವಾ ಭಾರತಿಯ ಹಬ್ಬಗಳನ್ನು ಆಚರಿಸುತ್ತಾ ನೆನೆದು ಅವರ ವ್ಯವಸ್ಥೆಉತ್ತಮ, ಭಾರತ ಇನ್ನು ಅನೆ, ಒಂಟೆ, ಎತ್ತಿನ ಗಾಡಿಯ ದೇಶ ವೆಂದು ಬಿಂಬಿಸುತ್ತಿರುವ ಎಲ್ಲ ಮಂಕು ದಿಣ್ಣೆ ದತ್ತು ಪುತ್ರ/ಪುತ್ರಿಯ ರಿಗೂ ಈ ಬ್ಲಾಗನ್ನು ಅರ್ಪಿಸುತ್ತಿದೇನೆ.

Monday, December 22, 2008

ಕಾಫಿ ಲುವಾಕ್ ಎಂಬ ದುಬಾರಿ ಕಾಫಿಯ ಸುತ್ತ....


ಇತ್ತೀಚಿಗೆ ನೋಡಿದ ಒಂದು ಆಂಗ್ಲ ಚಿತ್ರ ಒಂದರಲ್ಲಿ ("Bucket List") ಕಾಪಿಯ ಅತ್ಯಂತ ದುಬಾರಿಯಾದ ವಿದ "KopiLuwak" ನ ವರ್ಣನೆ ಇದೆ. ಕಾಫಿ ಇಲ್ಲದೆ ಹುಚ್ಚನಂಥಾಗುವ ನನಗೆ ಕೋಪಿ ಲುವಾಕ್ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಹಂಬಲ ಹಾಗೆ ಇತ್ತು. ನೆನ್ನೆ ಗೆಳೆಯ ಕರ್ಣ ಫೋನ್ ಮಾಡಿ - "ಮನು ಮಹಾರಾಜರೇ, ಕೋಪಿ ಲುವಾಕ್ ನ ಬಗ್ಗೆ ವಿಕಿಪೀಡಿಯದಲ್ಲಿ ವಿವರ ಪ್ರಕಟವಾಗಿದೆ, ದಯವಿಟ್ಟು ನೋಡಿ, ನೋಡಿದ ಮೇಲೆ ಕಾಫಿ ಕುಡಿಯುತೀರೊ ಇಲ್ಲವೊ, ನನಗೆ ತಿಳಿದಿಲ್ಲ, ಆದರೆ ನಿಮ್ಮ ಕಾಫಿ ಕುಡಿಯುವ ರೋಗಕ್ಕೆ/ಹವ್ಯಾಸಕ್ಕೆ ಕಡಿವಾಣ ಬೀಳುವುದು gurantee ಎಂದ", ನೋಡುವ ಎಂದು ಕರೆ ಕಟ್ ಮಾಡಿ, Kopi Luwak ಎಂದು google ಮಾಡಿದೆ, ನನ್ನ ಅಂತರ್ಜಾಲ ವಿಹಾರಿ ತಂದ ಮೊದಲ ಹುಡುಕಾಟ ತಂತಿ ಕಂಡು ಬೆರಗಾದೆ.


ಲೋಪಿ ಲುವಾಕ್ ಎಂಬುದು ಒಂದು ಬೆಕ್ಕಿನ ಜಾತಿ(civet cat)ಗೆ ಸೇರಿದ ಒಂದು ಪ್ರಾಣಿಯ Indirect Derivative. ಈ ಪ್ರಾಣಿಯುಇಂಡೋನೇಷ್ಯಾ, ಮಲೆಶೀಯಾದ ಅರಣ್ಯಗಳಲ್ಲಿ ಸಿಗುವ ಒಂದು ವಿರಳ ಬೆಕ್ಕು.ನೋಡಲು ಮುಂಗುಸಿಯ ಹಾಗೆ ಇರುವ ಒಂದು ಸಸ್ತನಿ, ಹಣ್ಣು, ಹಂಪಲು, ಗೆಡ್ಡೆಗಳನ್ನೂ ತಿಂದು ಬದುಕುವ ನಿರುಪದ್ರವಿ ಪ್ರಾಣಿ. ಕಾಫಿ ಹಣ್ಣುಗಳನ್ನು ತಿಂದು, ವಿಸರ್ಜಿಸುವ ಮಲದಲ್ಲಿ ಸಿಗುವ ಕಾಫಿ ಬೀಜಗಳನ್ನು ಹುರಿದು ಮಾಡುವ ಕಾಫಿ ಪುಡಿ ಎಂದು ತಿಳಿದು ಬಂತು.ಬೆಕ್ಕುಗಳು ತಾವು ವಿಹರಿಸುವ,ಜೀವಿಸುವ ಪ್ರಕೃತಿಯಲ್ಲಿ, ತಮ್ಮ ಗಡಿ ಗಳನ್ನೂ ಮಲ, ಮೂತ್ರ ವಿಸರ್ಜಿಸಿ ಗುರುತು ಮಾಡಿಕೊಳ್ಳುತವೆ . ಈ ವಿಧವಾಗಿ ವಿಸರ್ಜಿಸಿದ ಮಲವನ್ನು , ಅಲ್ಲಿನ ಬುಡಕಟ್ಟು ಜನ ಹೆಕ್ಕಿ ತಂದು, ತೊಳೆದು, ಬೀಜಗಳನ್ನು ಹುರಿದು,ಮಾಡಿದ ಕಾಫಿ ಪುಡಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ.ಈ ರೀತಿ ಸಿಗುವ ಪುಡಿ ಇಂದ ಮಾಡುವ ಕಾಫಿಗೆ ನಾವು ದಿನ ನಿತ್ಯ ಕುಡಿಯುವ ಕಾಫಿಗಿಂತ ಭಿನ್ನವಾದ ಒಗರು ಮತ್ತು ತನ್ನದೇ ಆದ ಒಂದು ಪರಿಮಳ ಇರುತ್ತದೆ, ಇದರ ಬೆಲೆ ಒಂದು ಕಪ್ಪಿಗೆ ಕೇವಲ ೨೨೫೦ ರುಪಾಯಿ. ಇನ್ನು ಈ ಉದ್ಯಮ ಕೇವಲ ಇಂಡೋನೇಷ್ಯಾ, ಮಲೇಶಿಯಾ ದಲ್ಲಿ ಮಾತ್ರ ಪ್ರಚಲಿತ ಕಾರಣ - ಈ ಪ್ರಾಣಿ ಇಲ್ಲಿ ಮಾತ್ರ ಸಿಗುವುದು, ಮತ್ತು ಪ್ರತಿ ವರ್ಷ ಜಾಗತಿಕ ಮಾರುಕಟ್ಟೆಗೆ ಸರಾಸರಿ ೪೫೦ ಕಿಲೋ ಮಾತ್ರ ಸಪ್ಲೈ ಆಗುವುದು. ಜಪಾನ್ ಮತ್ತು ಅಮೆರಿಕದಲ್ಲಿ ಇದಕ್ಕೆ ಬೇಡಿಕೆ ಜಾಸ್ತಿ. "ಕೋಪಿ ಲುವಾಕ್" ಎಂಬ ಪೇಯಕ್ಕೆ ಇದಕ್ಕೂ ಮಿಗಿಲಾದ ವರ್ಣನೆ ಸಾದ್ಯವಿಲ್ಲದ ರೀತಿ ವರ್ಣಿಸಿರುವ ವಿಕಿಪೀಡಿಯಾ ಗೆ, ಕರೆ ಮೂಲಕ ವಿಷಯ ತಿಳಿಸಿದ ಗೆಳೆಯ ಕರ್ಣನಿಗೂ ದೊಡ್ಡ ನಮಸ್ಕಾರ ಮಾಡುತ್ತ, ಕಾಫಿ ಕುಡಿಯಲು ಅಮೃತ್ ಕಡೆ ಹೊರತ್ತಿದೇನೆ ...ಮತ್ತೆ ಸಿಗುವ.


Thursday, December 4, 2008

ಮದನನ ಮರುನಾಮಕರಣ


ನನಗಾಗ ಸುಮಾರು ೬-೭ ವರುಷ ವಯಸ್ಸು , ಮೈಸೂರಿನಲ್ಲಿ ಅಜ್ಜಿ-ಅಜ್ಜನ ಮನೆಯಲ್ಲಿದ್ದು ಶಾಲೆಗೆ ಹೋಗಿ ಬರುತ್ತಿದ್ದೆ, ಬೇಸಿಗೆಯ ರಜಾ ಮುಗಿದು, ಶಾಲೆ ಪ್ರಾರಂಭವಾದ ಎರಡನೇ ದಿನ, ಮೊದಲನೆ period ಮುಗಿದು, ಎರಡನೇ period ನಲ್ಲಿ ಲತಾ ಮಿಸ್ಸು, ಗಣಿತ ಪಾಠ ಮಾಡುತ್ತಲಿದ್ದರು , ಶಾಲೆಯ peon ಜೋಸೆಫ್ ಬಂದು, ಮಿಸ್ಸಿಗೆ ಒಂದು ಸಣ್ಣ ಚೀಟಿಯನ್ನು ಕೊಟ್ಟ. ಲತಾ ಮಿಸ್ಸು ಒಂದು ಕ್ಷಣ ಪಾಠ ನಿಲ್ಲಿಸಿ, ಚೀಟಿ ನೋಡಿ, ಮಕ್ಕಳ ಕಡೆ ತಿರುಗಿ- "Children, we have a new boy coming to our class and his name is Madan Chandrakant Kulkarni" ಎಂದೊಡನೆ, peon ಜೋಸೆಫ್ ಹಿಂಬದಿ ನಿಂತಿದ್ದ ಒಬ್ಬ ಹುಡುಗ, ಹೆದರುತ್ತ ಮುಂದೆ ಬಂದು ನಿಂತ. ಲತಾ ಮಿಸ್ಸು ಅವನ ಹತ್ತಿರ ಹೋಗಿ, "my child welcome to the school" ಅಂಥ ಹೇಳಿ, ಆ ಹುಡುಗನನ್ನು ಜಾಗ ನೋಡಿ, ನನ್ನ ಮುಂದಿನ ಬೆಂಚಿನಲ್ಲಿ ಕುಳಿತು ಕೊಳ್ಳ ಮಾಡಿದರು.

ಅವತ್ತು ಶಾಲೆ ಮುಗಿದು, ನಾನು ಮನೆಗೆ ಬೇರೆ ಗೆಳೆಯರೊಡನೆ ಹೊರಟೆ. ಮದನ ಕೂಡ ನಮ್ಮ ಜೊತೆ ಗೂಡಿ ಬಂದ,ಅವನು ಕೂಡ ನಮ್ಮ ಮನೆಯ ರಸ್ತೆಯಲ್ಲೇ, ಎಡ ಬದಿಯ ಮೂರನೇ ಮನೆಯಲ್ಲಿ ಬಾಡಿಗೆಗೆ ಅವರ ಸಂಸಾರ ಹುಬ್ಬಳ್ಳಿ ಇಂದ ಬಂದಿತ್ತು.ದಿನಗಳು ಕಳೆದ ಹಾಗೆ, ಮದನ ನನ್ನ ಸ್ನೇಹಿತರ ಗುಂಪಿನಲ್ಲಿ ಒಬ್ಬನಾದ. ಹೀಗೆ ಒಂದು ದಿನ ಶನಿವಾರದ ಮಾರ್ನಿಂಗ್ ಕ್ಲಾಸ್ ಮುಗಿಸಿ, ಮನೆಯ ಹತ್ತಿರ ನಾನು, ಚೇತು ಮತ್ತು ಮದನ electrician ಕೆಂಪನ ಅಂಗಡಿಗೆ ಹೋಗಿ ಕಾಡಿ-ಬೇಡಿ ರೇಡಿಯೋ ಸ್ಪೀಕರ್ ಗಳಲ್ಲಿ ಸಿಗುವಂಥ ಒಂದು ಇಡಿ ಅಂಗೈ ಅಗಲದ magnet ಸಂಪಾದಿಸಿ ಯುದ್ಧ ಗೆದ್ದ ವೀರರಂತೆ ವಿಜಯೋತ್ಸವ ಆಚರಿಸುತ್ತಿರುವಾಗ, ಚೇತು "ಇದಕ್ಕೆ ರಸ್ತೆ ಮೂಲೆಯಲ್ಲಿರುವ ಇಮಾಂ ಸಾಬಿಯ cycle ಅಂಗಡಿಯ ನೆಲದ ಮೇಲೆ ಬಿದ್ದಿರುವ ballbearing ಚೆಂಡುಗಳು ಸಿಕ್ಕರೆ ಅದರ ಮಜಾನೆ ಬೇರೆ ಎಂದ", ಎಲ್ಲರೋ ಒಡಗೂಡಿ, ಇಮಾಂ ಸಾಬಿಯ ಕ್ಯ್ಕ್ಲೆ ಅಂಗಡಿಗೆ ಹೋಗಿ ಮತ್ತೆ ಕಾಡಿ- ಬೇಡಿ ಒಂದಸ್ತು ಉಕ್ಕಿನ ಗುಂಡುಗಳನ್ನು ಸಂಪಾದಿಸಿದೆವು. ಹೀಗೆ ಸಂಪಾದಿಸಿದ ಗುಂಡುಗಳನ್ನು, ಮನೆಗೆ ತಂದು, ನಿರ್ಮಾ ಪುಡಿ ಹಾಕಿ, ಪಳ ಪಳ ಹೊಳೆಯುವ ಹಾಗೆ ಮಾಡಿ, ಸ್ಪೀಕರ್ magnet ಗೆ ಅಂಟಿಸಿ ಕೊಂಡು ಆಟವಾಡುವಾಗ ಯಾವುದೊ ಒಂದು ಕ್ಷಣದಲ್ಲಿ ಒಂದು ಗುಂಡು ಮದನನ ಕಿವಿ ಹೂಕು ಕೂತು ಬಿಟ್ಟಿತು. ಮೊದಮೊದಲು ನಾನು, ಚೇತು ಕೂಡಿ ಅದನ್ನು magnet ಉಪಯೋಗಿಸಿ ತೆಗೆಯ ಪ್ರಯತ್ನ ಮಾಡಿದೆವು, ಅದು ಜಗ್ಗಲಿಲ್ಲ.ಕೊನೆಗೆ ಮದನನನ್ನು ಅವನ ಅಪ್ಪ, ಅಮ್ಮ ಕೂಡಿ ಎಂತ specalist ಹತ್ತಿರ ಕರೆದು ಕೊಂಡು ಹೋದರು .

ಅವರು ಅದನ್ನು ಒಂದು ಸಣ್ಣ ಗುಗ್ಗೆ ತೆಗೆಯುವ ಸಾಧನ ಉಪಯೋಗಿಸಿ ತೆಗೆದು, ಮದನನ ಬಲ ಕಿವಿಗೆ ಉಪಚಾರ ಮಾಡಿ ಕಿವಿ ಮುಚ್ಚುವ ಹಾಗೆ ಪಟ್ಟಿ ಬಿಗಿದರು. ಮದನ ಮುಂದಿನ ದಿನ ಶಾಲೆಗೆ ಬಂದಾಗ, ಒಂದು ಕಿವಿಯಲ್ಲಿ ಮಾತ್ರ ಕೇಳಿಸಿಕೊಳ್ಳನವನಾಗಿದ್ದ. ಲತಾ ಮಿಸ್ಸು ಅವನ್ನನ್ನು ಮುಂದಿನ ಬೆಂಚಿನಲ್ಲಿ ಕುಳ್ಳರಿಸಿ ಪಾಠ ಶುರು ಮಾಡಿದರು. ಮಧ್ಯಾನದ lunch ಬ್ರೇಕ್ ನಲ್ಲಿ baal bearing ಪುರಾಣ ಹೇಳಲು ಮಾಡಿ ಮದನ ಹೋಗಿ ಗೆಳೆಯರ ಬಳಗದಲ್ಲಿ BALL BEARING ಮದನ ಎಂದು ಕರೆಯಲ್ಪಡನಾದ.